<p><strong>ಮಡಿಕೇರಿ:</strong> ಇಲ್ಲಿನ ಗಾಂಧಿ ಮೈದಾನಕ್ಕೆ ‘ಬಾವ’ ಬರುವ ಹೊತ್ತಿಗೆ ಮಂಗಳವಾರ 10.30 ದಾಟಿತ್ತು. ಸಂಜೆಯಿಂದಲೂ ಕಾತರದಿಂದ ಕಾಯುತ್ತಿದ್ದ ಪ್ರೇಕ್ಷಕ ವೃಂದ ಕಡೆಗೂ ನಿಟ್ಟುಸಿರು ಬಿಟ್ಟರು. ಹೊಟ್ಟೆ ಹುಣ್ಣಾಗುವಷ್ಟು ನಕ್ಕು ನಲಿದರು.</p>.<p>‘ಸು ಫ್ರ ಸೊ’ ಸಿನಿಮಾ ಖ್ಯಾತಿಯ ನಟ ಪುಷ್ಪರಾಜ್ ಬೊಳ್ಳಾರ್ ಅವರು ವೇದಿಕೆಗೆ ಬರುತ್ತಿದ್ದಂತೆ ಪ್ರೇಕ್ಷಕರ ಕಣ್ಣುಗಳು ವೇದಿಕಯತ್ತ ನೆಟ್ಟವು. ಅವರು ದಸರಾ ಸಮಿತಿಯ ಕೆಲ ಸದಸ್ಯರೊಂದಿಗೆ ಸಿನಿಮಾದ ರೂಪಕವೊಂದನ್ನು ಪ್ರಸ್ತುತಪಡಿಸಿ, ನಗೆಯಬುಗ್ಗೆಯನ್ನು ಉಕ್ಕಿಸಿದರು.</p>.<p>ನಂತರ ಮಾತನಾಡಿದ ಅವರು, ‘ಸಿನಿಮಾ ಯಶಸ್ಸಿಗೆ ಜನರ ಪ್ರೋತ್ಸಾಹ ಕಾರಣ’ ಎಂದು ಹೇಳಿದರು. ಜೊತೆಗೆ ಕನ್ನಡ ಭಾಷೆಯ ಚಿತ್ರವನ್ನು ನಾವು ಪ್ರೀತಿಸಬೇಕು. ಕನ್ನಡವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು’ ಎಂದರು.</p>.<p>‘ಬಾವ ಬಂದರು’ ಹಾಡಿಗೆ ಪ್ರೇಕ್ಷಕ ವೃಂದವೂ ಹೆಜ್ಜೆ ಹಾಕಿತು.</p>.<p>ಇದಕ್ಕೂ ಮುನ್ನ ಮೈಸೂರಿನ ಸುಮಾ ರಾಜ್ಕುಮಾರ್ ಅವರು ಜಾದೂ ಪ್ರದರ್ಶಿಸಿ ಮಕ್ಕಳ ಮನಗೆದ್ದರು.</p>.<p>ವಾಹನ ಚಾಲನೆಯಲ್ಲಿ ದಾಖಲೆ ನಿರ್ಮಿಸಿದ, ಹಿಟಾಚಿ ಸೇರಿದಂತೆ ವಿವಿಧ ವಾಹನಗಳನ್ನು ಲೀಲಾಜಾಲವಾಗಿ ಚಾಲನೆ ಮಾಡುವ 11 ವರ್ಷದ ಕಾವೇರಿ ಮನೆ ಚಂದನ್ ಅವರನ್ನು ಸನ್ಮಾನಿಸಲಾಯಿತು.</p>.<p>ಮೂರ್ನಾಡು ಜ್ಞಾನಜ್ಯೋತಿ ತಂಡ, ಮಡಿಕೇರಿಯ ನಾಟ್ಯ ಕಲಾ ಡ್ಯಾನ್ಸ್ ಸ್ಟುಡಿಯೊ, ಮಕ್ಕಂದೂರಿನ ಗೌಡ ಮಕ್ಕಳ ತಂಡ, ಚೆಟ್ಟಿಮಾನಿಯ ಸಾನಿಕಾ ಮತ್ತು ಸ್ನೇಹಿತರು, ವನಚಾಮುಂಡಿ ಸೇವಾ ಸಮಿತಿ ಜ್ಯೋತಿನಗರ ಸೇರಿದಂತೆ ಹಲವು ಕಲಾತಂಡಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಇಲ್ಲಿನ ಗಾಂಧಿ ಮೈದಾನಕ್ಕೆ ‘ಬಾವ’ ಬರುವ ಹೊತ್ತಿಗೆ ಮಂಗಳವಾರ 10.30 ದಾಟಿತ್ತು. ಸಂಜೆಯಿಂದಲೂ ಕಾತರದಿಂದ ಕಾಯುತ್ತಿದ್ದ ಪ್ರೇಕ್ಷಕ ವೃಂದ ಕಡೆಗೂ ನಿಟ್ಟುಸಿರು ಬಿಟ್ಟರು. ಹೊಟ್ಟೆ ಹುಣ್ಣಾಗುವಷ್ಟು ನಕ್ಕು ನಲಿದರು.</p>.<p>‘ಸು ಫ್ರ ಸೊ’ ಸಿನಿಮಾ ಖ್ಯಾತಿಯ ನಟ ಪುಷ್ಪರಾಜ್ ಬೊಳ್ಳಾರ್ ಅವರು ವೇದಿಕೆಗೆ ಬರುತ್ತಿದ್ದಂತೆ ಪ್ರೇಕ್ಷಕರ ಕಣ್ಣುಗಳು ವೇದಿಕಯತ್ತ ನೆಟ್ಟವು. ಅವರು ದಸರಾ ಸಮಿತಿಯ ಕೆಲ ಸದಸ್ಯರೊಂದಿಗೆ ಸಿನಿಮಾದ ರೂಪಕವೊಂದನ್ನು ಪ್ರಸ್ತುತಪಡಿಸಿ, ನಗೆಯಬುಗ್ಗೆಯನ್ನು ಉಕ್ಕಿಸಿದರು.</p>.<p>ನಂತರ ಮಾತನಾಡಿದ ಅವರು, ‘ಸಿನಿಮಾ ಯಶಸ್ಸಿಗೆ ಜನರ ಪ್ರೋತ್ಸಾಹ ಕಾರಣ’ ಎಂದು ಹೇಳಿದರು. ಜೊತೆಗೆ ಕನ್ನಡ ಭಾಷೆಯ ಚಿತ್ರವನ್ನು ನಾವು ಪ್ರೀತಿಸಬೇಕು. ಕನ್ನಡವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು’ ಎಂದರು.</p>.<p>‘ಬಾವ ಬಂದರು’ ಹಾಡಿಗೆ ಪ್ರೇಕ್ಷಕ ವೃಂದವೂ ಹೆಜ್ಜೆ ಹಾಕಿತು.</p>.<p>ಇದಕ್ಕೂ ಮುನ್ನ ಮೈಸೂರಿನ ಸುಮಾ ರಾಜ್ಕುಮಾರ್ ಅವರು ಜಾದೂ ಪ್ರದರ್ಶಿಸಿ ಮಕ್ಕಳ ಮನಗೆದ್ದರು.</p>.<p>ವಾಹನ ಚಾಲನೆಯಲ್ಲಿ ದಾಖಲೆ ನಿರ್ಮಿಸಿದ, ಹಿಟಾಚಿ ಸೇರಿದಂತೆ ವಿವಿಧ ವಾಹನಗಳನ್ನು ಲೀಲಾಜಾಲವಾಗಿ ಚಾಲನೆ ಮಾಡುವ 11 ವರ್ಷದ ಕಾವೇರಿ ಮನೆ ಚಂದನ್ ಅವರನ್ನು ಸನ್ಮಾನಿಸಲಾಯಿತು.</p>.<p>ಮೂರ್ನಾಡು ಜ್ಞಾನಜ್ಯೋತಿ ತಂಡ, ಮಡಿಕೇರಿಯ ನಾಟ್ಯ ಕಲಾ ಡ್ಯಾನ್ಸ್ ಸ್ಟುಡಿಯೊ, ಮಕ್ಕಂದೂರಿನ ಗೌಡ ಮಕ್ಕಳ ತಂಡ, ಚೆಟ್ಟಿಮಾನಿಯ ಸಾನಿಕಾ ಮತ್ತು ಸ್ನೇಹಿತರು, ವನಚಾಮುಂಡಿ ಸೇವಾ ಸಮಿತಿ ಜ್ಯೋತಿನಗರ ಸೇರಿದಂತೆ ಹಲವು ಕಲಾತಂಡಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>