<p><strong>ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ):</strong> ಪಟ್ಟಣದ ಹೊರವಲಯದಲ್ಲಿ ಇರುವ ಚಿಂತ್ರಪಳ್ಳಿ ಕೆರೆಯಲ್ಲಿ ‘ರೋಸಿ ಸ್ಟಾರ್ಲಿಂಗ್’ (ಗುಲಾಬಿ ಕಬ್ಬಕ್ಕಿ) ಪಕ್ಷಿಗಳ ಕಲರವ ಮನೆಮಾಡಿದೆ. ನೋಡುಗರನ್ನು ಮುದಗೊಳಿಸುತ್ತಿವೆ.</p>.<p>ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ಹೆಸರಾಂತ ಅಂಕಸಮುದ್ರ ಪಕ್ಷಿಧಾಮದ ಹತ್ತಿರದಲ್ಲಿ, 275 ಎಕರೆ ವಿಸ್ತೀರ್ಣದ ಚಿಂತ್ರಪಳ್ಳಿ ಕೆರೆಗೆ ಸಾವಿರಾರು ಪಕ್ಷಿಗಳು ವಲಸೆ ಬಂದಿದೆ.</p>.<p>ಹರಪನಹಳ್ಳಿಯ ಪಾಳೇಗಾರನಾಗಿದ್ದ ಸೋಮಶೇಖರ ನಾಯಕ ಈ ಕೆರೆ ನಿರ್ಮಿಸಿದ್ದನೆಂದು ಇತಿಹಾಸ ಹೇಳುತ್ತದೆ. ಇಲ್ಲಿಗೆ ಆಹಾರ ಅರಸಿ ದೇಶ, ವಿದೇಶಗಳ ಹಕ್ಕಿಗಳು ವಲಸೆ ಬರುತ್ತಿವೆ. ಈ ವರ್ಷ ಮುಖ್ಯವಾಗಿ ಯುರೋಪ್ನಿಂದ ರೋಸಿ ಸ್ಟಾರ್ಲಿಂಗ್ ಪಕ್ಷಿಗಳು ಬಂದಿವೆ.</p>.<p>ಕೆರೆ ದಡದ ಗಿಡಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು ಕುಳಿತಾಗ ಮಲ್ಲಿಗೆ ಮೊಗ್ಗಿನ ಮಾಲೆಯಂತೆ ಭಾಸವಾಗುತ್ತದೆ. ಅವು ಪುರ್ರನೆ ಹಾರಿದಾಗ ಬಾನಿಗೆ ಬಲೆ ಬೀಸಿದಂತೆ ದೃಶ್ಯಕಾವ್ಯ ಮೂಡುತ್ತದೆ.</p>.<p>ಪಕ್ಷಿಧಾಮದ ಜತೆಗೆ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶ, ತಾಲ್ಲೂಕಿನ ಮಾಲವಿ ಜಲಾಶಯ, ತಿಗಳನ ಕೆರೆ, ಭೀಮನಕೆರೆ, ಓಬಳಾಪುರ ಕೆರೆಗಳಲ್ಲೂ ಕೆಲ ಅಪರೂಪದ ಬಾನಾಡಿಗಳು ವಾಸ್ತವ್ಯ ಹೂಡುತ್ತಿವೆ. ಹೀಗಾಗಿ ಹಗರಿಬೊಮ್ಮಮಹಳ್ಳಿ ತಾಲ್ಲೂಕು ವಿಶಾಲ ಪಕ್ಷಿಧಾಮದಂತೆಯೇ ಭಾಸವಾಗುತ್ತಿದೆ.</p>.<p>‘ಅಂಕಸಮುದ್ರ ಪಕ್ಷಿಧಾಮದ ಜತೆಗೆ ಇತರ ಕೆರೆಗಳತ್ತಲೂ ಹಕ್ಕಿಗಳು ವಲಸೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಪರಿಸರ ಶುದ್ಧವಾಗಿದ್ದಷ್ಟೂ ಪಕ್ಷಿಗಳ ವಲಸೆ, ವಾಸ ನಿಶ್ಚಿತ’ ಎನ್ನುತ್ತಾರೆ ಬಾಂಬೆ ನ್ಯಾಚುರಲ್ಹಿಸ್ಟರಿ ಸೊಸೈಟಿ (ಬಿಎನ್ಎಚ್ಎಸ್) ಸಂಶೋಧಕ ಎಚ್.ರಮೇಶ್. </p>.<div><blockquote>ಚಿಂತ್ರಪಳ್ಳಿ ಕೆರೆಗೆ ವಿದೇಶಿ ಹಕ್ಕಿಗಳು ಬರುತ್ತಿರುವ ಕಾರಣ ಕೆರೆ ಸಂರಕ್ಷಣೆಯ ಜತೆಗೆ ಬೇಟೆಗಾರರಿಂದ ಹಕ್ಕಿಗಳನ್ನು ರಕ್ಷಿಸುವ ಕೆಲಸವೂ ಅಗತ್ಯವಾಗಿ ಆಗಬೇಕು </blockquote><span class="attribution">ಟಿ.