<p><strong>ಹೊಸಪೇಟೆ (ವಿಜಯನಗರ):</strong> ನೋವು ನಿವಾರಕಗಳಲ್ಲಿ ಆಯುರ್ವೇದ ಕ್ಷೇತ್ರದಲ್ಲೂ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳಿವೆ. ವಿದ್ಧ, ಅಗ್ನಿಕರ್ಮ ವಿಧಾನಗಳು ಅವುಗಳಲ್ಲಿ ಪ್ರಮುಖವಾದುದು. ಇದರ ಬಗ್ಗೆ ಡಿ.14ರಂದು ವೈದ್ಯರಿಗೆ ಒಂದು ದಿನದ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಭಾರತೀಯ ಆಯುಷ್ ಒಕ್ಕೂಟ (ಎಎಫ್ಐ) ತಿಳಿಸಿದೆ.</p>.<p>ಒಕ್ಕೂಟದ ಹೊಸಪೇಟೆ ಘಟಕದ ಅಧ್ಯಕ್ಷ ಡಾ.ಬಿ.ವಿ.ಭಟ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಸಾಯಿಲೀಲಾ ರಂಗಮಂದಿರದಲ್ಲಿ 14ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ರಾಷ್ಟ್ರಮಟ್ಟದ ಈ ಕಾರ್ಯಾಗಾರ ನಡೆಯಲಿದೆ, ಹೊರರಾಜ್ಯಗಳಿಂದ 200 ಮಂದಿ ಸಹಿತ 400ರಷ್ಟು ವೈದ್ಯರು, 50ಕ್ಕಿಂತ ಅಧಿಕ ರೋಗಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.</p>.<p>ಪುಣೆಯ ವೈದ್ಯ ಡಾ.ಚಂದ್ರಕುಮಾರ್ ದೇಶಮುಖ್ ಅವರು ವಿದ್ಧ, ಅಗ್ನಿಕರ್ಮ ಚಿಕಿತ್ಸೆ ಕುರಿತು ಮಾಹಿತಿ ನೀಡಲಿದ್ದಾರೆ. ಮಧ್ಯಾಹ್ನದ ನಂತರ ಪ್ರಾಯೋಗಿಕ ಚಿಕಿತ್ಸೆ ನಡೆಯಲಿದೆ. ಈ ಚಿಕಿತ್ಸಾ ವಿಧಾನ ಕಲಿತ ವೈದ್ಯರು ತಮ್ಮ ಗ್ರಾಹಕ ರೋಗಿಗಳಿಗೆ ಇದನ್ನು ಮನವರಿಕೆ ಮಾಡಲಿದ್ದಾರೆ, ಈ ಮೂಲಕ ಮುಂದಿನ 10 ವರ್ಷದೊಳಗೆ ನೋವು ನಿವಾರಕ ಕ್ಷೇತ್ರದಲ್ಲಿ ಆಯುರ್ವೇದ ಪದ್ಧತಿಯನ್ನು ಮನೆಮಾತಾಗಿಸುವುದು ಈ ಕಾರ್ಯಾಗಾರದ ಉದ್ದೇಶ ಎಂದರು.</p>.<p>‘ವಿದ್ಧ ಎಂದರೆ ಒಂದು ಬಗೆಯ ಸೂಜಿ ಚಿಕಿತ್ಸೆ, ಅಗ್ನಿಕರ್ಮ ಎಂದರೆ ನೋವಿನ ಮೂಲವನ್ನು ಹುಡುಕಿ ಶಾಖ ನೀಡಿ ನೋವು ನಿವಾರಿಸುವ ವಿಧಾನ. ಈ ಎರಡೂ ವಿಧಾನಗಳು ಬಹಳ ಪರಿಣಾಮಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ. ಈಚೆಗೆ ನಗರದ ರೋಟರಿ ಸಭಾಂಗಣದಲ್ಲಿ ನಡೆದ ಉಚಿತ ಆಯುಷ್ ಚಿಕಿತ್ಸಾ ಶಿಬಿರದಲ್ಲೂ ಹಲವರು ಈ ಚಿಕಿತ್ಸೆಗೆ ಒಳಪಟ್ಟು ನೋವು ನಿವಾರಣೆ ಮಾಡಿಕೊಂಡಿದ್ದಾರೆ’ ಎಂದು ಡಾ.ಮುನಿವಾಸುದೇವ ರೆಡ್ಡಿ ಹೇಳಿದರು.</p>.<p>ಜಿಲ್ಲಾ ಆಯುಷ್ ಒಕ್ಕೂಟದ ಅಧ್ಯಕ್ಷ ಡಾ.ಕೇದಾರೇಶ್ವರ ಎಂ.ಡಿ., ಕಾರ್ಯದರ್ಶಿ ಡಾ.ಸಿಕಂದರ್ ಬಿ., ಬೋಧಾವ್ಯದ ಸಂಘಟನಾ ಕಾರ್ಯದರ್ಶಿ ಡಾ.ಗುರುಮಹಾಂತೇಶ ಟಿ.ಎಂ., ಡಾ.ದಾಸು ರಾವ್, ಡಾ.ಗುರುಬಸವರಾಜ್, ಡಾ.ಆನಂದ್, ಡಾ.