<p><strong>ಹುಣಸೂರು</strong>: ಆನೆಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಕೈಗೊಂಡ ಕ್ರಮಗಳಿಂದಾಗಿ ನಾಗರಹೊಳೆ ಅಭಯಾರಣ್ಯದ ಅಂಚಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ಕಡಿಮೆಯಾಗುತ್ತಿದೆ.</p>.<p>ನಾಗರಹೊಳೆ ಅಭಯಾರಣ್ಯ 843 ಚದರ ಕಿ.ಮೀ ವಿಸ್ತೀರ್ಣ ಹೊಂದಿದ್ದು, 2017ರ ಗಣತಿಯಂತೆ 1,500ರಿಂದ 2,000 ಆನೆಗಳಿವೆ. ಪ್ರತಿ ಚದರ ಕಿ.ಮೀ.ಗೆ 2– 3 ಆನೆಗಳು ವಾಸವಾಗಿವೆ. ದೇಶದಲ್ಲಿ 30 ಸಾವಿರ ಆನೆಗಳಿದ್ದು, ದಕ್ಷಿಣ ಭಾರತದಲ್ಲಿ 11,960, ಕರ್ನಾಟಕದಲ್ಲಿ ಅತ್ಯಧಿಕ 6,049 ಆನೆಗಳಿವೆ. ಕಬಿನಿ ಹಿನ್ನೀರು ಸೇರಿದಂತೆಹರಿದ್ವರ್ಣ ಕಾಡಿನಲ್ಲಿ ಆನೆಗಳಿಗೆ ಆಹಾರ ಮತ್ತು ಸಂತತಿ ಅಭಿವೃದ್ಧಿಗೆ ಪೂರಕ ವಾತಾವರಣವಿದೆ.</p>.<p>‘ಆನೆ– ಮಾನವ ಸಂಘರ್ಷ ನಿಯಂತ್ರಣಕ್ಕೆ 158 ಕಿ.ಮೀ ರೈಲ್ವೆ ತಡೆಗೋಡೆ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಈವರೆಗೆ ₹62 ಕೋಟಿ ವೆಚ್ಚದಲ್ಲಿ 55 ಕಿ.ಮೀ.ವರೆಗೆ ತಡೆಗೋಡೆ ನಿರ್ಮಿಸಲಾಗಿದೆ. 18 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. ₹2.60 ಕೋಟಿ 4 ಕಿ.ಮೀ ರೋಪ್ ಬ್ಯಾರಿಕೇಡ್ ನಿರ್ಮಾಣ ಮತ್ತು 257 ಕಿ.ಮೀ ಆನೆ ಕಂದಕ ನಿರ್ಮಿಸಲಾಗಿದೆ’ ಎಂದು ನಾಗರಹೊಳೆ ಯೋಜನಾ ನಿರ್ದೇಶಕ ಹರ್ಷಕುಮಾರ್ ನರಗುಂದ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಆನೆ ದಾಳಿಯಿಂದ ಫಸಲು ನಾಶ, ಜೀವ ಹಾನಿ ಪ್ರಮಾಣ ಕಡಿಮೆಯಾಗುತ್ತಿದೆ. 2020ರಿಂದ 2022ರವರೆಗೆ ಒಟ್ಟು 9 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. 2019ರಿಂದ 2022ರವರಗೆ ಒಟ್ಟು 28 ಮಂದಿ ಗಾಯಗೊಂಡಿದ್ದಾರೆ. ಆನೆ ದಾಳಿಯಿಂದ 2019–20ರಲ್ಲಿ 1,412 ಎಕರೆ, 2020–21ರಲ್ಲಿ 1,317, 2021–22ರಲ್ಲಿ 1,360 ಎಕರೆ ಫಸಲು ನಾಶವಾಗಿದೆ’ ಎಂದು ಹೇಳಿದರು.</p>.