<p><strong>ಮದ್ದೂರು</strong>: ಹಳೆ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ಸೆಸ್ಕ್ ಸಿಬ್ಬಂದಿ ತಾಲ್ಲೂಕಿನ ಮಾಲಗಾರನಹಳ್ಳಿಯಲ್ಲಿ ಹಲವು ಮನೆಗಳ ವಿದ್ಯುತ್ ಮೀಟರ್ಗಳನ್ನೇ ಶುಕ್ರವಾರ ಬಿಚ್ಚಿಕೊಂಡು ಹೋಗಿದ್ದಾರೆ.</p>.<p>ಗ್ರಾಮದ ಚಂದ್ರಶೇಖರ್, ವೇದಾ, ರಾಜ ಸೇರಿದಂತೆ ಸುಮಾರು 8 ಮನೆಗಳ ವಿದ್ಯುತ್ ಮೀಟರ್ಗಳನ್ನು ಎ.ಇ ನಾಗಾಭಿಷೇಕ್ ಹಾಗೂ ಸಿಬ್ಬಂದಿ ಹಳೆ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ತೆರವು ಮಾಡಿದ್ದಾರೆ. ಈ ವೇಳೆ ಮನೆಯವರು ಎಷ್ಟೇ ಮನವಿ ಮಾಡಿದರೂ ಸಿಬ್ಬಂದಿ ಕಿವಿಗೊಡಲಿಲ್ಲ ಎನ್ನಲಾಗಿದೆ. ಇದರಿಂದ ಶುಕ್ರವಾರ ರಾತ್ರಿ ‘ಗೃಹಜ್ಯೋತಿ’ಗೆ ಅರ್ಹರಿದ್ದರೂ ಈ ಮನೆಗಳಿಗೆ ಕರೆಂಟ್ ಇಲ್ಲದೆ ಕಾಲ ಕಳೆದರೂ.</p>.<p>ಈ ಬಗ್ಗೆ ಪ್ರಗತಿಪರ ಸಂಘಟನೆಗಳ ಮುಖಂಡರಾದ ನ.ಲಿ.ಕೃಷ್ಣ ಅವರು, ಸೆಸ್ಕ್ ಅಧಿಕಾರಿಗಳೊಂದಿಗೆ ಮಾತನಾಡಿ ವಿಷಯ ಕುರಿತು ಮಾತನಾಡಿದರೂ ಪ್ರಯೋಜನವಾಗದ ನಂತರ ತಹಶೀಲ್ದಾರ್ ಸೋಮಶೇಖರ್ ಅವರಿಗೆ ಈ ಬಗ್ಗೆ ಗಮನಕ್ಕೆ ತಂದು ಗ್ರಾಮಸ್ಥರೊಟ್ಟಿಗೆ ಚರ್ಚಿಸಿದ್ದಾರೆ.</p>.<p>ಅಷ್ಟರಲ್ಲಿ ಶನಿವಾರವೂ ಮತ್ತೆ ಸೆಸ್ಕ್ ಸಿಬ್ಬಂದಿ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಆ ಸಿಬ್ಬಂದಿ ವಾಪಸ್ ಹೋದರು.</p>.<p>ಆ ಬಳಿಕ ನ.ಲಿ.ಕೃಷ್ಣ ಅವರು ಪರಿಸ್ಥಿತಿ ಬಗ್ಗೆ ತಹಶೀಲ್ದಾರ್ರಿಗೆ ತಿಳಿಸಿ, ‘ಬರಗಾಲದ ಪರಿಸ್ಥಿತಿಯಲ್ಲಿ ಮೈಕ್ರೊ ಫೈನಾನ್ಸ್ ಬಗ್ಗೆ ಬಲವಂತದ ವಸೂಲಿಯನ್ನು ಮಾಡಬಾರದು ಎಂದು ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಆದೇಶಿದ ಬೆನ್ನಲ್ಲೇ ಈ ರೀತಿ ಸೆಸ್ಕ್ ಸಿಬ್ಬಂದಿ ಹಳೆ ಬಿಲ್ ಪಾವತಿಗಾಗಿ ಬಲವಂತವಾಗಿ ರೈತರ ಮನೆಗಳ ವಿದ್ಯುತ್ ಮೀಟರ್ಗಳನ್ನು ತೆರವುಗೊಳಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಸೂಕ್ತ ನಿರ್ದೇಶನ ನೀಡುವಂತೆ’ ಮನವಿ ಮಾಡಿದರು.