<p>ಇತ್ತೀಚಿನ ದಿನಗಳಲ್ಲಿ ಅನೇಕರು ಮಾನಸಿಕ ಒತ್ತಡಕ್ಕೆ ಒಳಗಾಗಿ ಸಣ್ಣ ವಿಷಯಕ್ಕೂ ಅತಿಯಾಗಿ ಕೋಪಗೊಳ್ಳುವುದು, ಅಳುವುದು, ಕಿರುಚಾಡುತ್ತಿರುತ್ತಾರೆ. ಇಂತಹ ಲಕ್ಷಣಗಳನ್ನು ‘ಉದ್ವೇಗ’ (Anxiety) ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣ ಎನ್ನುತ್ತಾರೆ ವೈದ್ಯರು. ಉದ್ವೇಗಕ್ಕೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ .<br><br><strong>ಉದ್ವೇಗಕ್ಕೆ ಕಾರಣ</strong><br></p><ul><li><p>ಒತ್ತಡ: ಸಂಸ್ಥೆಗಳಿಂದ, ಅಕಾಡೆಮಿಕ್, ಹಣಕಾಸು ವ್ಯವಹಾರ, ಕುಟುಂಬ– ಪ್ರೇಮ ಸಂಬಂಧದಿಂದ, ಅತಿಯಾದ ಯೋಚನೆ, ಬಾಲ್ಯದಲ್ಲಿ ನಡೆದ ದೈಹಿಕವಾಗಿ ಹಾಗೂ ಮಾನಸಿಕ ಘಟನೆಯಿಂದ ( ದೌರ್ಜನ್ಯ, ಲೈಂಗಿಕ ಕಿರುಕುಳ ಇತರೆ ಸಮಸ್ಯೆಗಳು)</p> </li><li><p>ಅನುವಂಶಿಕತೆ</p> </li><li><p>ಗರ್ಭಿಣಿ, ಬಾಣಂತಿ ಸಮಯದಲ್ಲಿ ಹಾರ್ಮೊನ್ ಬದಲಾವಣೆ </p> </li><li><p>ಅತಿಯಾದ ಫೋನ್ ಬಳಕೆ: ಅಪರಾಧಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಸಕ್ತಿ ತೋರುವುದು. ರೀಲ್ಸ್, ಧಾರಾವಾಹಿಗಳ ವೀಕ್ಷಣೆ, <br></p></li><li><p>ಸಾಮಾಜಿಕ ಮಾಧ್ಯಮಗಳ ವ್ಯಸನ : ಉದಾಹರಣೆಗೆ, ನಾವು ಮಾಡಿದ ರೀಲ್ಸ್ಗಳ ಲೈಕ್ಸ್, ಕಾಮೆಂಟ್ ಬಗ್ಗೆ ಯೋಚಿಸುವುದು. </p> </li><li><p>ಒಡನಾಟ ಇಲ್ಲದಿರುವುದು: ಯಾರ ಜೊತೆಯೂ ಸೇರದೆ, ಮಾತನಾಡದಿರುವುದು, </p></li><li><p>ಒಂಟಿತನ: ಯಾವಾಗಲೂ ಒಬ್ಬೊಂಟಿಯಾಗಿರುವುದು ಕೂಡ ಉದ್ವೇಗಕ್ಕೆ ಕಾರಣ ಎನ್ನುತ್ತಾರೆ ತಜ್ಞರು.<br><br><strong>ಇದರಿಂದ ಆಗುವ ಪರಿಣಾಮಗಳು<br></strong></p><p>ಕೆಲವೊಂದು ಬಾರಿ ಉಸಿರು ಕಟ್ಟಿದಂತೆ ಆಗುವುದು</p></li></ul><p>ಉದ್ವೇಗಕ್ಕೆ ಒಳಗಾದ ವ್ಯಕ್ತಿ ಅತಿಯಾದ ಒತ್ತಡಕ್ಕೆ ಸಿಲುಕಿದಾಗ ಅವರ ವರ್ತನೆ ಮೇಲೆ ಅವರಿಗೆ ನಿಯಂತ್ರಣ ಇರುವುದಿಲ್ಲ. ಆ ಸಮಯದಲ್ಲಿ ಅವರು ಕಿರುಚಾಡುತ್ತಾರೆ, ಕೂಗಾಡುತ್ತಾರೆ, ಕೋಪದಲ್ಲಿ ಎದುರು ಇರುವ ವ್ಯಕ್ತಿಗೆ ಹಲ್ಲೆ ಮಾಡುವುದು, ವಸ್ತುಗಳಿಗೆ ಹಾನಿ ಮಾಡಲು ಯೋಚಿಸುತ್ತಾರೆ. </p>.