ಕೊಟ್ರೇಶ್ ಪಕ್ಷಿಪ್ರೇಮಿ ಚಿಂತ್ರಪಳ್ಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ):</strong> ಪಟ್ಟಣದ ಹೊರವಲಯದಲ್ಲಿ ಇರುವ ಚಿಂತ್ರಪಳ್ಳಿ ಕೆರೆಯಲ್ಲಿ ‘ರೋಸಿ ಸ್ಟಾರ್ಲಿಂಗ್’ (ಗುಲಾಬಿ ಕಬ್ಬಕ್ಕಿ) ಪಕ್ಷಿಗಳ ಕಲರವ ಮನೆಮಾಡಿದೆ. ನೋಡುಗರನ್ನು ಮುದಗೊಳಿಸುತ್ತಿವೆ.</p>.<p>ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ಹೆಸರಾಂತ ಅಂಕಸಮುದ್ರ ಪಕ್ಷಿಧಾಮದ ಹತ್ತಿರದಲ್ಲಿ, 275 ಎಕರೆ ವಿಸ್ತೀರ್ಣದ ಚಿಂತ್ರಪಳ್ಳಿ ಕೆರೆಗೆ ಸಾವಿರಾರು ಪಕ್ಷಿಗಳು ವಲಸೆ ಬಂದಿದೆ.</p>.<p>ಹರಪನಹಳ್ಳಿಯ ಪಾಳೇಗಾರನಾಗಿದ್ದ ಸೋಮಶೇಖರ ನಾಯಕ ಈ ಕೆರೆ ನಿರ್ಮಿಸಿದ್ದನೆಂದು ಇತಿಹಾಸ ಹೇಳುತ್ತದೆ. ಇಲ್ಲಿಗೆ ಆಹಾರ ಅರಸಿ ದೇಶ, ವಿದೇಶಗಳ ಹಕ್ಕಿಗಳು ವಲಸೆ ಬರುತ್ತಿವೆ. ಈ ವರ್ಷ ಮುಖ್ಯವಾಗಿ ಯುರೋಪ್ನಿಂದ ರೋಸಿ ಸ್ಟಾರ್ಲಿಂಗ್ ಪಕ್ಷಿಗಳು ಬಂದಿವೆ.</p>.<p>ಕೆರೆ ದಡದ ಗಿಡಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು ಕುಳಿತಾಗ ಮಲ್ಲಿಗೆ ಮೊಗ್ಗಿನ ಮಾಲೆಯಂತೆ ಭಾಸವಾಗುತ್ತದೆ. ಅವು ಪುರ್ರನೆ ಹಾರಿದಾಗ ಬಾನಿಗೆ ಬಲೆ ಬೀಸಿದಂತೆ ದೃಶ್ಯಕಾವ್ಯ ಮೂಡುತ್ತದೆ.</p>.<p>ಪಕ್ಷಿಧಾಮದ ಜತೆಗೆ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶ, ತಾಲ್ಲೂಕಿನ ಮಾಲವಿ ಜಲಾಶಯ, ತಿಗಳನ ಕೆರೆ, ಭೀಮನಕೆರೆ, ಓಬಳಾಪುರ ಕೆರೆಗಳಲ್ಲೂ ಕೆಲ ಅಪರೂಪದ ಬಾನಾಡಿಗಳು ವಾಸ್ತವ್ಯ ಹೂಡುತ್ತಿವೆ. ಹೀಗಾಗಿ ಹಗರಿಬೊಮ್ಮಮಹಳ್ಳಿ ತಾಲ್ಲೂಕು ವಿಶಾಲ ಪಕ್ಷಿಧಾಮದಂತೆಯೇ ಭಾಸವಾಗುತ್ತಿದೆ.</p>.<p>‘ಅಂಕಸಮುದ್ರ ಪಕ್ಷಿಧಾಮದ ಜತೆಗೆ ಇತರ ಕೆರೆಗಳತ್ತಲೂ ಹಕ್ಕಿಗಳು ವಲಸೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಪರಿಸರ ಶುದ್ಧವಾಗಿದ್ದಷ್ಟೂ ಪಕ್ಷಿಗಳ ವಲಸೆ, ವಾಸ ನಿಶ್ಚಿತ’ ಎನ್ನುತ್ತಾರೆ ಬಾಂಬೆ ನ್ಯಾಚುರಲ್ಹಿಸ್ಟರಿ ಸೊಸೈಟಿ (ಬಿಎನ್ಎಚ್ಎಸ್) ಸಂಶೋಧಕ ಎಚ್.ರಮೇಶ್. </p>.<div><blockquote>ಚಿಂತ್ರಪಳ್ಳಿ ಕೆರೆಗೆ ವಿದೇಶಿ ಹಕ್ಕಿಗಳು ಬರುತ್ತಿರುವ ಕಾರಣ ಕೆರೆ ಸಂರಕ್ಷಣೆಯ ಜತೆಗೆ ಬೇಟೆಗಾರರಿಂದ ಹಕ್ಕಿಗಳನ್ನು ರಕ್ಷಿಸುವ ಕೆಲಸವೂ ಅಗತ್ಯವಾಗಿ ಆಗಬೇಕು </blockquote><span class="attribution">ಟಿ.ಕೊಟ್ರೇಶ್ ಪಕ್ಷಿಪ್ರೇಮಿ ಚಿಂತ್ರಪಳ್ಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>