<p><strong>ಪೊನ್ನಂಪೇಟೆ</strong>: ಮಾಯಮುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಅಮ್ಮಕೊಡವ ಸಮುದಾಯದ ಕೌಟುಂಬಿಕ ಬಲ್ಯಂಡ ಕ್ರಿಕೆಟ್ ಟೂರ್ನಿಯಲ್ಲಿ ಅಮ್ಮತ್ತೀರ ತಂಡ ಚಾಂಪಿಯನ್ ಆಯಿತು.</p>.<p>ಫೈನಲ್ ಪಂದ್ಯದಲ್ಲಿ ಆಂಡಮಾಡ ತಂಡ ಸೋತು ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.</p>.<p>ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಂಡಮಾಡ ತಂಡವು 8 ಒವರ್ಗೆ 2 ವಿಕೆಟ್ ನಷ್ಟಕ್ಕೆ 63 ರನ್ ದಾಖಲಿಸಿತು. ಅಮ್ಮತ್ತೀರ ತಂಡವು 3 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.</p>.<p>ಕ್ವಾರ್ಟರ್ ಫೈನಲ್ನಲ್ಲಿ ಬಲ್ಯಂಡ ತಂಡವು ಮಂಜುವಂಡ ತಂಡದ ವಿರುದ್ದ 6 ವಿಕೆಟ್ಗಳ ಗೆಲುವು ಪಡೆಯಿತು. ಅಮ್ಮತ್ತೀರ ತಂಡವು ಪುತ್ತಾಮನೆ ತಂಡವನ್ನು 10 ವಿಕೆಟ್ಗಳಿಂದ ಸೋಲಿಸಿ ಸೆಮಿಫೈನಲ್ಗೆ ತಲುಪಿತು.</p>.<p>ಆಂಡಮಾಡ ತಂಡವು ಚೊಟ್ಟೋಳಿಯಮ್ಮಂಡ ವಿರುದ್ದ 9 ವಿಕೆಟ್ ಜಯ ಪಡೆಯಿತು. ಸೆಮಿ ಫೈನಲ್ನಲ್ಲಿ ಅಮ್ಮತ್ತೀರ ತಂಡವು ಆತಿಥೇಯ ಬಲ್ಯಂಡ ತಂಡದ ವಿರುದ್ದ 6 ವಿಕೆಟ್ ಜಯ ಸಾಧಿಸಿತು. 2ನೇ ಸೆಮಿ ಫೈನಲ್ನಲ್ಲಿ ಆಂಡಮಾಡ ತಂಡವು ಕೊಂಡಿಜಮ್ಮಂಡ ವಿರುದ್ದ 8 ವಿಕೆಟ್ ಅಂತರದಲ್ಲಿ ಗೆಲುವು<br />ಪಡೆಯಿತು.</p>.<p>ಆಂಡಮಾಡ ಪವನ್ ಉತ್ತಮ ಬೌಲರ್ ಪ್ರಶಸ್ತಿ ಪಡೆದರು. ಸರಣಿ ಶ್ರೇಷ್ಠ ಮತ್ತು ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಅಮ್ಮತ್ತೀರ ತಂಡದ ಗಣೇಶ್ ಪಡೆದುಕೊಂಡರು.</p>.<p>ಕಮಟೆ ಮಹಾದೇವರ ದೇವಸ್ಥಾನ ಸಮಿತಿ ಅಧ್ಯಕ್ಷ ಸಣ್ಣುವಂಡ ಬಿ ರಮೇಶ್, ಕೊಡವ ಅಕಾಡೆಮಿ ಮಾಜಿ ಸದಸ್ಯ ಉಮೇಶ್ ಕೇಚಮಯ್ಯ, ಹಿರಿಯರಾದ ಅಮ್ಮತ್ತೀರ ರೇವತಿ ಪರಮೇಶ್ವರ್, ಮಾಯಮುಡಿ ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡೀರ ಪ್ರದೀಪ್ ಪೂವಯ್ಯ ಬಹುಮಾನ ವಿತರಿಸಿದರು.</p>.<p>ಬಲ್ಯಂಡ ಕುಟುಂಬ ಅಧ್ಯಕ್ಷ ಬಲ್ಯಂಡ ಎಸ್ ಪ್ರತಾಪ್ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು.<br />ಅಮ್ಮಕೊಡವ ಜನಾಂಗದ ಕೌಟುಂಬಿಕ ಕ್ರಿಕೆಟ್ ಕಪ್ ಮುಂದಿನ ವರ್ಷ ಹೆಮ್ಮಚ್ಚಿಮನೆ ಕುಟುಂಬ ನಡೆಸುವುದಾಗಿ ಘೋಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೊನ್ನಂಪೇಟೆ</strong>: ಮಾಯಮುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಅಮ್ಮಕೊಡವ ಸಮುದಾಯದ ಕೌಟುಂಬಿಕ ಬಲ್ಯಂಡ ಕ್ರಿಕೆಟ್ ಟೂರ್ನಿಯಲ್ಲಿ ಅಮ್ಮತ್ತೀರ ತಂಡ ಚಾಂಪಿಯನ್ ಆಯಿತು.</p>.<p>ಫೈನಲ್ ಪಂದ್ಯದಲ್ಲಿ ಆಂಡಮಾಡ ತಂಡ ಸೋತು ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.</p>.<p>ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಂಡಮಾಡ ತಂಡವು 8 ಒವರ್ಗೆ 2 ವಿಕೆಟ್ ನಷ್ಟಕ್ಕೆ 63 ರನ್ ದಾಖಲಿಸಿತು. ಅಮ್ಮತ್ತೀರ ತಂಡವು 3 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.</p>.<p>ಕ್ವಾರ್ಟರ್ ಫೈನಲ್ನಲ್ಲಿ ಬಲ್ಯಂಡ ತಂಡವು ಮಂಜುವಂಡ ತಂಡದ ವಿರುದ್ದ 6 ವಿಕೆಟ್ಗಳ ಗೆಲುವು ಪಡೆಯಿತು. ಅಮ್ಮತ್ತೀರ ತಂಡವು ಪುತ್ತಾಮನೆ ತಂಡವನ್ನು 10 ವಿಕೆಟ್ಗಳಿಂದ ಸೋಲಿಸಿ ಸೆಮಿಫೈನಲ್ಗೆ ತಲುಪಿತು.</p>.<p>ಆಂಡಮಾಡ ತಂಡವು ಚೊಟ್ಟೋಳಿಯಮ್ಮಂಡ ವಿರುದ್ದ 9 ವಿಕೆಟ್ ಜಯ ಪಡೆಯಿತು. ಸೆಮಿ ಫೈನಲ್ನಲ್ಲಿ ಅಮ್ಮತ್ತೀರ ತಂಡವು ಆತಿಥೇಯ ಬಲ್ಯಂಡ ತಂಡದ ವಿರುದ್ದ 6 ವಿಕೆಟ್ ಜಯ ಸಾಧಿಸಿತು. 2ನೇ ಸೆಮಿ ಫೈನಲ್ನಲ್ಲಿ ಆಂಡಮಾಡ ತಂಡವು ಕೊಂಡಿಜಮ್ಮಂಡ ವಿರುದ್ದ 8 ವಿಕೆಟ್ ಅಂತರದಲ್ಲಿ ಗೆಲುವು<br />ಪಡೆಯಿತು.</p>.<p>ಆಂಡಮಾಡ ಪವನ್ ಉತ್ತಮ ಬೌಲರ್ ಪ್ರಶಸ್ತಿ ಪಡೆದರು. ಸರಣಿ ಶ್ರೇಷ್ಠ ಮತ್ತು ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಅಮ್ಮತ್ತೀರ ತಂಡದ ಗಣೇಶ್ ಪಡೆದುಕೊಂಡರು.</p>.<p>ಕಮಟೆ ಮಹಾದೇವರ ದೇವಸ್ಥಾನ ಸಮಿತಿ ಅಧ್ಯಕ್ಷ ಸಣ್ಣುವಂಡ ಬಿ ರಮೇಶ್, ಕೊಡವ ಅಕಾಡೆಮಿ ಮಾಜಿ ಸದಸ್ಯ ಉಮೇಶ್ ಕೇಚಮಯ್ಯ, ಹಿರಿಯರಾದ ಅಮ್ಮತ್ತೀರ ರೇವತಿ ಪರಮೇಶ್ವರ್, ಮಾಯಮುಡಿ ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡೀರ ಪ್ರದೀಪ್ ಪೂವಯ್ಯ ಬಹುಮಾನ ವಿತರಿಸಿದರು.</p>.<p>ಬಲ್ಯಂಡ ಕುಟುಂಬ ಅಧ್ಯಕ್ಷ ಬಲ್ಯಂಡ ಎಸ್ ಪ್ರತಾಪ್ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು.<br />ಅಮ್ಮಕೊಡವ ಜನಾಂಗದ ಕೌಟುಂಬಿಕ ಕ್ರಿಕೆಟ್ ಕಪ್ ಮುಂದಿನ ವರ್ಷ ಹೆಮ್ಮಚ್ಚಿಮನೆ ಕುಟುಂಬ ನಡೆಸುವುದಾಗಿ ಘೋಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>