<p><strong>ಪರಿಹಾರ ಕ್ರಮಗಳು <br></strong></p><ul><li><p>ತುಂಬಾ ಒತ್ತಡ ಎನಿಸಿದಾಗ ಉಸಿರಾಟದ ವ್ಯಾಯಾಮಗಳನ್ನು ಅನುಸರಿಸಬೇಕು <br>4- 7- 8 ಉಸಿರಾಟದ ಕ್ರಮ<br>ಅಂದರೆ, 8 ಬಾರಿ ಉಸಿರು ಹೊರಗೆ ಬಿಟ್ಟು, 4 ಬಾರಿ ಉಸಿರು ಒಳಗೆ ತೆಗೆದುಕೊಳ್ಳುವುದು, 7ಬಾರಿ ಉಸಿರು ಹಿಡಿದುಕೊಳ್ಳಬೇಕು. ಪ್ರತಿ ದಿನ ಹೀಗೆ ಮಾಡುವುದರಿಂದ ಒತ್ತಡ ನಿವಾರಣೆಗೆ ಸಹಕಾರಿ. </p> </li><li><p>ಮುಂದಿನ ದಿನದ ಬಗ್ಗೆ ಅತಿಯಾಗಿ ಯೋಚಿಸಬಾರದು</p></li><li><p>ನಮಗೆ ನಾವೇ ಆತ್ಮವಿಶ್ವಾಸ ತುಂಬಿಕೊಳ್ಳಬೇಕು<br></p></li><li><p>ಪ್ರತಿದಿನ ಜೀವನದಲ್ಲಿ ಸಕಾರಾತ್ಮಕ ಯೋಜನೆಗಳನ್ನು ರೂಢಿಸಿಕೊಳ್ಳಬೇಕು.<br></p></li><li><p>ಏನೇ ಸಮಸ್ಯೆ ಇದ್ದರೂ ಮನಸ್ಸಲೇ ಕೊರಗುವುದಕ್ಕಿಂತ ಸೂಕ್ತ ವ್ಯಕ್ತಿ ಬಳಿ ಹೇಳಿಕೊಳ್ಳಬೇಕು.<br></p></li><li><p>ತುಂಬಾ ಒತ್ತಡ ಎನಿಸಿದಾಗ ಇಷ್ಟವಾದ ಹಾಡುಗಳನ್ನು ಕೇಳಬೇಕು.</p></li></ul><ul><li><p>ನಮ್ಮ ಬಗ್ಗೆ ನಕಾರಾತ್ಮಕವಾಗಿ ಯೋಚಿಸಬಾರದು ನನ್ನಿಂದ ಎಲ್ಲವೂ ಸಾಧ್ಯ ಎಂಬ ಯೋಚನೆಯನ್ನು ರೂಡಿಸಿಕೊಳ್ಳಬೆಕು.<br></p></li></ul><p><strong>ಅರೋಮಾ ಥೆರಪಿ:</strong> ನೀಲಗಿರಿ, ಜೆರೇನಿಯಂ, ಲವೆಂಡರ್, ಗಂಧ, ಗುಲಾಬಿ ಸೇರಿದಂತೆ ಸುಗಂಧ ಭರಿತ ವಸ್ತುಗಳ ಮಿಶ್ರಣದ ಸುವಾಸನೆಯನ್ನು ತೆಗೆದುಕೊಳ್ಳುವುದು. ಮನೆಯಲ್ಲಿ ಪ್ರತಿದಿನ ಗಂಧ, ಸಾಂಬ್ರಾಣಿ, ಧೂಪ, ದೀಪ ಹಚ್ಚುವುದರಿಂದ ಒತ್ತಡ ಕಡಿಮೆಯಾಗಿ ಮನಶಾಂತಿಗೆ ಸಹಕರಿಸುತ್ತದೆ.