<p><strong>ನಂಜನಗೂಡು</strong>: ಇಲ್ಲಿನ ನಗರಸಭೆಯ ವಿವಿಧ ಸುಂಕ ವಸೂಲಾತಿ ಹಕ್ಕುಗಳ ಹರಾಜು ಪ್ರಕ್ರಿಯೆಯನ್ನು ಶನಿವಾರ ನಗರಸಭೆ ಸಭಾಂಗಣದಲ್ಲಿ ನಗರಸಭೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯಿತು.</p>.<p>ನಗರಸಭೆ ವ್ಯಾಪ್ತಿಯಲ್ಲಿ ನೆಲ ಸುಂಕ ವಸೂಲಾತಿ ಹಕ್ಕನ್ನು ಮಂಜುನಾಥ್ ₹8.5 ಲಕ್ಷ ಮೊತ್ತದ ಬಿಡ್ ಕೂಗಿ ಪಡೆದುಕೊಂಡರು. ಖಾಸಗಿ ಬಸ್ ನಿಲ್ದಾಣ ಹಾಗೂ ಟೆಂಟೊ ಸ್ಟ್ಯಾಂಡ್ಗಳಲ್ಲಿ ವಾಹನ ನಿಲುಗಡೆ ವಸೂಲಾತಿ ಸುಂಕವನ್ನು ವಸೂಲಿ ಮಾಡುವ ಹಕ್ಕನ್ನು ಪಡೆಯಲು ಯಾರು ಮುಂದಾಗದಿದ್ದರಿಂದಾಗಿ ಹರಾಜನ್ನು ಮುಂದುಡಲಾಯಿತು.</p>.<p>ನೀರು ಸರಬರಾಜು ಯೋಜನೆಯ ಮತ್ತು ಬೀದಿ ದೀಪ ನಿರ್ವಹಣೆಯ ಹಳೆಯ ಅನುಪಯುಕ್ತ ಸಾಮಗ್ರಿ ಮತ್ತು ಆರೋಗ್ಯ ಶಾಖೆಯ ಅನುಪಯುಕ್ತ ವಾಹನಗಳು ಹಾಗೂ ಹಳೆಯ ಟೈರ್ಗಳ ಹರಾಜು ಬಿಡ್ಗಳಲ್ಲಿ ಒಬ್ಬರೆ ವ್ಯಕ್ತಿ ಭಾಗವಹಿಸಿದ್ದರಿಂದ ₹3.8 ಲಕ್ಷ ಬಿಡ್ಗೆ ಹಕ್ಕನ್ನು ನೀಡಲಾಯಿತು. ಸದಸ್ಯರು ಒಬ್ಬರೆ ಬಿಡ್ದಾರರಿಗೆ ಹಕ್ಕನ್ನು ನೀಡುವ ವಿಚಾರವಾಗಿ ತಕರಾರು ತೆಗೆದರು.</p>.<p>ನಗರಸಭೆ ಆಯುಕ್ತ ವಿಜಯ್ ಮಾತನಾಡಿ, ‘ಕೆಲವು ಬಾಬ್ತುಗಳ ಬಿಡ್ ನಡೆಸಲು ಯಾರು ಭಾಗವಹಿಸಿಲ್ಲ, ಕೆಲವಕ್ಕೆ ಬಬ್ಬರೆ ವ್ಯಕ್ತಿ ಬಿಡ್ ಕೂಗಿದ್ದಾರೆ, ಈ ವಿಚಾರವನ್ನು ನಗರಸಭೆ ಕೌನ್ಸಿಲ್ ಮುಂದೆ ಇಟ್ಟು ನಗರಸಭೆ ಅಧ್ಯಕ್ಷರು ಈ ವಿಚಾರವಾಗಿ ಕೈಗೊಳ್ಳಲಾಗುವ ತಿರ್ಮಾನದಂತೆ ಮುಂದುವರೆಯಲಾಗುವುದು’ ಎಂದು ತಿಳಿಸಿದರು.</p>.<p>ಹರಾಜು ಪ್ರಕ್ರಿಯೆಯಲ್ಲಿ ನಗರಸಭೆ ಉಪಾಧ್ಯಕ್ಷೆ ರೆಹೆನಬಾನು, ಸದಸ್ಯರಾದ ಪ್ರದೀಪ್, ಗಾಯಿತ್ರಿ, ಖಾಲೀದ್ ಅಹಮ್ಮದ್, ಕಪಿಲೇಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಂಜನಗೂಡು</strong>: ಇಲ್ಲಿನ ನಗರಸಭೆಯ ವಿವಿಧ ಸುಂಕ ವಸೂಲಾತಿ ಹಕ್ಕುಗಳ ಹರಾಜು ಪ್ರಕ್ರಿಯೆಯನ್ನು ಶನಿವಾರ ನಗರಸಭೆ ಸಭಾಂಗಣದಲ್ಲಿ ನಗರಸಭೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯಿತು.</p>.<p>ನಗರಸಭೆ ವ್ಯಾಪ್ತಿಯಲ್ಲಿ ನೆಲ ಸುಂಕ ವಸೂಲಾತಿ ಹಕ್ಕನ್ನು ಮಂಜುನಾಥ್ ₹8.5 ಲಕ್ಷ ಮೊತ್ತದ ಬಿಡ್ ಕೂಗಿ ಪಡೆದುಕೊಂಡರು. ಖಾಸಗಿ ಬಸ್ ನಿಲ್ದಾಣ ಹಾಗೂ ಟೆಂಟೊ ಸ್ಟ್ಯಾಂಡ್ಗಳಲ್ಲಿ ವಾಹನ ನಿಲುಗಡೆ ವಸೂಲಾತಿ ಸುಂಕವನ್ನು ವಸೂಲಿ ಮಾಡುವ ಹಕ್ಕನ್ನು ಪಡೆಯಲು ಯಾರು ಮುಂದಾಗದಿದ್ದರಿಂದಾಗಿ ಹರಾಜನ್ನು ಮುಂದುಡಲಾಯಿತು.</p>.<p>ನೀರು ಸರಬರಾಜು ಯೋಜನೆಯ ಮತ್ತು ಬೀದಿ ದೀಪ ನಿರ್ವಹಣೆಯ ಹಳೆಯ ಅನುಪಯುಕ್ತ ಸಾಮಗ್ರಿ ಮತ್ತು ಆರೋಗ್ಯ ಶಾಖೆಯ ಅನುಪಯುಕ್ತ ವಾಹನಗಳು ಹಾಗೂ ಹಳೆಯ ಟೈರ್ಗಳ ಹರಾಜು ಬಿಡ್ಗಳಲ್ಲಿ ಒಬ್ಬರೆ ವ್ಯಕ್ತಿ ಭಾಗವಹಿಸಿದ್ದರಿಂದ ₹3.8 ಲಕ್ಷ ಬಿಡ್ಗೆ ಹಕ್ಕನ್ನು ನೀಡಲಾಯಿತು. ಸದಸ್ಯರು ಒಬ್ಬರೆ ಬಿಡ್ದಾರರಿಗೆ ಹಕ್ಕನ್ನು ನೀಡುವ ವಿಚಾರವಾಗಿ ತಕರಾರು ತೆಗೆದರು.</p>.<p>ನಗರಸಭೆ ಆಯುಕ್ತ ವಿಜಯ್ ಮಾತನಾಡಿ, ‘ಕೆಲವು ಬಾಬ್ತುಗಳ ಬಿಡ್ ನಡೆಸಲು ಯಾರು ಭಾಗವಹಿಸಿಲ್ಲ, ಕೆಲವಕ್ಕೆ ಬಬ್ಬರೆ ವ್ಯಕ್ತಿ ಬಿಡ್ ಕೂಗಿದ್ದಾರೆ, ಈ ವಿಚಾರವನ್ನು ನಗರಸಭೆ ಕೌನ್ಸಿಲ್ ಮುಂದೆ ಇಟ್ಟು ನಗರಸಭೆ ಅಧ್ಯಕ್ಷರು ಈ ವಿಚಾರವಾಗಿ ಕೈಗೊಳ್ಳಲಾಗುವ ತಿರ್ಮಾನದಂತೆ ಮುಂದುವರೆಯಲಾಗುವುದು’ ಎಂದು ತಿಳಿಸಿದರು.</p>.<p>ಹರಾಜು ಪ್ರಕ್ರಿಯೆಯಲ್ಲಿ ನಗರಸಭೆ ಉಪಾಧ್ಯಕ್ಷೆ ರೆಹೆನಬಾನು, ಸದಸ್ಯರಾದ ಪ್ರದೀಪ್, ಗಾಯಿತ್ರಿ, ಖಾಲೀದ್ ಅಹಮ್ಮದ್, ಕಪಿಲೇಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>