</p>.<p>ತಹಶೀಲ್ದಾರ್ ಸೋಮಶೇಖರ್ ಅವರು ಸೆಸ್ಕ್ ಅಧಿಕಾರಿಗೆ ಮಾತನಾಡಿ, ರೈತರ ಮನೆಗಳ ವಿದ್ಯುತ್ ಮೀಟರ್ಗಳನ್ನು ಮರು ಅಳವಡಿಸಲು ಕ್ರಮವಹಿಸಲು ಸೂಚಿಸಿದ್ದಾರೆ.</p>.<p>Highlights - ಕರೆಂಟ್ ಇಲ್ಲದೆ ರಾತ್ರಿ ಕಳೆದ ಹಲವು ಕುಟುಂಬಗಳು ಜನರ ಕಷ್ಟ ಹೇಳಿದ ಮುಖಂಡರು ಮೀಟರ್ ಮರು ಜೋಡಿಸಲು ತಹಶೀಲ್ದಾರ್ ಸೂಚನೆ</p>.<p>Graphic text / Statistics - ಮದ್ದೂರು: ಹಳೆ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ಸೆಸ್ಕ್ ಸಿಬ್ಬಂದಿ ತಾಲ್ಲೂಕಿನ ಮಾಲಗಾರನಹಳ್ಳಿಯಲ್ಲಿ ಮನೆಗಳ ವಿದ್ಯುತ್ ಮೀಟರ್ಗಳನ್ನೇ ಬಿಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಗ್ರಾಮದ ಚಂದ್ರಶೇಖರ ವೇದ ರಾಜ ಸೇರಿದಂತೆ ಸುಮಾರು 8 ಮನೆಗಳ ವಿದ್ಯುತ್ ಮೀಟರ್ ಗಳನ್ನು ಎ ಇ ನಾಗಭಿಷೇಕ್ ಸೇರಿದಂತೆ ಸಿಬ್ಬಂದಿಗಳು ಹಳೇಯ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ತೆರವುಮಾಡಿದ್ದಾರೆ ಈ ವೇಳೆ ಮನೆಯವರು ಎಷ್ಟೇ ಕೇಳಿಕೊಂಡರೂ ಸಿಬ್ಬಂದಿಗಳು ಕಿವಿಗೊಡಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಗೃಹಜ್ಯೋತಿ ಯೋಜನೆಯಿಂದ ವಂಚಿತರಂತೆ ಶುಕ್ರವಾರ ರಾತ್ರಿಯಿಂದ ಸಂಬಂಧಪಟ್ಟ ಮನೆಮಂದಿ ಕಾಲಕಳೆದ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಪ್ರಗತಿಪರಪರ ಸಂಘಟನೆಗಳ ಮುಖಂಡರಾದ ನ. ಲಿ ಕೃಷ್ಣ ರವರು ಸಂಬಂಧಪಟ್ಟ ಸೆಸ್ಕಾಂ ಸೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ವಿಷಯ ಕುರಿತು ಮಾತನಾಡಿದರೂ ಪ್ರಯೋಜನವಾಗದ ನಂತರ ತಹಶೀಲ್ದಾರ್ ಸೋಮಶೇಖರ್ ರವರಿಗೆ ಈ ಬಗ್ಗೆ ಗಮನಕ್ಕೆ ತಂದು ಗ್ರಾಮಸ್ಥರೊಟ್ಟಿಗೆ ಚರ್ಚಿಸಿದ್ದಾರೆ. ಅಷ್ಟರಲ್ಲಿ ಶನಿವಾರವೂ ಮತ್ತೆ ಸೆಸ್ಕಾಂ ನ ಸಿಬ್ಬಂದಿಗಳು ಗ್ರಾಮಕ್ಕೆ ತೆರಳಿದಾಗ ಗ್ರಾಮಸ್ಥರು ಜಮಾಯಿಸಿ ಪ್ರತಿರೋಧ ತೋರಿ ಆಕ್ರೋಶವ್ಯಕ್ತಪಡಿಸಿದ ನಂತರ ಅಲ್ಲಿಂದ ಸೆಸ್ಕಾಂ ಸಿಬ್ಬಂದಿಗಳು ತೆರಳಿದ್ದಾರೆ. ಆ ಬಳಿಕ ಮುಖಂಡ ಪರಿಸ್ಥಿತಿ ಬಗ್ಗೆ ತಹಶೀಲ್ದಾರ್ ರಿಗೆ ತಿಳಿಸಿ ಮಾತನಾಡಿ ಬರಗಾಲದ ಪರಿಸ್ಥಿತಿಯಲ್ಲಿ ಮೈಕ್ರೋ ಫೈನಾನ್ಸ್ ಬಗ್ಗೆ ಬಲವಂತದ ವಸೂಲಿಯನ್ನು ಮಾಡಬಾರದು ಎಂದು ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಆದೇಶಿದ ಬೆನ್ನಲೇ ಈ ರೀತಿ ಸೆಸ್ಕಾಂ ನ ಸಿಬ್ಬಂದಿಗಳು ಬಲವಂತವಾಗಿ ರೈತರ ಮನೆಗಳ ವಿದ್ಯುತ್ ಮೀಟರ್ ಗಳನ್ನು ಹಳೇ ಬಾಕಿ ಪಾವತಿಸಿಲ್ಲವೆಂಬ ಕಾರಣಕ್ಕೆ ತೆರವು ಗೊಳಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದರು. ಈ ಬಗ್ಗೆ ಸೆಸ್ಕಾಂ ನ ಅಧಿಕಾರಿಗಳೊಂದಿಗೆ ತಹಶೀಲ್ದಾರ್ ಸೋಮಶೇಖರ್ ಮಾತನಾಡಿ ರೈತರ ಮನೆಗಳ ವಿದ್ಯುತ್ ಮೀಟರ್ ಗಳನ್ನು ಮರು ಅಳವಡಿಸಲು ಕ್ರಮವಹಿಸಲು ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು</strong>: ಹಳೆ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ಸೆಸ್ಕ್ ಸಿಬ್ಬಂದಿ ತಾಲ್ಲೂಕಿನ ಮಾಲಗಾರನಹಳ್ಳಿಯಲ್ಲಿ ಹಲವು ಮನೆಗಳ ವಿದ್ಯುತ್ ಮೀಟರ್ಗಳನ್ನೇ ಶುಕ್ರವಾರ ಬಿಚ್ಚಿಕೊಂಡು ಹೋಗಿದ್ದಾರೆ.</p>.<p>ಗ್ರಾಮದ ಚಂದ್ರಶೇಖರ್, ವೇದಾ, ರಾಜ ಸೇರಿದಂತೆ ಸುಮಾರು 8 ಮನೆಗಳ ವಿದ್ಯುತ್ ಮೀಟರ್ಗಳನ್ನು ಎ.ಇ ನಾಗಾಭಿಷೇಕ್ ಹಾಗೂ ಸಿಬ್ಬಂದಿ ಹಳೆ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ತೆರವು ಮಾಡಿದ್ದಾರೆ. ಈ ವೇಳೆ ಮನೆಯವರು ಎಷ್ಟೇ ಮನವಿ ಮಾಡಿದರೂ ಸಿಬ್ಬಂದಿ ಕಿವಿಗೊಡಲಿಲ್ಲ ಎನ್ನಲಾಗಿದೆ. ಇದರಿಂದ ಶುಕ್ರವಾರ ರಾತ್ರಿ ‘ಗೃಹಜ್ಯೋತಿ’ಗೆ ಅರ್ಹರಿದ್ದರೂ ಈ ಮನೆಗಳಿಗೆ ಕರೆಂಟ್ ಇಲ್ಲದೆ ಕಾಲ ಕಳೆದರೂ.</p>.<p>ಈ ಬಗ್ಗೆ ಪ್ರಗತಿಪರ ಸಂಘಟನೆಗಳ ಮುಖಂಡರಾದ ನ.ಲಿ.ಕೃಷ್ಣ ಅವರು, ಸೆಸ್ಕ್ ಅಧಿಕಾರಿಗಳೊಂದಿಗೆ ಮಾತನಾಡಿ ವಿಷಯ ಕುರಿತು ಮಾತನಾಡಿದರೂ ಪ್ರಯೋಜನವಾಗದ ನಂತರ ತಹಶೀಲ್ದಾರ್ ಸೋಮಶೇಖರ್ ಅವರಿಗೆ ಈ ಬಗ್ಗೆ ಗಮನಕ್ಕೆ ತಂದು ಗ್ರಾಮಸ್ಥರೊಟ್ಟಿಗೆ ಚರ್ಚಿಸಿದ್ದಾರೆ.</p>.<p>ಅಷ್ಟರಲ್ಲಿ ಶನಿವಾರವೂ ಮತ್ತೆ ಸೆಸ್ಕ್ ಸಿಬ್ಬಂದಿ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಆ ಸಿಬ್ಬಂದಿ ವಾಪಸ್ ಹೋದರು.</p>.<p>ಆ ಬಳಿಕ ನ.ಲಿ.ಕೃಷ್ಣ ಅವರು ಪರಿಸ್ಥಿತಿ ಬಗ್ಗೆ ತಹಶೀಲ್ದಾರ್ರಿಗೆ ತಿಳಿಸಿ, ‘ಬರಗಾಲದ ಪರಿಸ್ಥಿತಿಯಲ್ಲಿ ಮೈಕ್ರೊ ಫೈನಾನ್ಸ್ ಬಗ್ಗೆ ಬಲವಂತದ ವಸೂಲಿಯನ್ನು ಮಾಡಬಾರದು ಎಂದು ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಆದೇಶಿದ ಬೆನ್ನಲ್ಲೇ ಈ ರೀತಿ ಸೆಸ್ಕ್ ಸಿಬ್ಬಂದಿ ಹಳೆ ಬಿಲ್ ಪಾವತಿಗಾಗಿ ಬಲವಂತವಾಗಿ ರೈತರ ಮನೆಗಳ ವಿದ್ಯುತ್ ಮೀಟರ್ಗಳನ್ನು ತೆರವುಗೊಳಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಸೂಕ್ತ ನಿರ್ದೇಶನ ನೀಡುವಂತೆ’ ಮನವಿ ಮಾಡಿದರು.</p>.<p>ತಹಶೀಲ್ದಾರ್ ಸೋಮಶೇಖರ್ ಅವರು ಸೆಸ್ಕ್ ಅಧಿಕಾರಿಗೆ ಮಾತನಾಡಿ, ರೈತರ ಮನೆಗಳ ವಿದ್ಯುತ್ ಮೀಟರ್ಗಳನ್ನು ಮರು ಅಳವಡಿಸಲು ಕ್ರಮವಹಿಸಲು ಸೂಚಿಸಿದ್ದಾರೆ.</p>.<p>Highlights - ಕರೆಂಟ್ ಇಲ್ಲದೆ ರಾತ್ರಿ ಕಳೆದ ಹಲವು ಕುಟುಂಬಗಳು ಜನರ ಕಷ್ಟ ಹೇಳಿದ ಮುಖಂಡರು ಮೀಟರ್ ಮರು ಜೋಡಿಸಲು ತಹಶೀಲ್ದಾರ್ ಸೂಚನೆ</p>.<p>Graphic text / Statistics - ಮದ್ದೂರು: ಹಳೆ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ಸೆಸ್ಕ್ ಸಿಬ್ಬಂದಿ ತಾಲ್ಲೂಕಿನ ಮಾಲಗಾರನಹಳ್ಳಿಯಲ್ಲಿ ಮನೆಗಳ ವಿದ್ಯುತ್ ಮೀಟರ್ಗಳನ್ನೇ ಬಿಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಗ್ರಾಮದ ಚಂದ್ರಶೇಖರ ವೇದ ರಾಜ ಸೇರಿದಂತೆ ಸುಮಾರು 8 ಮನೆಗಳ ವಿದ್ಯುತ್ ಮೀಟರ್ ಗಳನ್ನು ಎ ಇ ನಾಗಭಿಷೇಕ್ ಸೇರಿದಂತೆ ಸಿಬ್ಬಂದಿಗಳು