ಶಬ್ಬೀರ್ ಅಹ್ಮದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ನೋವು ನಿವಾರಕಗಳಲ್ಲಿ ಆಯುರ್ವೇದ ಕ್ಷೇತ್ರದಲ್ಲೂ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳಿವೆ. ವಿದ್ಧ, ಅಗ್ನಿಕರ್ಮ ವಿಧಾನಗಳು ಅವುಗಳಲ್ಲಿ ಪ್ರಮುಖವಾದುದು. ಇದರ ಬಗ್ಗೆ ಡಿ.14ರಂದು ವೈದ್ಯರಿಗೆ ಒಂದು ದಿನದ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಭಾರತೀಯ ಆಯುಷ್ ಒಕ್ಕೂಟ (ಎಎಫ್ಐ) ತಿಳಿಸಿದೆ.</p>.<p>ಒಕ್ಕೂಟದ ಹೊಸಪೇಟೆ ಘಟಕದ ಅಧ್ಯಕ್ಷ ಡಾ.ಬಿ.ವಿ.ಭಟ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಸಾಯಿಲೀಲಾ ರಂಗಮಂದಿರದಲ್ಲಿ 14ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ರಾಷ್ಟ್ರಮಟ್ಟದ ಈ ಕಾರ್ಯಾಗಾರ ನಡೆಯಲಿದೆ, ಹೊರರಾಜ್ಯಗಳಿಂದ 200 ಮಂದಿ ಸಹಿತ 400ರಷ್ಟು ವೈದ್ಯರು, 50ಕ್ಕಿಂತ ಅಧಿಕ ರೋಗಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.</p>.<p>ಪುಣೆಯ ವೈದ್ಯ ಡಾ.ಚಂದ್ರಕುಮಾರ್ ದೇಶಮುಖ್ ಅವರು ವಿದ್ಧ, ಅಗ್ನಿಕರ್ಮ ಚಿಕಿತ್ಸೆ ಕುರಿತು ಮಾಹಿತಿ ನೀಡಲಿದ್ದಾರೆ. ಮಧ್ಯಾಹ್ನದ ನಂತರ ಪ್ರಾಯೋಗಿಕ ಚಿಕಿತ್ಸೆ ನಡೆಯಲಿದೆ. ಈ ಚಿಕಿತ್ಸಾ ವಿಧಾನ ಕಲಿತ ವೈದ್ಯರು ತಮ್ಮ ಗ್ರಾಹಕ ರೋಗಿಗಳಿಗೆ ಇದನ್ನು ಮನವರಿಕೆ ಮಾಡಲಿದ್ದಾರೆ, ಈ ಮೂಲಕ ಮುಂದಿನ 10 ವರ್ಷದೊಳಗೆ ನೋವು ನಿವಾರಕ ಕ್ಷೇತ್ರದಲ್ಲಿ ಆಯುರ್ವೇದ ಪದ್ಧತಿಯನ್ನು ಮನೆಮಾತಾಗಿಸುವುದು ಈ ಕಾರ್ಯಾಗಾರದ ಉದ್ದೇಶ ಎಂದರು.</p>.<p>‘ವಿದ್ಧ ಎಂದರೆ ಒಂದು ಬಗೆಯ ಸೂಜಿ ಚಿಕಿತ್ಸೆ, ಅಗ್ನಿಕರ್ಮ ಎಂದರೆ ನೋವಿನ ಮೂಲವನ್ನು ಹುಡುಕಿ ಶಾಖ ನೀಡಿ ನೋವು ನಿವಾರಿಸುವ ವಿಧಾನ. ಈ ಎರಡೂ ವಿಧಾನಗಳು ಬಹಳ ಪರಿಣಾಮಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ. ಈಚೆಗೆ ನಗರದ ರೋಟರಿ ಸಭಾಂಗಣದಲ್ಲಿ ನಡೆದ ಉಚಿತ ಆಯುಷ್ ಚಿಕಿತ್ಸಾ ಶಿಬಿರದಲ್ಲೂ ಹಲವರು ಈ ಚಿಕಿತ್ಸೆಗೆ ಒಳಪಟ್ಟು ನೋವು ನಿವಾರಣೆ ಮಾಡಿಕೊಂಡಿದ್ದಾರೆ’ ಎಂದು ಡಾ.ಮುನಿವಾಸುದೇವ ರೆಡ್ಡಿ ಹೇಳಿದರು.</p>.<p>ಜಿಲ್ಲಾ ಆಯುಷ್ ಒಕ್ಕೂಟದ ಅಧ್ಯಕ್ಷ ಡಾ.ಕೇದಾರೇಶ್ವರ ಎಂ.ಡಿ., ಕಾರ್ಯದರ್ಶಿ ಡಾ.ಸಿಕಂದರ್ ಬಿ., ಬೋಧಾವ್ಯದ ಸಂಘಟನಾ ಕಾರ್ಯದರ್ಶಿ ಡಾ.ಗುರುಮಹಾಂತೇಶ ಟಿ.ಎಂ., ಡಾ.ದಾಸು ರಾವ್, ಡಾ.ಗುರುಬಸವರಾಜ್, ಡಾ.ಆನಂದ್, ಡಾ.ಶಬ್ಬೀರ್ ಅಹ್ಮದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>