ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಭೇಟಿ ನೀಡಿರುವ ಅವರು ಅಲ್ಲಿನ ದೇವಸ್ಥಾನ, ಕೋಟೆ ಕೊತ್ತಲ, ಪ್ರಾಗೈತಿಹಾಸಿಕ ನೆಲೆಗಳ ಅಪರೂಪದ ಸಂಗತಿಗಳ ಸುತ್ತ ಆಳವಾದ ಅಧ್ಯಯನ ನಡೆಸಿ, ಅದನ್ನು ದಾಖಲಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 15 ಪ್ರಾಗೈತಿಹಾಸಿಕ ನೆಲೆಗಳನ್ನು ಪತ್ತೆ ಹಚ್ಚಿರುವುದು ವಿಶೇಷ. ಚಿತ್ರದುರ್ಗದ ಸಂಗೇನಹಳ್ಳಿಯಲ್ಲಿಹಳೇ ಶಿಲಾಯುಗದ ನೆಲೆ, ಕಲ್ಲು ಬಂಡೆಗಳ ಮೇಲೆ ಬಿಡಿಸಿದ ರೇಖಾಚಿತ್ರ,ಹಳೇ ಶಿಲಾಯುಗದ ಆಯುಧ, ಚಿಪ್ಪಿನಕೆರೆಯಲ್ಲಿ ಮಣ್ಣಿನ ಮಡಕೆ, ಬೂದಿಗುಡ್ಡದ ನೆಲೆ, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಶಿಲಾಯುಗದ ಪಳೆಯುಳಿಕೆ ಗುರುತಿಸಿರುವುದು ಪ್ರಮುಖವಾದವುಗಳು.