<p><strong>ವಡಗೇರಾ:</strong> ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ಶ್ರದ್ಧೆ–ಭಕ್ತಿಯಿಂದ ಮೊಹರಂ ಆಚರಿಸಲಾಯಿತು.</p>.<p>ಭಾನುವಾರ ರಾತ್ರಿಯಿಂದಲೇ ಅಲಾಯಿ ದೇವರಿಗೆ ಭಕ್ತರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಸೋಮವಾರ ಭಕ್ತರು ಅಲಾಯಿ ದೇವರಿಗೆ ನೈವೇದ್ಯ ಸಮರ್ಪಿಸಿ ತಮ್ಮ ಹರಕೆ ತೀರಿಸಿದರು.</p>.<p>ಮಕ್ಕಳು, ಯುವಕರು ಜಾತಿ ಭೇದ ಮರೆತು ಹುಲಿ ಹಾಗೂ ಹೆಣ್ಣಿನ ವೇಷಧರಿಸಿ ತಮಟೆ (ಹಲಿಗೆ) ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ ಗಮನ ಸೆಳೆದರು. ಕರಡಿ ಕುಣಿತ, ಬಯಲಾಟ ವೇಷಧಾರಿಗಳು ಜನಮನಸೂರೆಗೊಂಡರು.</p>.<p>ಘೋರ ಕರ್ಬಲಾ ಕಾಳಗದ ವರ್ಣನೆ, ಅನ್ಯಾಯ, ವಂಚನೆ, ಶೌರ್ಯ, ಬಲಿದಾನಗಳ ಐತಿಹಾಸಿಕ ಕಥನವನ್ನು ಗ್ರಾಮದ ಜಾನಪದ ಹಾಡುಗಾರರು ‘ಸವಾಲ್ ಜವಾಬ್’ ಹಾಡುಗಳಲ್ಲಿ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.</p>.<p>ವಡಗೇರಾ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ್ದ ಪುಷ್ಪಗಳಿಂದ ಸಿಂಗರಿಸಿದ್ದ ಪಂಜಾಗಳನ್ನು ಸೋಮವಾರ ಮೆರವಣಿಗೆ ನಡೆಸಿ, ದಫನ್ ಕಾರ್ಯಕ್ರಮದ ಮೂಲಕ ಮೊಹರಂ ಆಚರಣೆ ಸಂಪನ್ನಗೊಂಡಿತು. ಅಲಾಯಿ ದೇವರ ಮೆರವಣಿಗೆಯಲ್ಲಿ ಹಿಂದೂ–ಮುಸ್ಲಿಮರು ಪಾಲ್ಗೊಂಡು ಭಾವೈಕ್ಯ ಮೆರೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡಗೇರಾ:</strong> ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ಶ್ರದ್ಧೆ–ಭಕ್ತಿಯಿಂದ ಮೊಹರಂ ಆಚರಿಸಲಾಯಿತು.</p>.<p>ಭಾನುವಾರ ರಾತ್ರಿಯಿಂದಲೇ ಅಲಾಯಿ ದೇವರಿಗೆ ಭಕ್ತರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಸೋಮವಾರ ಭಕ್ತರು ಅಲಾಯಿ ದೇವರಿಗೆ ನೈವೇದ್ಯ ಸಮರ್ಪಿಸಿ ತಮ್ಮ ಹರಕೆ ತೀರಿಸಿದರು.</p>.<p>ಮಕ್ಕಳು, ಯುವಕರು ಜಾತಿ ಭೇದ ಮರೆತು ಹುಲಿ ಹಾಗೂ ಹೆಣ್ಣಿನ ವೇಷಧರಿಸಿ ತಮಟೆ (ಹಲಿಗೆ) ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾರೆ ಗಮನ ಸೆಳೆದರು. ಕರಡಿ ಕುಣಿತ, ಬಯಲಾಟ ವೇಷಧಾರಿಗಳು ಜನಮನಸೂರೆಗೊಂಡರು.</p>.<p>ಘೋರ ಕರ್ಬಲಾ ಕಾಳಗದ ವರ್ಣನೆ, ಅನ್ಯಾಯ, ವಂಚನೆ, ಶೌರ್ಯ, ಬಲಿದಾನಗಳ ಐತಿಹಾಸಿಕ ಕಥನವನ್ನು ಗ್ರಾಮದ ಜಾನಪದ ಹಾಡುಗಾರರು ‘ಸವಾಲ್ ಜವಾಬ್’ ಹಾಡುಗಳಲ್ಲಿ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.</p>.<p>ವಡಗೇರಾ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ್ದ ಪುಷ್ಪಗಳಿಂದ ಸಿಂಗರಿಸಿದ್ದ ಪಂಜಾಗಳನ್ನು ಸೋಮವಾರ ಮೆರವಣಿಗೆ ನಡೆಸಿ, ದಫನ್ ಕಾರ್ಯಕ್ರಮದ ಮೂಲಕ ಮೊಹರಂ ಆಚರಣೆ ಸಂಪನ್ನಗೊಂಡಿತು. ಅಲಾಯಿ ದೇವರ ಮೆರವಣಿಗೆಯಲ್ಲಿ ಹಿಂದೂ–ಮುಸ್ಲಿಮರು ಪಾಲ್ಗೊಂಡು ಭಾವೈಕ್ಯ ಮೆರೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>