<p><strong>ಬೇಲೂರು (ಹಾಸನ ಜಿಲ್ಲೆ):</strong> ತಾಲ್ಲೂಕಿನ ಜಗಬೋರನಹಳ್ಳಿಯಲ್ಲಿ ಭಾನುವಾರ ಮದಗಜಗಳು ಕಾದಾಡಿದ್ದು, ದೈತ್ಯ ಕಾಡಾನೆ ‘ಭೀಮ’ನ ಒಂದು ದಂತ ತುಂಡಾಗಿದೆ.</p>.<p>ಬಿಕ್ಕೋಡು ಹೋಬಳಿಯಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಹುಡುಕಿಕೊಂಡು ‘ಭೀಮ’ ಆನೆ ಹೊರಟಿತ್ತು. ಸಾಕಾನೆಯಂತೆ ರಸ್ತೆಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ಆನೆಯನ್ನು ಜನರು ವೀಕ್ಷಿಸುತ್ತಾ ನಿಂತಿದ್ದರು. ಇನ್ನೊಂದೆಡೆ ಆನೆ ಕಾರ್ಯಪಡೆಯ ತಂಡ ಜೀಪಿನೊಂದಿಗೆ ಆನೆಗೆ ಎಸ್ಕಾರ್ಟ್ ನೀಡಿತ್ತು.</p>.<p>ಇತ್ತ ಜಗಬೋರನಹಳ್ಳಿ ಗ್ರಾಮಕ್ಕೆ ಬರುತ್ತಿದ್ದಂತೆಯೇ ‘ಭೀಮ’ನಿಗೆ ಮತ್ತೊಂದು ಆನೆ ‘ಕ್ಯಾಪ್ಟನ್’ ಎದುರಾಗಿದೆ. ಈ ವೇಳೆ ಎರಡೂ ಆನೆಗಳ ನಡುವೆ ಕಾದಾಟ ಶುರುವಾಗಿದೆ. ಇದರಿಂದ ಭೀಮನ ಒಂದು ದಂತ ಮುರಿದಿದೆ. ಮದದಲ್ಲಿದ್ದ ಕಾಡಾನೆ ‘ಕ್ಯಾಪ್ಟನ್’, ಮನೆಯ ಎದುರು ಇಟ್ಟಿದ್ದ ಪ್ಲಾಸ್ಟಿಕ್ ಪೈಪ್ ಹಾಗೂ ನೀರು ತುಂಬಿದ್ದ ಡ್ರಮ್ ಒಡೆದು ಹಾಕಿದೆ. ಪಕ್ಕದಲ್ಲಿದ್ದ ಚಕ್ಕಡಿಗೂ ಹಾನಿ ಮಾಡಿದೆ.</p>.<p>ಕಾಳಗ ನೋಡುತ್ತಿದ್ದ ಗ್ರಾಮಸ್ಥರು ಭೀತಿಯಿಂದ, ‘ಹೋಗು ನಮ್ಮಪ್ಪ ಸಾಕು ನಮ್ಮಪ್ಪ’ ಎಂದು ಕೂಗುತ್ತಿದ್ದರು. ಕಾರ್ಯಪಡೆ ಸಿಬ್ಬಂದಿ ಆನೆಗಳನ್ನು ಪ್ರತ್ಯೇಕಿಸಿ ಓಡಿಸಿ ಜಗಳಕ್ಕೆ ಅಂತ್ಯಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇಲೂರು (ಹಾಸನ ಜಿಲ್ಲೆ):</strong> ತಾಲ್ಲೂಕಿನ ಜಗಬೋರನಹಳ್ಳಿಯಲ್ಲಿ ಭಾನುವಾರ ಮದಗಜಗಳು ಕಾದಾಡಿದ್ದು, ದೈತ್ಯ ಕಾಡಾನೆ ‘ಭೀಮ’ನ ಒಂದು ದಂತ ತುಂಡಾಗಿದೆ.</p>.<p>ಬಿಕ್ಕೋಡು ಹೋಬಳಿಯಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಹುಡುಕಿಕೊಂಡು ‘ಭೀಮ’ ಆನೆ ಹೊರಟಿತ್ತು. ಸಾಕಾನೆಯಂತೆ ರಸ್ತೆಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ಆನೆಯನ್ನು ಜನರು ವೀಕ್ಷಿಸುತ್ತಾ ನಿಂತಿದ್ದರು. ಇನ್ನೊಂದೆಡೆ ಆನೆ ಕಾರ್ಯಪಡೆಯ ತಂಡ ಜೀಪಿನೊಂದಿಗೆ ಆನೆಗೆ ಎಸ್ಕಾರ್ಟ್ ನೀಡಿತ್ತು.</p>.<p>ಇತ್ತ ಜಗಬೋರನಹಳ್ಳಿ ಗ್ರಾಮಕ್ಕೆ ಬರುತ್ತಿದ್ದಂತೆಯೇ ‘ಭೀಮ’ನಿಗೆ ಮತ್ತೊಂದು ಆನೆ ‘ಕ್ಯಾಪ್ಟನ್’ ಎದುರಾಗಿದೆ. ಈ ವೇಳೆ ಎರಡೂ ಆನೆಗಳ ನಡುವೆ ಕಾದಾಟ ಶುರುವಾಗಿದೆ. ಇದರಿಂದ ಭೀಮನ ಒಂದು ದಂತ ಮುರಿದಿದೆ. ಮದದಲ್ಲಿದ್ದ ಕಾಡಾನೆ ‘ಕ್ಯಾಪ್ಟನ್’, ಮನೆಯ ಎದುರು ಇಟ್ಟಿದ್ದ ಪ್ಲಾಸ್ಟಿಕ್ ಪೈಪ್ ಹಾಗೂ ನೀರು ತುಂಬಿದ್ದ ಡ್ರಮ್ ಒಡೆದು ಹಾಕಿದೆ. ಪಕ್ಕದಲ್ಲಿದ್ದ ಚಕ್ಕಡಿಗೂ ಹಾನಿ ಮಾಡಿದೆ.</p>.<p>ಕಾಳಗ ನೋಡುತ್ತಿದ್ದ ಗ್ರಾಮಸ್ಥರು ಭೀತಿಯಿಂದ, ‘ಹೋಗು ನಮ್ಮಪ್ಪ ಸಾಕು ನಮ್ಮಪ್ಪ’ ಎಂದು ಕೂಗುತ್ತಿದ್ದರು. ಕಾರ್ಯಪಡೆ ಸಿಬ್ಬಂದಿ ಆನೆಗಳನ್ನು ಪ್ರತ್ಯೇಕಿಸಿ ಓಡಿಸಿ ಜಗಳಕ್ಕೆ ಅಂತ್ಯಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>