‘ಒಂದೆರಡು ಅಡಿಯಷ್ಟು ಅಗಲದ ಹಳ್ಳ ಕಾಡಿನ ನಡುವೆ ಹರಿದಿತ್ತು. ಈಗ ಅದು ನದಿಯ ಗಾತ್ರಕ್ಕೆ ಹಿಗ್ಗಿದೆ. ತೇಗ, ಸಾಗವಾನಿ ಸೇರಿದಂತೆ ನೂರಾರು ದೊಡ್ಡಗಾತ್ರದ ಮರಗಳು ಬುಡಸಮೇತ ತಿರುಚಿ ಬಿದ್ದಿರುವುದು ಕುಸಿತದ ಭೀಕರತೆ ತೋರಿಸುತ್ತದೆ. ಬೆಳಕು ಕಾಣದ ದಟ್ಟ ಕಾಡಿನಲ್ಲಿ ಎಕರೆಗಟ್ಟಲೆ ಪ್ರದೇಶ ಬಯಲಾಗಿ ಮಾರ್ಪಟ್ಟಿದೆ’ ಎನ್ನುತ್ತಾರೆ ಗದ್ದೆಹಳ್ಳಿಯ ಲಕ್ಷೀಕಾಂತ ಹೆಗಡೆ.