<p>‘ಲಾಂಟಾನ ಗಿಡಗಳಿಂದ ಆಹಾರದ ಸಮಸ್ಯೆ ಸೃಷ್ಟಿಸಿದೆ. ನಾಗರಹೊಳೆಯಲ್ಲಿ ನರೇಗಾ ಯೋಜನೆಯಡಿ 800 ಹೆಕ್ಟೇರ್ ಪ್ರದೇಶದಲ್ಲಿ ಲಾಂಟಾನ ಗಿಡ ತೆರವುಗೊಳಿಸಿ, ಹುಲ್ಲುಗಾವಲು ಪ್ರದೇಶ ನಿರ್ಮಿಸಲಾಗಿದೆ. ಅರಣ್ಯದಲ್ಲಿ 61 ಹಡ್ಲುಗಳಿದ್ದು (ಹುಲ್ಲು ಪ್ರದೇಶ) ವರ್ಷದ ಎಲ್ಲಾ ದಿನವೂ ಮೇವು ಸಿಗಲಿದೆ. ಕಾನನದಲ್ಲಿ 261 ಕೆರೆಗಳಲ್ಲಿ 6 ದೊಡ್ಡ ಕೆರೆಗಳಿವೆ. ಆನೆಗೆ ಅತಿ ಪ್ರಿಯವಾದ ಆಹಾರ ಬೊಂಬು. ಆನೆಗಳ ಸಂಖ್ಯೆಗೆ ಅನುಗುಣವಾಗಿ ಕಾನನದಲ್ಲಿ 2020ರಲ್ಲಿ 6ರಿಂದ 7 ಟನ್ ಬೊಂಬು ಬಿತ್ತನೆ ಅಭಿಯಾನ ನಡೆಸಲಾಗಿತ್ತು. ಇದರ ಫಲವಾಗಿ ಬೊಂಬು ವ್ಯಾಪಕವಾಗಿ ಆವರಿಸಿದೆ’ ಎಂದು ವಿವರಿಸಿದರು.</p>.<p><em><strong>ಅರಣ್ಯದಲ್ಲಿ ಆನೆಗಳೊಂದಿಗೆ ನಾವು ಜೀವನ ಕಳೆದಿದ್ದೇವೆ. ಪುನರ್ವಸತಿಗೊಂಡು ಕೃಷಿ ಬೇಸಾಯದಲ್ಲಿ ತೊಡಗಿದ್ದೇವೆ. ಕಾಡಾನೆ ದಾಳಿಯಿಂದ ಬೆಳೆ ನಾಶವಾಗುತ್ತಿದೆ.</strong></em></p>.<p><em>–ಜೆ.ಕೆ.ಮಣಿ, ನಾಗಾಪುರ ಪುನರ್ವಸತಿ ಕೇಂದ್ರದ ನಿವಾಸಿ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ಆನೆಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಕೈಗೊಂಡ ಕ್ರಮಗಳಿಂದಾಗಿ ನಾಗರಹೊಳೆ ಅಭಯಾರಣ್ಯದ ಅಂಚಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ಕಡಿಮೆಯಾಗುತ್ತಿದೆ.</p>.<p>ನಾಗರಹೊಳೆ ಅಭಯಾರಣ್ಯ 843 ಚದರ ಕಿ.ಮೀ ವಿಸ್ತೀರ್ಣ ಹೊಂದಿದ್ದು, 2017ರ ಗಣತಿಯಂತೆ 1,500ರಿಂದ 2,000 ಆನೆಗಳಿವೆ. ಪ್ರತಿ ಚದರ ಕಿ.ಮೀ.ಗೆ 2– 3 ಆನೆಗಳು ವಾಸವಾಗಿವೆ. ದೇಶದಲ್ಲಿ 30 ಸಾವಿರ ಆನೆಗಳಿದ್ದು, ದಕ್ಷಿಣ ಭಾರತದಲ್ಲಿ 11,960, ಕರ್ನಾಟಕದಲ್ಲಿ ಅತ್ಯಧಿಕ 6,049 ಆನೆಗಳಿವೆ. ಕಬಿನಿ ಹಿನ್ನೀರು ಸೇರಿದಂತೆಹರಿದ್ವರ್ಣ ಕಾಡಿನಲ್ಲಿ ಆನೆಗಳಿಗೆ ಆಹಾರ ಮತ್ತು ಸಂತತಿ ಅಭಿವೃದ್ಧಿಗೆ ಪೂರಕ ವಾತಾವರಣವಿದೆ.</p>.<p>‘ಆನೆ– ಮಾನವ ಸಂಘರ್ಷ ನಿಯಂತ್ರಣಕ್ಕೆ 158 ಕಿ.ಮೀ ರೈಲ್ವೆ ತಡೆಗೋಡೆ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದ್ದು, ಈವರೆಗೆ ₹62 ಕೋಟಿ ವೆಚ್ಚದಲ್ಲಿ 55 ಕಿ.ಮೀ.ವರೆಗೆ ತಡೆಗೋಡೆ ನಿರ್ಮಿಸಲಾಗಿದೆ. 18 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. ₹2.60 ಕೋಟಿ 4 ಕಿ.ಮೀ ರೋಪ್ ಬ್ಯಾರಿಕೇಡ್ ನಿರ್ಮಾಣ ಮತ್ತು 257 ಕಿ.ಮೀ ಆನೆ ಕಂದಕ ನಿರ್ಮಿಸಲಾಗಿದೆ’ ಎಂದು ನಾಗರಹೊಳೆ ಯೋಜನಾ ನಿರ್ದೇಶಕ ಹರ್ಷಕುಮಾರ್ ನರಗುಂದ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಆನೆ ದಾಳಿಯಿಂದ ಫಸಲು ನಾಶ, ಜೀವ ಹಾನಿ ಪ್ರಮಾಣ ಕಡಿಮೆಯಾಗುತ್ತಿದೆ. 2020ರಿಂದ 2022ರವರೆಗೆ ಒಟ್ಟು 9 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. 2019ರಿಂದ 2022ರವರಗೆ ಒಟ್ಟು 28 ಮಂದಿ ಗಾಯಗೊಂಡಿದ್ದಾರೆ. ಆನೆ ದಾಳಿಯಿಂದ 2019–20ರಲ್ಲಿ 1,412 ಎಕರೆ, 2020–21ರಲ್ಲಿ 1,317, 2021–22ರಲ್ಲಿ 1,360 ಎಕರೆ ಫಸಲು ನಾಶವಾಗಿದೆ’ ಎಂದು ಹೇಳಿದರು.</p>.<p>‘ಲಾಂಟಾನ ಗಿಡಗಳಿಂದ ಆಹಾರದ ಸಮಸ್ಯೆ ಸೃಷ್ಟಿಸಿದೆ. ನಾಗರಹೊಳೆಯಲ್ಲಿ ನರೇಗಾ ಯೋಜನೆಯಡಿ 800 ಹೆಕ್ಟೇರ್ ಪ್ರದೇಶದಲ್ಲಿ ಲಾಂಟಾನ ಗಿಡ ತೆರವುಗೊಳಿಸಿ, ಹುಲ್ಲುಗಾವಲು ಪ್ರದೇಶ ನಿರ್ಮಿಸಲಾಗಿದೆ. ಅರಣ್ಯದಲ್ಲಿ 61 ಹಡ್ಲುಗಳಿದ್ದು (ಹುಲ್ಲು ಪ್ರದೇಶ) ವರ್ಷದ ಎಲ್ಲಾ ದಿನವೂ ಮೇವು ಸಿಗಲಿದೆ. ಕಾನನದಲ್ಲಿ 261 ಕೆರೆಗಳಲ್ಲಿ 6 ದೊಡ್ಡ ಕೆರೆಗಳಿವೆ. ಆನೆಗೆ ಅತಿ ಪ್ರಿಯವಾದ ಆಹಾರ ಬೊಂಬು. ಆನೆಗಳ ಸಂಖ್ಯೆಗೆ ಅನುಗುಣವಾಗಿ ಕಾನನದಲ್ಲಿ 2020ರಲ್ಲಿ 6ರಿಂದ 7 ಟನ್ ಬೊಂಬು ಬಿತ್ತನೆ ಅಭಿಯಾನ ನಡೆಸಲಾಗಿತ್ತು. ಇದರ ಫಲವಾಗಿ ಬೊಂಬು ವ್ಯಾಪಕವಾಗಿ ಆವರಿಸಿದೆ’ ಎಂದು ವಿವರಿಸಿದರು.</p>.<p><em><strong>ಅರಣ್ಯದಲ್ಲಿ ಆನೆಗಳೊಂದಿಗೆ ನಾವು ಜೀವನ ಕಳೆದಿದ್ದೇವೆ. ಪುನರ್ವಸತಿಗೊಂಡು ಕೃಷಿ ಬೇಸಾಯದಲ್ಲಿ ತೊಡಗಿದ್ದೇವೆ. ಕಾಡಾನೆ ದಾಳಿಯಿಂದ ಬೆಳೆ ನಾಶವಾಗುತ್ತಿದೆ.</strong></em></p>.<p><em>–ಜೆ.ಕೆ.ಮಣಿ, ನಾಗಾಪುರ ಪುನರ್ವಸತಿ ಕೇಂದ್ರದ ನಿವಾಸಿ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>