ನವದೆಹಲಿ: ಬಾಲಿವುಡ್ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿಬಂದಿದೆ. ಇದೀಗ ನಟಿ ಕಂಗನಾ ರನೌತ್ ಅವರೂ ಅದಕ್ಕಾಗಿ ದನಿಗೂಡಿಸಿದ್ದಾರೆ.
ಈ ಸಂಬಂಧ ವಿಡಿಯೊವೊಂದನ್ನು ಹಂಚಿಕೊಂಡಿರುವ ಕಂಗನಾ, ಸತ್ಯವೇನೆಂಬುದನ್ನು ಬಿಚ್ಚಿಡುವ ಸಲುವಾಗಿ ಸಿಬಿಐ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
‘ಸುಶಾಂತ್ ಸಿಂಗ್ ರಜಪೂತ್ಗಾಗಿ ನಾವು ಸಿಬಿಐ ತನಿಖೆಯನ್ನು ಬಯಸುತ್ತಿದ್ದೇವೆ. ನಾವು ಸತ್ಯವನ್ನು ತಿಳಿಯುವ ಅರ್ಹತೆಯನ್ನು ಹೊಂದಿದ್ದೇವೆ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
ಮುಂಬೈನಲ್ಲಿರುವ ಬಾಂದ್ರಾ ನಿವಾಸದಲ್ಲಿ ಜೂನ್ 14ರಂದು ಸುಶಾಂತ್ ಅವರ ಮೃತದೇಹ ಪತ್ತೆಯಾಗಿತ್ತು. ಅವರ ಮರಣಾನಂತರ ಬಾಲಿವುಡ್ ಅಂಗಳದಲ್ಲಿನ ಸ್ವಜನ ಪಕ್ಷಪಾತದ ಚರ್ಚೆ ಮುನ್ನೆಲೆಗೆ ಬಂದಿತ್ತು.