<p><strong>ಮಂಡ್ಯ:</strong> ‘ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯುವಜನರ ಜೋಶ್ ಸಿಕ್ಕಿದೆ. ಕನ್ನಡವನ್ನೇ ಉಸಿರಾಗಿಸಿಕೊಂಡ ನೀವೆಲ್ಲರೂ, ಈ ಆಚರಣೆಯನ್ನು ನಿತ್ಯೋತ್ಸವವನ್ನಾಗಿಸಿ. ಕನ್ನಡ ಸಾಹಿತ್ಯ ಮತ್ತು ಸಿನಿಮಾಗಳನ್ನು ಪ್ರೋತ್ಸಾಹಿಸಿ. ಕವಿಗಳ ಕಾವ್ಯಗಳನ್ನು ಓದುವುದೇ ಒಂದು ಖುಷಿ. ಕನ್ನಡದ ದೀಪ ಎಲ್ಲೆಡೆ ಬೆಳಗಲಿ’ ಎಂದು ಚಿತ್ರನಟ ಡಾಲಿ ಧನಂಜಯ ಹೇಳಿದರು. </p>.<p>‘ಕನ್ನಡಕ್ಕಾಗಿ ಓಡು’ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುವಜನರನ್ನು ಹುರಿದುಂಬಿಸಿದರು. </p>.<p>‘ಕನ್ನಡ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಿ. ಯುವಜನರಿದ್ದಾಗ ಮಾತ್ರ ಅಲ್ಲಿ ಸಂಭ್ರಮವಿರುತ್ತದೆ. ಕನ್ನಡ ಭಾಷಾ ಬೆಳವಣಿಗೆಗೆ ಇಂಥ ಸಮ್ಮೇಳನ, ಕಾರ್ಯಕ್ರಮಗಳು ಪೂರಕ’ ಎಂದರು. </p>.<p>ಕ್ರೀಡಾಂಗಣದಿಂದ ಸ್ಯಾಂಜೋ ಆಸ್ಪತ್ರೆ ಸಮೀಪದ ಸಮ್ಮೇಳನದ ವೇದಿಕೆ ಸ್ಥಳದವರೆಗೆ 6 ಕಿ.ಮೀ. ಓಟದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಧನಂಜಯ ಅವರೊಂದಿಗೆ ನಿನಾಸಂ ಸತೀಶ್, ಸಪ್ತಮಿಗೌಡ, ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್, ಎಡಿಜಿಪಿ ಅಲೋಕ್ಕುಮಾರ್ ಅವರೂ ಪಾಲ್ಗೊಂಡು ಸ್ಫೂರ್ತಿ ತುಂಬಿದರು. </p>.<p>ಓಟದಲ್ಲಿ ಪಾಲ್ಗೊಂಡವರಿಗೆ ಉಚಿತವಾಗಿ ಟೀ–ಶರ್ಟ್ ನೀಡಲಾಯಿತು. ದಾರಿ ಮಧ್ಯೆ ನೀರು, ಬಿಸ್ಕತ್ ಹಾಗೂ ಕೊನೆಯಲ್ಲಿ ಎಲ್ಲರಿಗೂ ಉಪಾಹಾರ ನೀಡಲಾಯಿತು. </p>.<p>ಆದಿಚುಂಚನಗಿರಿ ಮಠದ ನಿರ್ಮಲಾನಂದಶ್ರೀ, ಗೌರಿಗದ್ದೆ ವಿನಯ್ ಗುರೂಜಿ, ಐಜಿಪಿ ಬಿ.ಆರ್.ರವಿಕಾಂತೇಗೌಡ, ಜಿಲ್ಲಾಧಿಕಾರಿ ಕುಮಾರ, ಕಸಾಪ ಅಧ್ಯಕ್ಷ ಮಹೇಶ ಜೋಶಿ, ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಸಮ್ಮೇಳನ ಸಂಚಾಲಕಿ ಮೀರಾ ಶಿವಲಿಂಗಯ್ಯ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ‘ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯುವಜನರ ಜೋಶ್ ಸಿಕ್ಕಿದೆ. ಕನ್ನಡವನ್ನೇ ಉಸಿರಾಗಿಸಿಕೊಂಡ ನೀವೆಲ್ಲರೂ, ಈ ಆಚರಣೆಯನ್ನು ನಿತ್ಯೋತ್ಸವವನ್ನಾಗಿಸಿ. ಕನ್ನಡ ಸಾಹಿತ್ಯ ಮತ್ತು ಸಿನಿಮಾಗಳನ್ನು ಪ್ರೋತ್ಸಾಹಿಸಿ. ಕವಿಗಳ ಕಾವ್ಯಗಳನ್ನು ಓದುವುದೇ ಒಂದು ಖುಷಿ. ಕನ್ನಡದ ದೀಪ ಎಲ್ಲೆಡೆ ಬೆಳಗಲಿ’ ಎಂದು ಚಿತ್ರನಟ ಡಾಲಿ ಧನಂಜಯ ಹೇಳಿದರು. </p>.<p>‘ಕನ್ನಡಕ್ಕಾಗಿ ಓಡು’ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುವಜನರನ್ನು ಹುರಿದುಂಬಿಸಿದರು. </p>.<p>‘ಕನ್ನಡ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಿ. ಯುವಜನರಿದ್ದಾಗ ಮಾತ್ರ ಅಲ್ಲಿ ಸಂಭ್ರಮವಿರುತ್ತದೆ. ಕನ್ನಡ ಭಾಷಾ ಬೆಳವಣಿಗೆಗೆ ಇಂಥ ಸಮ್ಮೇಳನ, ಕಾರ್ಯಕ್ರಮಗಳು ಪೂರಕ’ ಎಂದರು. </p>.<p>ಕ್ರೀಡಾಂಗಣದಿಂದ ಸ್ಯಾಂಜೋ ಆಸ್ಪತ್ರೆ ಸಮೀಪದ ಸಮ್ಮೇಳನದ ವೇದಿಕೆ ಸ್ಥಳದವರೆಗೆ 6 ಕಿ.ಮೀ. ಓಟದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಧನಂಜಯ ಅವರೊಂದಿಗೆ ನಿನಾಸಂ ಸತೀಶ್, ಸಪ್ತಮಿಗೌಡ, ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್, ಎಡಿಜಿಪಿ ಅಲೋಕ್ಕುಮಾರ್ ಅವರೂ ಪಾಲ್ಗೊಂಡು ಸ್ಫೂರ್ತಿ ತುಂಬಿದರು. </p>.<p>ಓಟದಲ್ಲಿ ಪಾಲ್ಗೊಂಡವರಿಗೆ ಉಚಿತವಾಗಿ ಟೀ–ಶರ್ಟ್ ನೀಡಲಾಯಿತು. ದಾರಿ ಮಧ್ಯೆ ನೀರು, ಬಿಸ್ಕತ್ ಹಾಗೂ ಕೊನೆಯಲ್ಲಿ ಎಲ್ಲರಿಗೂ ಉಪಾಹಾರ ನೀಡಲಾಯಿತು. </p>.<p>ಆದಿಚುಂಚನಗಿರಿ ಮಠದ ನಿರ್ಮಲಾನಂದಶ್ರೀ, ಗೌರಿಗದ್ದೆ ವಿನಯ್ ಗುರೂಜಿ, ಐಜಿಪಿ ಬಿ.ಆರ್.ರವಿಕಾಂತೇಗೌಡ, ಜಿಲ್ಲಾಧಿಕಾರಿ ಕುಮಾರ, ಕಸಾಪ ಅಧ್ಯಕ್ಷ ಮಹೇಶ ಜೋಶಿ, ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಸಮ್ಮೇಳನ ಸಂಚಾಲಕಿ ಮೀರಾ ಶಿವಲಿಂಗಯ್ಯ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>