ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಕೊಡಗು | ಮಳೆಗಾಲದ ಪ್ರವಾಸೋದ್ಯಮ; ಬೇಕಿದೆ ಇನ್ನಷ್ಟು ಕಸುವು

Published : 17 ಜುಲೈ 2023, 6:11 IST
Last Updated : 17 ಜುಲೈ 2023, 6:11 IST
ಫಾಲೋ ಮಾಡಿ
Comments
‘ಕರ್ನಾಟಕದ ಕಾಶ್ಮೀರ’ ಎಂದೇ ಖ್ಯಾತವಾದ ಈ ಕಾಫಿನಾಡು ಕೊಡಗಿನಲ್ಲಿ ಮುಂಗಾರಿನಲ್ಲಿ ಸಂಚರಿಸುತ್ತಿದ್ದರೆ ಬಹು ವಿಸ್ಮಯದ ಅನುಭವಗಳಾಗುತ್ತವೆ. ಮಳೆಗೆ ಮೈದುಂಬಿ ಹರಿಯುವ ನದಿಗಳು, ಧುಮ್ಮಿಕ್ಕುವ ಜಲಪಾತಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಗಿರಿ, ಕಂದರಗಳನ್ನು ಕಣ್ತುಂಬಿಕೊಳ್ಳುವುದೇ ಅಮೃತದ ಘಳಿಗೆಯಂತೆ. ಇಂತಹ ಅನುಭವ ಕೊಡುವ ‘ಮಳೆಗಾಲದ ಪ್ರವಾಸೋದ್ಯಮ’ದ ಪರಿಕಲ್ಪನೆಗೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಇನ್ನಷ್ಟು ನೀರೆರೆಯಬೇಕಿದೆ......
ಕೊಡಗಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ಇವರಿಗೆ ಇಲ್ಲಿನ ಪ್ರವಾಸಿ ಸ್ಥಳಗಳ ಮಾಹಿತಿ ನೀಡುವಂತಹ ಫಲಕಗಳ ಅಳವಡಿಕೆ ವೆಬ್‌ಸೈಟ್‌ನಲ್ಲಿ ಮಾಹಿತಿ ಹಾಕುವುದು ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತೇವೆ. ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ತರುವಂತಹ ಪ್ರಯತ್ನಗಳು ನಡೆಯುತ್ತಿವೆ.
ವೆಂಕಟರ್‌ ರಾಜಾ, ಕೊಡಗು ಜಿಲ್ಲಾಧಿಕಾರಿ
ಕೊಡಗಿನಲ್ಲಿ ಮಳೆಗಾಲದ ಪ್ರವಾಸೋದ್ಯಮದ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲೇ ಉತ್ತೇಜನ ಸಿಗಬೇಕಿದೆ. ‘ಸ್ಕಾಟ್‌ಲ್ಯಾಂಡ್ ಆಫ್‌ ಇಂಡಿಯಾ’ ‘ಕರ್ನಾಟಕದ ಕಾಶ್ಮೀರ’ ಇಂತಹ ಪರಿಕಲ್ಪನೆಗಳನ್ನು ಹೆಚ್ಚು ಹೆಚ್ಚು  ಪ್ರಚಾರ ಮಾಡಬೇಕು. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಬಹುಮಹಡಿ ವಾಹನ ನಿಲುಗಡೆ ಕಟ್ಟಡಗಳನ್ನು ನಿರ್ಮಿಸಬೇಕು.
ನಾಗೇಂದ್ರಪ್ರಸಾದ್, ಕೊಡಗು ಜಿಲ್ಲಾ ಹೋಟೆಲ್‌ ರೆಸಾರ್ಟ್ಸ್‌ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ ಅಧ್ಯಕ್ಷ
ಕೊಡಗಿನಲ್ಲಿ ಮಳೆಗಾಲದ ಪ್ರವಾಸೋದ್ಯಮ ಗರಿಗೆದರಲು ಇಲ್ಲಿ ಹಲವು ಮೇಳಗಳನ್ನು ಆಯೋಜಿಸುವ ಅವಕಾಶಗಳಿವೆ. ವೈನ್‌ ಮೇಳ ಜೇನು ಮೇಳ ಆಹಾರ ಮೇಳಗಳನ್ನು ಆಯೋಜಿಸಬಹುದು. ಈ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಬಹುದು.
ನವೀನ್‌ ಅಂಬೆಕಲ್, ಪ್ರಧಾನ ಕಾರ್ಯದರ್ಶಿ, ಚೇಂಬರ್ ಆಫ್‌ ಕಾಮರ್ಸ್
ಕೊಡಗಿನಲ್ಲಿ ಮುಖ್ಯವಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ದುಬಾರೆಯಲ್ಲಿ ಸೇತುವೆ ನಿರ್ಮಾಣ ಮಾಡಬೇಕು. ನೀರು ಕಡಿಮೆ ಇದ್ದಾಗ ಅಲ್ಲಿ ಬೋಟಿಂಗ್ ಸಾಧ್ಯವಿಲ್ಲ. ಚೇಲಾವರ ಜಲಪಾತ ಸೇರಿದಂತೆ ಅನೇಕ ಜಲಪಾತಗಳನ್ನು ಅಭಿವೃದ್ಧಿಪಡಿಸಬೇಕು. ಜಲಸಾಹಸ ಕ್ರೀಡೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ರಾಜಾಸೀಟ್‌ನಲ್ಲಿ ರೈಲಿನ ವ್ಯವಸ್ಥೆ ಕಲ್ಪಿಸಬೇಕು.
ವಸಂತ ಕುಪ್ಪಂಡ, ಕೂರ್ಗ್ ಟ್ರಾವಲ್ ವರ್ಲ್ಡ್ ಮಾಲೀಕರು
ಮೂಲಸೌಕರ್ಯ ಕಲ್ಪಿಸಿ ಕೊಡಗಿನಲ್ಲಿ ಕೃಷಿ ತೋಟಗಾರಿಕೆ ನಷ್ಟದ ಹಾದಿಯಲ್ಲಿದೆ. ಇಲ್ಲಿ ಕೈಗಾರಿಕೆಗಳೂ ಇಲ್ಲ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು. ರಸ್ತೆ ಅಭಿವೃದ್ಧಿ ವಾಹನ ನಿಲುಗಡೆಗೆ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು.
ಶರಣು ಅಯ್ಯಪ್ಪ, ವಾಹನ ಚಾಲಕರು
ಮಡಿಕೇರಿಯಲ್ಲಿ ಹೆಚ್ಚಿನ ಕಡೆ ಪ್ರವಾಸಿ ಸ್ಥಳಗಳನ್ನು ಕುರಿತು ಮಾಹಿತಿ ಫಲಕಗಳು ಇಲ್ಲ
ಮಡಿಕೇರಿಯಲ್ಲಿ ಹೆಚ್ಚಿನ ಕಡೆ ಪ್ರವಾಸಿ ಸ್ಥಳಗಳನ್ನು ಕುರಿತು ಮಾಹಿತಿ ಫಲಕಗಳು ಇಲ್ಲ
ಇರುವ ಫಲಕಗಳೂ ಮಾಸಿದ್ದು ಇನ್ನಷ್ಟು ಮಾಹಿತಿ ಫಲಕಗಳ ಅಗತ್ಯ ಇದೆ
ಇರುವ ಫಲಕಗಳೂ ಮಾಸಿದ್ದು ಇನ್ನಷ್ಟು ಮಾಹಿತಿ ಫಲಕಗಳ ಅಗತ್ಯ ಇದೆ
ಕೊಡಗು ಜಿಲ್ಲೆಯ ಚೆಟ್ಟಳ್ಳಿ– ಸಿದ್ದಾಪುರ ರಸ್ತೆಯಲ್ಲಿ ಮುಂಗಾರು ಬಂತೆಂದರೆ ಅನೇಕ ಜಲಪಾತಗಳು ರಸ್ತೆಯುದ್ದಕ್ಕೂ ಭೋರ್ಗರೆಯುತ್ತಿವೆ. ಇವುಗಳು ಯಾವುವೂ ಅಷ್ಟು ಪ್ರಸಿದ್ಧಿಗೆ ಬಂದಿಲ್ಲ. ಅವುಗಳಲ್ಲಿ ಒಂದಾದ ಅಬ್ಯಾಲ ಜಲಪಾತ 60ರಿಂದ 70 ಅಡಿಗಳಷ್ಟು ಎತ್ತರದಿಂದ ಬೆಳ್ನೊರೆಯಂತೆ ಧರೆಗಿಳಿಯುತ್ತಿರುವ ದೃಶ್ಯ ಮಳೆಗಾಲದಲ್ಲಿ ಮಾತ್ರವೆ  ಕಂಡು ಬರುತ್ತವೆ.
ಕೊಡಗು ಜಿಲ್ಲೆಯ ಚೆಟ್ಟಳ್ಳಿ– ಸಿದ್ದಾಪುರ ರಸ್ತೆಯಲ್ಲಿ ಮುಂಗಾರು ಬಂತೆಂದರೆ ಅನೇಕ ಜಲಪಾತಗಳು ರಸ್ತೆಯುದ್ದಕ್ಕೂ ಭೋರ್ಗರೆಯುತ್ತಿವೆ. ಇವುಗಳು ಯಾವುವೂ ಅಷ್ಟು ಪ್ರಸಿದ್ಧಿಗೆ ಬಂದಿಲ್ಲ. ಅವುಗಳಲ್ಲಿ ಒಂದಾದ ಅಬ್ಯಾಲ ಜಲಪಾತ 60ರಿಂದ 70 ಅಡಿಗಳಷ್ಟು ಎತ್ತರದಿಂದ ಬೆಳ್ನೊರೆಯಂತೆ ಧರೆಗಿಳಿಯುತ್ತಿರುವ ದೃಶ್ಯ ಮಳೆಗಾಲದಲ್ಲಿ ಮಾತ್ರವೆ  ಕಂಡು ಬರುತ್ತವೆ.
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮದ ಜ್ಞಾನಗಂಗಾ ಜಲಪಾತ
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮದ ಜ್ಞಾನಗಂಗಾ ಜಲಪಾತ
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಒಂದು ಜಲಪಾತ 
ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಒಂದು ಜಲಪಾತ 
ಮೇರನಕೋಟೆ ಬೆಟ್ಟದ ಮೇಲಿಂದ ಕಾಣಸಿಗುವ ಮಲ್ಲಳ್ಳಿ ಜಲಪಾತ
ಮೇರನಕೋಟೆ ಬೆಟ್ಟದ ಮೇಲಿಂದ ಕಾಣಸಿಗುವ ಮಲ್ಲಳ್ಳಿ ಜಲಪಾತ
ಮಡಿಕೇರಿಯಲ್ಲಿ ದಟ್ಟ ಮಂಜು ಆವರಿಸಿದಾಗ ಕಾಣಸಿಗುವ ಅದ್ಭುತ ದೃಶ್ಯಕಾವ್ಯ
ಮಡಿಕೇರಿಯಲ್ಲಿ ದಟ್ಟ ಮಂಜು ಆವರಿಸಿದಾಗ ಕಾಣಸಿಗುವ ಅದ್ಭುತ ದೃಶ್ಯಕಾವ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT