15 ವರ್ಷ ಶಿವಲಿಂಗೇಗೌಡ ಎಲ್ಲಿದ್ದರು?
ಪರಿಶಿಷ್ಟರಿಗೆ ಜೆಡಿಎಸ್ ಏನೂ ಮಾಡಿಲ್ಲ. ಸಂಸದರು ಎಸ್ಸಿ-ಎಸ್ಟಿ ಸಭೆ ಕರೆದಿಲ್ಲ ಎಂಬ ಅರಸೀಕೆರೆ ಶಾಸಕ ಶಿವಲಿಂಗೇಗೌಡರ ಆರೋಪಕ್ಕೆ ತಿರುಗೇಟು ನೀಡಿದ ರೇವಣ್ಣ ‘ಅವರು 15 ವರ್ಷ ಎಲ್ಲಿದ್ದರು. ಬಿಳಿಚೌಡಯ್ಯ ಹುಚ್ಚೇಗೌಡರಿಗೆ ಅಧಿಕಾರ ಕೊಟ್ಟಿದ್ದು ಯಾರು’ ಎಂದು ಪ್ರಶ್ನಿಸಿದರು. ಅವರಿಗೆ ಬದ್ಧತೆ ಇದ್ದಿದ್ದರೆ ಬಿಳಿ ಚೌಡಯ್ಯ ಅವರನ್ನು ಗೃಹ ಮಂಡಳಿ ಅಧ್ಯಕ್ಷರನ್ನಾಗಿ ಮಾಡಬೇಕಿತ್ತು. ಪುಟ್ಟೇಗೌಡರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡ ಬಹುದಿತ್ತು. ನಮ್ಮಿಂದ ಹೋದ ಕೆಲ ಮುಖಂಡರನ್ನು ಬೀದಿಪಾಲು ಮಾಡಿದ್ದೇಕೆ ಎಂದು ಕೇಳಿದರು. ದೇವೇಗೌಡರ ಹೆಸರಲ್ಲಿ ಶಾಸಕರಾಗಿದ್ದರು. 9 ತಿಂಗಳಿಂದ ಅವರ ಸರ್ಕಾರ ಜಿಲ್ಲೆಗೆ ಏನು ಮಾಡಿದೆ ಹೇಳಲಿ ಎಂದು ಸವಾಲು ಹಾಕಿದ ರೇವಣ್ಣ ಹುಡಾ ಅಧ್ಯಕ್ಷ ಹುದ್ದೆಯನ್ನು ಹರಾಜಿಗೆ ಇಟ್ಟಿದ್ದು ಎಷ್ಟಕ್ಕೆ ಅಂತ ಜನರ ಮುಂದೆ ಹೇಳಲಿ ಎಂದರು ಆಗ್ರಹಿಸಿದರು. ಬಿಜೆಪಿ ಸಂಸದರು ನಪುಂಸಕರು ಎನ್ನುವ ಸಚಿವ ರಾಜಣ್ಣ ಅವರ ಪಕ್ಷದ ಕೊಡುಗೆ ಏನು? ರಾಜ್ಯದ ನೀರಾವರಿ ಯೋಜನೆಗಳಿಗೆ ಹಣ ಕೊಡಲು ದೇವೇಗೌಡರು ಬರಬೇಕಿತ್ತಾ ಎಂದು ಪ್ರಶ್ನಿಸಿದರು.