ಬೆಂಗಳೂರು: ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಬ್ರಹ್ಮಾಸ್ತ್ರ‘ಕ್ಕೆ ಬಹಿಷ್ಕಾರದ ಸಂಕಷ್ಟ ಎದುರಾಗಿದೆ.
ಚಿತ್ರದ ನಾಯಕ ರಣಬೀರ್ ಕಪೂರ್ ಅವರನ್ನು ಗುರಿಯಾಗಿಸಿಕೊಂಡು ಜನರು ಟ್ವಿಟರ್ನಲ್ಲಿ #BoycottBrahmastra ಎಂಬ ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದು, ರಣಬೀರ್ ಅವರ ಚಿತ್ರವನ್ನು ಬಹಿಷ್ಕರಿಸುವಂತೆ ಕೋರಿದ್ದಾರೆ.
ಇತ್ತೀಚೆಗೆ ಬಾಲಿವುಡ್ನ ಚಿತ್ರಗಳು ಬಹಿಷ್ಕಾರದ ಬಿಸಿಗೆ ಒಳಗಾಗುತ್ತಿವೆ. ಚಿತ್ರನಟರ ಹೇಳಿಕೆ ಮತ್ತು ಪ್ರಚಾರ ಸಂದರ್ಭದಲ್ಲಿ ಅವರ ಮಾತುಗಳನ್ನೇ ಗುರಿಯಾಗಿಸಿಕೊಂಡು, ಬಹಿಷ್ಕಾರದ ಕರೆ ಕೊಡಲಾಗುತ್ತಿದೆ.
ರಣಬೀರ್ ಕಪೂರ್ ಬೀಫ್ ತಿನ್ನುತ್ತಾರೆ. ಹೀಗಾಗಿ ಅವರ ಚಿತ್ರಗಳನ್ನು ವೀಕ್ಷಿಸಬೇಡಿ, ಅವರು ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ ಎಂದು ಟ್ವಿಟರ್ನಲ್ಲಿ ಹಲವರು ದೂರಿದ್ದಾರೆ.
ಜತೆಗೆ, ಹಳೆಯ ಸಂದರ್ಶನವೊಂದರಲ್ಲಿ ಆಲಿಯಾ ಭಟ್ ಅವರು, ನನ್ನನ್ನು ನೋಡಬಾರದು ಎನ್ನುವುದು ನಿಮ್ಮ ಇಚ್ಛೆಯಾಗಿದ್ದರೆ, ಅದರಂತೆ ಆಗಲಿ, ನೋಡುವುದು ಬೇಡ.. ಚಿತ್ರವನ್ನೂ ನೋಡಬೇಡಿ ಎಂದು ಹೇಳಿದ್ದಾರೆ. ಆಲಿಯಾ ಅವರ ಈ ಹೇಳಿಕೆಯನ್ನೇ ಬಳಸಿಕೊಂಡು, ಅವರ ಮೇಲೆ ಟ್ವೀಟ್ ಮೂಲಕ ಬಹಿಷ್ಕಾರದ ಕರೆ ನೀಡಲಾಗಿದೆ.
Be careful what you wish for, and once you wish, no matter how many temple's you visit, there is no use!!! So now you have wished its done!! You need to face it @aliaa08 get ready.#BoycottBrahmastrapic.twitter.com/tTugN7hZ69
— ಸಾರ್ಥಕ್ ರಾಜ್ ಕೆ ನ್/Sarthak Raj KN🇮🇳 (@KnSraj23) August 23, 2022