ಏಕಾಏಕಿ ಮಧ್ಯರಾತ್ರಿಯಲ್ಲಿ ಪ್ರತಿಭಟನೆ
ಕೊಪ್ಪಳದ ರಾಯರ ಮಠದ ಭಕ್ತರು ಏಕಾಏಕಿ ಮಧ್ಯರಾತ್ರಿಯಲ್ಲಿ ಪ್ರತಿಭಟನೆ ನಡೆಸಿದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುಬುಧೇಂದ್ರ ಶ್ರೀಗಳು ‘ಕೊಪ್ಪಳದ ರಾಯರ ಮಠದಲ್ಲಿ ಪ್ರವಚನ ನೀಡುವಾಗ ನಾನು ಆಡಿದ ಮಾತುಗಳಿಂದ ಆತಂಕಗೊಂಡು ಇಲ್ಲಿನ ಭಕ್ತರು ಸ್ಪಷ್ಟೀಕರಣ ಪಡೆದುಕೊಳ್ಳಲು ಬಂದಿದ್ದರು. ನನಗೆ ವೈಯಕ್ತಿವಾಗಿ ಯಾರ ಮೇಲೂ ದ್ವೇಷ, ಅಸೂಯೆಗಳು ಇಲ್ಲ. ಮಂತ್ರಾಲಯ ಮಠದ ಹಿಂದಿನ ಪೀಠಾಧಿಕಾರಿಗಳು ಕೊಪ್ಪಳದ ರಾಯರ ಮಠಕ್ಕೆ ಬಂದು ಪೂಜೆ ನೆರವೇರಿಸಿದ್ದಾರೆ. ಈ ವಿಚಾರವಾಗಿ ಮಂತ್ರಾಲಯ ಮಠದ ಹಾಗೂ ಜನರ ಜೊತೆ ಚರ್ಚಿಸಿಯೇ ಮುಂದಿನ ತೀರ್ಮಾನ ಮಾಡುತ್ತೇನೆ ಹೊರತು ನಮ್ಮ ಪೀಠ ಭಕ್ತರ ವಿರುದ್ಧ ದಬ್ಬಾಳಿಕೆಯ ಹೆಜ್ಜೆ ಇರಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.