<p><strong>ಕಲಬುರಗಿ</strong>: ಗೃಹಿಣಿಗೆ ವರದಕ್ಷಿಣೆ ಕಿರುಕುಳ ಕೊಟ್ಟು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಸೆಷೆನ್ಸ್ ನ್ಯಾಯಾಲಯವು ಐವರಿಗೆ ಜೈಲು ಶಿಕ್ಷೆಯನ್ನು ವಿಧಿಸಿದೆ.</p>.<p>ಅಂಬಿಕಾ ನಗರದ ಮೀನಾಕ್ಷಿ ಆನಂದ ಆತ್ಮಹತ್ಯೆ ಮಾಡಿಕೊಂಡಿದ್ದ ಗೃಹಿಣಿ. ಆಕೆಯ ಪತಿ ಆನಂದ ಓಂಪ್ರಕಾಶ, ಅತ್ತೆ ಸುಮಂಗಲಾ ಓಂಪ್ರಕಾಶ, ಮಾವ ಓಂಪ್ರಕಾಶ ಶಾಂತಲಿಂಗಪ್ಪ, ಪೂಜಾ ಓಂಪ್ರಕಾಶ ಹಾಗೂ ಜಮದಗ್ನಿ ಓಂಪ್ರಕಾಶ ಶಿಕ್ಷೆಗೆ ಒಳಗಾದವರು.</p>.<p>ಅಕ್ಕಮಹಾದೇವಿ ಕಾಲೊನಿ ನಿವಾಸಿ ಬಸವರಾಜ ಪುತ್ರಿಯಾದ ಮೀನಾಕ್ಷಿ ಅವರು ಆನಂದ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮದುವೆ ಬಳಿಕ ತವರು ಮನೆಯಿಂದ ಹಣ ತರುವಂತೆ ಪತಿಯ ಕುಟುಂಬಸ್ಥರು ಕಿರುಕುಳ ಕೊಟ್ಟಿದ್ದರು. ಮೀನಾಕ್ಷಿ ತಂದೆ ₹ 50 ಸಾವಿರ ತಂದು ಕೊಟ್ಟಿದ್ದರೂ ಕಿರುಕುಳವನ್ನು ಮುಂದುವರಿಸಿದ್ದರು. ಇದರಿಂದ ನೊಂದ ಮೀನಾಕ್ಷಿ ಅವರು ಮೂರ್ನಾಲ್ಕು ತಿಂಗಳು ತವರು ಮನೆಯಲ್ಲಿದ್ದರು.</p>.<p>ಮಾವನ ಮನೆಗೆ ಬಂದ ಆನಂದ, ಪತ್ನಿ ಮೀನಾಕ್ಷಿಯನ್ನು ತಮ್ಮ ಮನೆಗೆ ಕರೆದುಕೊಂಡ ಹೋಗಿ, ಆಕೆಯ ಮೇಲೆ ಹಲ್ಲೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿ ಮೀನಾಕ್ಷಿ, ತನ್ನ ಸಾವಿಗೆ ಈ ಐವರು ಕಾರಣವೆಂದು ಡೆತ್ ನೋಟ್ ಬರೆದಿಟ್ಟಿದ್ದರು. </p>.<p>ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಆಗಿನ ಪಿಐ ವಿಜಯಲಕ್ಷ್ಮಿ ಅವರು ತನಿಖೆ ಮಾಡಿ, ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.</p>.<p>ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಆನಂದ ಓಂಪ್ರಕಾಶಗೆ 10 ವರ್ಷ ಜೈಲು ಶಿಕ್ಷೆ ಹಾಗೂ ₹30 ಸಾವಿರ ದಂಡ, ಸುಮಂಗಲಾ, ಓಂಪ್ರಕಾಶ, ಪೂಜಾ ಹಾಗೂ ಜಮದಗ್ನಿಗೆ ತಲಾ ಮೂರು ವರ್ಷ ಜೈಲು ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.</p>.<p>ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹಯಾಳಪ್ಪ ಎನ್.ಬಳಬಟ್ಟಿ ಅವರು ವಾದ ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಗೃಹಿಣಿಗೆ ವರದಕ್ಷಿಣೆ ಕಿರುಕುಳ ಕೊಟ್ಟು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಸೆಷೆನ್ಸ್ ನ್ಯಾಯಾಲಯವು ಐವರಿಗೆ ಜೈಲು ಶಿಕ್ಷೆಯನ್ನು ವಿಧಿಸಿದೆ.</p>.<p>ಅಂಬಿಕಾ ನಗರದ ಮೀನಾಕ್ಷಿ ಆನಂದ ಆತ್ಮಹತ್ಯೆ ಮಾಡಿಕೊಂಡಿದ್ದ ಗೃಹಿಣಿ. ಆಕೆಯ ಪತಿ ಆನಂದ ಓಂಪ್ರಕಾಶ, ಅತ್ತೆ ಸುಮಂಗಲಾ ಓಂಪ್ರಕಾಶ, ಮಾವ ಓಂಪ್ರಕಾಶ ಶಾಂತಲಿಂಗಪ್ಪ, ಪೂಜಾ ಓಂಪ್ರಕಾಶ ಹಾಗೂ ಜಮದಗ್ನಿ ಓಂಪ್ರಕಾಶ ಶಿಕ್ಷೆಗೆ ಒಳಗಾದವರು.</p>.<p>ಅಕ್ಕಮಹಾದೇವಿ ಕಾಲೊನಿ ನಿವಾಸಿ ಬಸವರಾಜ ಪುತ್ರಿಯಾದ ಮೀನಾಕ್ಷಿ ಅವರು ಆನಂದ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮದುವೆ ಬಳಿಕ ತವರು ಮನೆಯಿಂದ ಹಣ ತರುವಂತೆ ಪತಿಯ ಕುಟುಂಬಸ್ಥರು ಕಿರುಕುಳ ಕೊಟ್ಟಿದ್ದರು. ಮೀನಾಕ್ಷಿ ತಂದೆ ₹ 50 ಸಾವಿರ ತಂದು ಕೊಟ್ಟಿದ್ದರೂ ಕಿರುಕುಳವನ್ನು ಮುಂದುವರಿಸಿದ್ದರು. ಇದರಿಂದ ನೊಂದ ಮೀನಾಕ್ಷಿ ಅವರು ಮೂರ್ನಾಲ್ಕು ತಿಂಗಳು ತವರು ಮನೆಯಲ್ಲಿದ್ದರು.</p>.<p>ಮಾವನ ಮನೆಗೆ ಬಂದ ಆನಂದ, ಪತ್ನಿ ಮೀನಾಕ್ಷಿಯನ್ನು ತಮ್ಮ ಮನೆಗೆ ಕರೆದುಕೊಂಡ ಹೋಗಿ, ಆಕೆಯ ಮೇಲೆ ಹಲ್ಲೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿ ಮೀನಾಕ್ಷಿ, ತನ್ನ ಸಾವಿಗೆ ಈ ಐವರು ಕಾರಣವೆಂದು ಡೆತ್ ನೋಟ್ ಬರೆದಿಟ್ಟಿದ್ದರು. </p>.<p>ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಆಗಿನ ಪಿಐ ವಿಜಯಲಕ್ಷ್ಮಿ ಅವರು ತನಿಖೆ ಮಾಡಿ, ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.</p>.<p>ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಆನಂದ ಓಂಪ್ರಕಾಶಗೆ 10 ವರ್ಷ ಜೈಲು ಶಿಕ್ಷೆ ಹಾಗೂ ₹30 ಸಾವಿರ ದಂಡ, ಸುಮಂಗಲಾ, ಓಂಪ್ರಕಾಶ, ಪೂಜಾ ಹಾಗೂ ಜಮದಗ್ನಿಗೆ ತಲಾ ಮೂರು ವರ್ಷ ಜೈಲು ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.</p>.<p>ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹಯಾಳಪ್ಪ ಎನ್.ಬಳಬಟ್ಟಿ ಅವರು ವಾದ ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>