ಹಳೇಯ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ತೆರವುಮಾಡಿದ್ದಾರೆ ಈ ವೇಳೆ ಮನೆಯವರು ಎಷ್ಟೇ ಕೇಳಿಕೊಂಡರೂ ಸಿಬ್ಬಂದಿಗಳು ಕಿವಿಗೊಡಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಗೃಹಜ್ಯೋತಿ ಯೋಜನೆಯಿಂದ ವಂಚಿತರಂತೆ ಶುಕ್ರವಾರ ರಾತ್ರಿಯಿಂದ ಸಂಬಂಧಪಟ್ಟ ಮನೆಮಂದಿ ಕಾಲಕಳೆದ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಪ್ರಗತಿಪರಪರ ಸಂಘಟನೆಗಳ ಮುಖಂಡರಾದ ನ. ಲಿ ಕೃಷ್ಣ ರವರು ಸಂಬಂಧಪಟ್ಟ ಸೆಸ್ಕಾಂ ಸೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ವಿಷಯ ಕುರಿತು ಮಾತನಾಡಿದರೂ ಪ್ರಯೋಜನವಾಗದ ನಂತರ ತಹಶೀಲ್ದಾರ್ ಸೋಮಶೇಖರ್ ರವರಿಗೆ ಈ ಬಗ್ಗೆ ಗಮನಕ್ಕೆ ತಂದು ಗ್ರಾಮಸ್ಥರೊಟ್ಟಿಗೆ ಚರ್ಚಿಸಿದ್ದಾರೆ. ಅಷ್ಟರಲ್ಲಿ ಶನಿವಾರವೂ ಮತ್ತೆ ಸೆಸ್ಕಾಂ ನ ಸಿಬ್ಬಂದಿಗಳು ಗ್ರಾಮಕ್ಕೆ ತೆರಳಿದಾಗ ಗ್ರಾಮಸ್ಥರು ಜಮಾಯಿಸಿ ಪ್ರತಿರೋಧ ತೋರಿ ಆಕ್ರೋಶವ್ಯಕ್ತಪಡಿಸಿದ ನಂತರ ಅಲ್ಲಿಂದ ಸೆಸ್ಕಾಂ ಸಿಬ್ಬಂದಿಗಳು ತೆರಳಿದ್ದಾರೆ. ಆ ಬಳಿಕ ಮುಖಂಡ ಪರಿಸ್ಥಿತಿ ಬಗ್ಗೆ ತಹಶೀಲ್ದಾರ್ ರಿಗೆ ತಿಳಿಸಿ ಮಾತನಾಡಿ ಬರಗಾಲದ ಪರಿಸ್ಥಿತಿಯಲ್ಲಿ ಮೈಕ್ರೋ ಫೈನಾನ್ಸ್ ಬಗ್ಗೆ ಬಲವಂತದ ವಸೂಲಿಯನ್ನು ಮಾಡಬಾರದು ಎಂದು ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಆದೇಶಿದ ಬೆನ್ನಲೇ ಈ ರೀತಿ ಸೆಸ್ಕಾಂ ನ ಸಿಬ್ಬಂದಿಗಳು ಬಲವಂತವಾಗಿ ರೈತರ ಮನೆಗಳ ವಿದ್ಯುತ್ ಮೀಟರ್ ಗಳನ್ನು ಹಳೇ ಬಾಕಿ ಪಾವತಿಸಿಲ್ಲವೆಂಬ ಕಾರಣಕ್ಕೆ ತೆರವು ಗೊಳಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದರು. ಈ ಬಗ್ಗೆ ಸೆಸ್ಕಾಂ ನ ಅಧಿಕಾರಿಗಳೊಂದಿಗೆ ತಹಶೀಲ್ದಾರ್ ಸೋಮಶೇಖರ್ ಮಾತನಾಡಿ ರೈತರ ಮನೆಗಳ ವಿದ್ಯುತ್ ಮೀಟರ್ ಗಳನ್ನು ಮರು ಅಳವಡಿಸಲು ಕ್ರಮವಹಿಸಲು ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>