ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹಾವೇರಿ | ಕಮಿಷನ್‌ ದಂಧೆಗೆ ಬೇಸತ್ತ ರೈತ: ಮಾರುಕಟ್ಟೆ ಖಾಲಿ

ಕಾರ್ಖಾನೆಗಳಿಗೆ ಹತ್ತಿ ಮಾರುತ್ತಿರುವ ಅನ್ನದಾತ: ಮಾರುಕಟ್ಟೆಯಿಂದ ದೂರವಾದ ರೈತರು
Published : 28 ಫೆಬ್ರುವರಿ 2025, 6:09 IST
Last Updated : 28 ಫೆಬ್ರುವರಿ 2025, 6:09 IST
ಫಾಲೋ ಮಾಡಿ
Comments
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಲ್ಲಾಪುರದ ರೈತರೊಬ್ಬರು ಕಾರ್ಖಾನೆಗೆ ಸಾಗಿಸಲು ಹತ್ತಿಯನ್ನು ಸಿದ್ಧಪಡಿಸಿದರು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಲ್ಲಾಪುರದ ರೈತರೊಬ್ಬರು ಕಾರ್ಖಾನೆಗೆ ಸಾಗಿಸಲು ಹತ್ತಿಯನ್ನು ಸಿದ್ಧಪಡಿಸಿದರು
₹100ಕ್ಕೆ ₹6 ಕಮಿಷನ್ ಎಕರೆಗೆ 5 ಕ್ವಿಂಟಲ್‌ನಿಂದ 10 ಕ್ವಿಂಟಲ್‌ ಹತ್ತಿಯಿಂದ ರೈತರು ವಿಮುಖ
ಖರ್ಚು ಹೆಚ್ಚಿದ್ದರೂ ಹತ್ತಿ ಬೆಳೆಯುತ್ತಿದ್ದೇವೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ಕೃಷಿ ಉತ್ಪನ್ನಗಳಿಗೆ ಕಮಿಷನ್ ಮುಕ್ತ ವ್ಯವಹಾರ ನಡೆಯಬೇಕು‌
ಕುತುಬುದ್ದೀನ್ ಅಲ್ಲಾಪುರ
‘ಎಕರೆಗೆ ₹40 ಸಾವಿರ ಖರ್ಚು’
‘ಹತ್ತಿ ಬೆಳೆಯಲು ಖರ್ಚು ಹೆಚ್ಚಿದೆ. ಬಿತ್ತನೆಯಿಂದ ಹಿಡಿದು ಕಟಾವು ಮಾಡುವವರೆಗೂ ಸುಮಾರು ₹ 30 ಸಾವಿರದಿಂದ ₹ 40 ಸಾವಿರ ಖರ್ಚಾಗುತ್ತದೆ. ಉಳಿದಂತೆ ಗೋವಿನ ಜೋಳ ಹಾಗೂ ಇತರೆ ಬೆಳೆಗೆ ಹೆಚ್ಚು ಖರ್ಚು ಆಗುವುದಿಲ್ಲ. ಅದೇ ಕಾರಣಕ್ಕೆ ರೈತರು ಹತ್ತಿ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹಾನಗಲ್ ತಾಲ್ಲೂಕಿನ ಅಲ್ಲಾಪುರ ಗ್ರಾಮದ ರೈತ ಕುತುಬುದ್ದೀನ್ ಹೇಳಿದರು. ‘ಅತೀ ಹೆಚ್ಚು ಹತ್ತಿ ಬೆಳೆಯುತ್ತಿದ್ದ ಜಿಲ್ಲೆ ಹಾವೇರಿಯಾಗಿತ್ತು. ಆದರೆ ಈಗ ಹತ್ತಿ ಬೆಳೆ ಪ್ರದೇಶ ಕಡಿಮೆಯಾಗುತ್ತಿದೆ. ಬಟ್ಟೆ ಹಾಗೂ ಇತರೆ ಉತ್ಪನ್ನಗಳ ತಯಾರಿಕೆಗೆ ಹತ್ತಿ ಬೇಕು. ಆದರೆ ರೈತರು ಹತ್ತಿ ಬೆಳೆಯಿಂದ ಕ್ರಮೇಣ ವಿಮುಖರಾಗುತ್ತಿದ್ದಾರೆ. ಹತ್ತಿಗೆ ಸದ್ಯ ಕ್ವಿಂಟಲ್‌ಗೆ ₹ 6 ಸಾವಿರದಿಂದ ₹ 8 ಸಾವಿರ ಬೆಲೆಯಿದೆ. ಇದರಿಂದ ಖರ್ಚು ಸಹ ವಾಪಸು ಬರುವುದಿಲ್ಲ. ಸೂಕ್ತ ಬೆಲೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಹತ್ತಿ ಬೆಳೆಯೇ ನಶಿಸಿ ಹೋಗಬಹುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT