ಯಾವುದೇ ವಿವಾದಾತ್ಮಕ ವಿಚಾರವನ್ನು ವೈಭವೀಕರಣ ಮಾಡಬಾರದು. ಆ ನಿಟ್ಟಿನಲ್ಲಿ ಧರ್ಮಸ್ಥಳ ಪ್ರಕರಣವನ್ನು ಸರ್ವಧರ್ಮ ಸೌಹಾರ್ದ ಬಯಸುವ ಎಲ್ಲರೂ ಖಂಡಿಸಬೇಕು. ಕ್ಷೇತ್ರದ ವಿರುದ್ಧದ ಅಪಪ್ರಚಾರ ಸುಳ್ಳು ಆರೋಪ ನಿಲ್ಲಬೇಕು
– ಡಾ. ಸಿ.ಎನ್. ಮಂಜುನಾಥ್, ಸಂಸದ
ರಾಜಕಾರಣ ಮಾಧ್ಯಮ ಸೇರಿ ಎಲ್ಲಾ ರಂಗಗಳು ಕಲುಷಿತವಾಗಿದ್ದು ಶುದ್ಧೀಕರಣದ ಕೆಲಸ ಆಗಬೇಕಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಪತ್ರಿಕೋದ್ಯಮದ ಪಾತ್ರ ಮಹತ್ವದ್ದು. ಅದರ ಮೌಲ್ಯಗಳು ಉಳಿಯಬೇಕು. ಇದರಲ್ಲಿ ಸಂಘದ ಜವಾಬ್ದಾರಿ ದೊಡ್ಡದು
– ಎಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ
ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಗಳು ತಮ್ಮದೇ ಆದ ಅಭಿಪ್ರಾಯ ಮತ್ತು ಅಜೆಂಡಾವನ್ನು ಜನರ ಮೇಲೆ ಹೇರುವ ಕೆಲಸವನ್ನು ಮಾಡುತ್ತಿವೆ. ಸಮಾಜದ ಸ್ವಾಸ್ಥ್ಯಕ್ಕೆ ಇದು ಅಪಾಯಕಾರಿ. ಮಾಧ್ಯಮದವರ ಬಗ್ಗೆ ಗೌರವದ ಜೊತೆಗೆ ಭಯಪಡಬೇಕಾದ ಸ್ಥಿತಿ ಇದೆ