<p><strong>ಹಾನಗಲ್:</strong> ಬೇಡಿಕೆಗಳ ಈಡೇರಿಗಾಗಿ ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ದಸ್ತಾವೇಜು (ಪತ್ರ) ಬರಹಗಾರರ ಮುಷ್ಕರ ಶುಕ್ರವಾರ ಸಂಜೆ ಅಂತ್ಯಗೊಂಡಿದ್ದು, ಮುಂದಿನ ಹೋರಾಟಕ್ಕೆ ಬೆಳೆಗಾವಿಗೆ ತೆರಳುವ ಸಿದ್ಧತೆಗಳು ನಡೆದಿವೆ.</p>.<p>‘ರಾಜ್ಯ ದಸ್ತಾವೇಜು ಬರಹಗಾರರ ಒಕ್ಕೂಟದ ಆದೇಶದ ಮೇರೆಗೆ ಬೆಳಗಾವಿ ಸುವರ್ಣಸೌಧ ಎದುರು ಡಿ. 16 ರಂದು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುತ್ತದೆ’ ಎಂದು ದಸ್ತಾವೇಜು ಬರಹಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಗಾಜೀಪೂರ ಹೇಳಿದರು.</p>.<p>‘ರಾಜ್ಯದಲ್ಲಿ ಸುಮಾರ 16 ಸಾವಿರ ದಸ್ತಾವೇಜು ಬರಹಗಾರರು ಇದ್ದಾರೆ. ಈಗ ಸರ್ಕಾರದ ನೀತಿಯಿಂದ ವೃತ್ತಿಯಲ್ಲಿ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವ ದಸ್ತಾವೇಜು ಬರಹಗಾರರ ನೆರವಿಗೆ ಸರ್ಕಾರ ಧಾವಿಸಬೇಕು’ ಎಂದು ಆಗ್ರಹಿಸಿದರು.</p>.<p>ದಸ್ತಾವೇಜು ಬರಹಗಾರರಾದ ಕೆ.ಎಸ್.ಕುಲಕರ್ಣಿ, ನಾಗರಾಜ ಚಂದಾಪೂರ, ಎ.ಎ.ಅತ್ತಾರ, ಎಂ.ಎಚ್.ಗುಲಾಮಲಿಶಾ, ಪಿ.ಎಂ.ಕಬ್ಬೂರ, ಬಿ.ಎಚ್.ರಾಮಜೀ, ಎನ್.ಎಸ್.ಪಾಟೀಲ, ಸುರೇಶ ಮುಸರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ಬೇಡಿಕೆಗಳ ಈಡೇರಿಗಾಗಿ ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ದಸ್ತಾವೇಜು (ಪತ್ರ) ಬರಹಗಾರರ ಮುಷ್ಕರ ಶುಕ್ರವಾರ ಸಂಜೆ ಅಂತ್ಯಗೊಂಡಿದ್ದು, ಮುಂದಿನ ಹೋರಾಟಕ್ಕೆ ಬೆಳೆಗಾವಿಗೆ ತೆರಳುವ ಸಿದ್ಧತೆಗಳು ನಡೆದಿವೆ.</p>.<p>‘ರಾಜ್ಯ ದಸ್ತಾವೇಜು ಬರಹಗಾರರ ಒಕ್ಕೂಟದ ಆದೇಶದ ಮೇರೆಗೆ ಬೆಳಗಾವಿ ಸುವರ್ಣಸೌಧ ಎದುರು ಡಿ. 16 ರಂದು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುತ್ತದೆ’ ಎಂದು ದಸ್ತಾವೇಜು ಬರಹಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಗಾಜೀಪೂರ ಹೇಳಿದರು.</p>.<p>‘ರಾಜ್ಯದಲ್ಲಿ ಸುಮಾರ 16 ಸಾವಿರ ದಸ್ತಾವೇಜು ಬರಹಗಾರರು ಇದ್ದಾರೆ. ಈಗ ಸರ್ಕಾರದ ನೀತಿಯಿಂದ ವೃತ್ತಿಯಲ್ಲಿ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವ ದಸ್ತಾವೇಜು ಬರಹಗಾರರ ನೆರವಿಗೆ ಸರ್ಕಾರ ಧಾವಿಸಬೇಕು’ ಎಂದು ಆಗ್ರಹಿಸಿದರು.</p>.<p>ದಸ್ತಾವೇಜು ಬರಹಗಾರರಾದ ಕೆ.ಎಸ್.ಕುಲಕರ್ಣಿ, ನಾಗರಾಜ ಚಂದಾಪೂರ, ಎ.ಎ.ಅತ್ತಾರ, ಎಂ.ಎಚ್.ಗುಲಾಮಲಿಶಾ, ಪಿ.ಎಂ.ಕಬ್ಬೂರ, ಬಿ.ಎಚ್.ರಾಮಜೀ, ಎನ್.ಎಸ್.ಪಾಟೀಲ, ಸುರೇಶ ಮುಸರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>