</p><p><br><strong>ಸಾತ್ವಿಕ ಆಹಾರ ಸೇವನೆ</strong> <br>ಶುಚಿಯಾದ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಹಾಲಿನ ಉತ್ಪನ್ನಗಳು, ಜೇನುತುಪ್ಪ, ಬೆಲ್ಲ, ಮತ್ತು ತುಳಸಿಯನ್ನು ಸೇವಿಸುವುದರಿಂದ ಮಾನಸಿಕ ಒತ್ತಡವನ್ನು ನಿವಾರಿಸಲು ಸಹಕರಿಸುತ್ತದೆ. <br><br>ಪ್ರತಿಯೊಂದು ವಿಷಯದಲ್ಲೂ ಅಸಮಾಧಾನಗೊಳ್ಳುವುದು ಕೂಡ ಒತ್ತಡಕ್ಕೆ ಕಾರಣ, ಅದರ ಬದಲಾಗಿ ಇರುವುದರಲ್ಲೇ ತೃಪ್ತಿ ಪಡುವುದರಿಂದ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. <br></p><p>ಬರವಣಿಗೆಗೂ ನಮ್ಮ ಮನಸ್ಸಿಗೂ ಸಂಬಂಧವಿರುವುದರಿಂದ ಡೈರಿ ಬರೆಯುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ಆ ದಿನ ನಡೆದ ಸಕಾರಾತ್ಮಕ ವಿಷಯಗಳನ್ನು ಹೆಚ್ಚೆಚ್ಚು ಬರೆಯಬೇಕು. <br><br>ಯಾವುದರ ಮೇಲೂ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಬಾರದು. ನಿರೀಕ್ಷೆಯೂ ಕೂಡ ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ.<br><br><strong>ಉದ್ವೇಗಕ್ಕೆ ಒಳಗಾಗದ ವ್ಯಕ್ತಿಯನ್ನು ಸಮಾಧಾನ ಪಡಿಸುವುದು ಹೇಗೆ..?</strong> <br><br>ಉದ್ವೇಗಕ್ಕೆ ಒಳಗಾಗದ ವ್ಯಕ್ತಿ ವಿಚಿತ್ರವಾಗಿ ವರ್ತಿಸುತ್ತಿರುತ್ತಾರೆ. ಆ ಸಮಯದಲ್ಲಿ ಅವರಿಗೆ ಸರಿ ತಪ್ಪುಗಳ ಬಗ್ಗೆ ಆ ಕ್ಷಣಕ್ಕೆ ಹೇಳಬಾರದು. ಸ್ವಲ್ಪ ಹೊತ್ತು ಅವರನ್ನು ಅವರ ಪಾಡಿಗೆ ಬಿಡಬೇಕು. ಅವರು ಸಮಾಧಾನ ಆದ ಬಳಿಕ ನಿಧಾನವಾಗಿ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಬೇಕು. ಈ ನಿಮಯಗಳನ್ನು ಪಾಲಿಸುವುದರಿಂದ ಉದ್ವೇಗಕ್ಕೆ ಒಳಗಾವುದನ್ನು ನಿಯಂತ್ರಿಸಬಹುದು ಎನ್ನುತ್ತಾರೆ ವೈದ್ಯರು.</p>
<p>ಇತ್ತೀಚಿನ ದಿನಗಳಲ್ಲಿ ಅನೇಕರು ಮಾನಸಿಕ ಒತ್ತಡಕ್ಕೆ ಒಳಗಾಗಿ ಸಣ್ಣ ವಿಷಯಕ್ಕೂ ಅತಿಯಾಗಿ ಕೋಪಗೊಳ್ಳುವುದು, ಅಳುವುದು, ಕಿರುಚಾಡುತ್ತಿರುತ್ತಾರೆ. ಇಂತಹ ಲಕ್ಷಣಗಳನ್ನು ‘ಉದ್ವೇಗ’ (Anxiety) ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣ ಎನ್ನುತ್ತಾರೆ ವೈದ್ಯರು. ಉದ್ವೇಗಕ್ಕೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ .<br><br><strong>ಉದ್ವೇಗಕ್ಕೆ ಕಾರಣ</strong><br></p><ul><li><p>ಒತ್ತಡ: ಸಂಸ್ಥೆಗಳಿಂದ, ಅಕಾಡೆಮಿಕ್, ಹಣಕಾಸು ವ್ಯವಹಾರ, ಕುಟುಂಬ– ಪ್ರೇಮ ಸಂಬಂಧದಿಂದ, ಅತಿಯಾದ ಯೋಚನೆ, ಬಾಲ್ಯದಲ್ಲಿ ನಡೆದ ದೈಹಿಕವಾಗಿ ಹಾಗೂ ಮಾನಸಿಕ ಘಟನೆಯಿಂದ ( ದೌರ್ಜನ್ಯ, ಲೈಂಗಿಕ ಕಿರುಕುಳ ಇತರೆ ಸಮಸ್ಯೆಗಳು)</p> </li><li><p>ಅನುವಂಶಿಕತೆ</p> </li><li><p>ಗರ್ಭಿಣಿ, ಬಾಣಂತಿ ಸಮಯದಲ್ಲಿ ಹಾರ್ಮೊನ್ ಬದಲಾವಣೆ </p> </li><li><p>ಅತಿಯಾದ ಫೋನ್ ಬಳಕೆ: ಅಪರಾಧಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಸಕ್ತಿ ತೋರುವುದು. ರೀಲ್ಸ್, ಧಾರಾವಾಹಿಗಳ ವೀಕ್ಷಣೆ, <br></p></li><li><p>ಸಾಮಾಜಿಕ ಮಾಧ್ಯಮಗಳ ವ್ಯಸನ : ಉದಾಹರಣೆಗೆ, ನಾವು ಮಾಡಿದ ರೀಲ್ಸ್ಗಳ ಲೈಕ್ಸ್, ಕಾಮೆಂಟ್ ಬಗ್ಗೆ ಯೋಚಿಸುವುದು. </p> </li><li><p>ಒಡನಾಟ ಇಲ್ಲದಿರುವುದು: ಯಾರ ಜೊತೆಯೂ ಸೇರದೆ, ಮಾತನಾಡದಿರುವುದು, </p></li><li><p>ಒಂಟಿತನ: ಯಾವಾಗಲೂ ಒಬ್ಬೊಂಟಿಯಾಗಿರುವುದು ಕೂಡ ಉದ್ವೇಗಕ್ಕೆ ಕಾರಣ ಎನ್ನುತ್ತಾರೆ ತಜ್ಞರು.<br><br><strong>ಇದರಿಂದ ಆಗುವ ಪರಿಣಾಮಗಳು<br></strong></p><p>ಕೆಲವೊಂದು ಬಾರಿ ಉಸಿರು ಕಟ್ಟಿದಂತೆ ಆಗುವುದು</p></li></ul><p>ಉದ್ವೇಗಕ್ಕೆ ಒಳಗಾದ ವ್ಯಕ್ತಿ ಅತಿಯಾದ ಒತ್ತಡಕ್ಕೆ ಸಿಲುಕಿದಾಗ ಅವರ ವರ್ತನೆ ಮೇಲೆ ಅವರಿಗೆ ನಿಯಂತ್ರಣ ಇರುವುದಿಲ್ಲ. ಆ ಸಮಯದಲ್ಲಿ ಅವರು ಕಿರುಚಾಡುತ್ತಾರೆ, ಕೂಗಾಡುತ್ತಾರೆ, ಕೋಪದಲ್ಲಿ ಎದುರು ಇರುವ ವ್ಯಕ್ತಿಗೆ ಹಲ್ಲೆ ಮಾಡುವುದು, ವಸ್ತುಗಳಿಗೆ ಹಾನಿ ಮಾಡಲು ಯೋಚಿಸುತ್ತಾರೆ. </p>.<p><strong>ಪರಿಹಾರ ಕ್ರಮಗಳು <br></strong></p><ul><li><p>ತುಂಬಾ ಒತ್ತಡ ಎನಿಸಿದಾಗ ಉಸಿರಾಟದ ವ್ಯಾಯಾಮಗಳನ್ನು ಅನುಸರಿಸಬೇಕು <br>4- 7- 8 ಉಸಿರಾಟದ ಕ್ರಮ<br>ಅಂದರೆ, 8 ಬಾರಿ ಉಸಿರು ಹೊರಗೆ ಬಿಟ್ಟು, 4 ಬಾರಿ ಉಸಿರು ಒಳಗೆ ತೆಗೆದುಕೊಳ್ಳುವುದು, 7ಬಾರಿ ಉಸಿರು ಹಿಡಿದುಕೊಳ್ಳಬೇಕು. ಪ್ರತಿ ದಿನ ಹೀಗೆ ಮಾಡುವುದರಿಂದ ಒತ್ತಡ ನಿವಾರಣೆಗೆ ಸಹಕಾರಿ. </p> </li><li><p>ಮುಂದಿನ ದಿನದ ಬಗ್ಗೆ ಅತಿಯಾಗಿ ಯೋಚಿಸಬಾರದು</p></li><li><p>ನಮಗೆ ನಾವೇ ಆತ್ಮವಿಶ್ವಾಸ ತುಂಬಿಕೊಳ್ಳಬೇಕು<br></p></li><li><p>ಪ್ರತಿದಿನ ಜೀವನದಲ್ಲಿ ಸಕಾರಾತ್ಮಕ ಯೋಜನೆಗಳನ್ನು ರೂಢಿಸಿಕೊಳ್ಳಬೇಕು.<br></p></li><li><p>ಏನೇ ಸಮಸ್ಯೆ ಇದ್ದರೂ ಮನಸ್ಸಲೇ ಕೊರಗುವುದಕ್ಕಿಂತ ಸೂಕ್ತ ವ್ಯಕ್ತಿ ಬಳಿ ಹೇಳಿಕೊಳ್ಳಬೇಕು.<br></p></li><li><p>ತುಂಬಾ ಒತ್ತಡ ಎನಿಸಿದಾಗ ಇಷ್ಟವಾದ ಹಾಡುಗಳನ್ನು ಕೇಳಬೇಕು.</p></li></ul><ul><li><p>ನಮ್ಮ ಬಗ್ಗೆ ನಕಾರಾತ್ಮಕವಾಗಿ ಯೋಚಿಸಬಾರದು ನನ್ನಿಂದ ಎಲ್ಲವೂ ಸಾಧ್ಯ ಎಂಬ ಯೋಚನೆಯನ್ನು ರೂಡಿಸಿಕೊಳ್ಳಬೆಕು.<br></p></li></ul><p><strong>ಅರೋಮಾ ಥೆರಪಿ:</strong> ನೀಲಗಿರಿ, ಜೆರೇನಿಯಂ, ಲವೆಂಡರ್, ಗಂಧ, ಗುಲಾಬಿ ಸೇರಿದಂತೆ ಸುಗಂಧ ಭರಿತ ವಸ್ತುಗಳ ಮಿಶ್ರಣದ ಸುವಾಸನೆಯನ್ನು ತೆಗೆದುಕೊಳ್ಳುವುದು. ಮನೆಯಲ್ಲಿ ಪ್ರತಿದಿನ ಗಂಧ, ಸಾಂಬ್ರಾಣಿ, ಧೂಪ, ದೀಪ ಹಚ್ಚುವುದರಿಂದ ಒತ್ತಡ ಕಡಿಮೆಯಾಗಿ ಮನಶಾಂತಿಗೆ ಸಹಕರಿಸುತ್ತದೆ.</p><p><br><strong>ಸಾತ್ವಿಕ ಆಹಾರ ಸೇವನೆ</strong> <br>ಶುಚಿಯಾದ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಹಾಲಿನ ಉತ್ಪನ್ನಗಳು, ಜೇನುತುಪ್ಪ, ಬೆಲ್ಲ, ಮತ್ತು ತುಳಸಿಯನ್ನು ಸೇವಿಸುವುದರಿಂದ ಮಾನಸಿಕ ಒತ್ತಡವನ್ನು ನಿವಾರಿಸಲು ಸಹಕರಿಸುತ್ತದೆ. <br><br>ಪ್ರತಿಯೊಂದು ವಿಷಯದಲ್ಲೂ ಅಸಮಾಧಾನಗೊಳ್ಳುವುದು ಕೂಡ ಒತ್ತಡಕ್ಕೆ ಕಾರಣ, ಅದರ ಬದಲಾಗಿ ಇರುವುದರಲ್ಲೇ ತೃಪ್ತಿ ಪಡುವುದರಿಂದ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. <br></p><p>ಬರವಣಿಗೆಗೂ ನಮ್ಮ ಮನಸ್ಸಿಗೂ ಸಂಬಂಧವಿರುವುದರಿಂದ ಡೈರಿ ಬರೆಯುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ಆ ದಿನ ನಡೆದ ಸಕಾರಾತ್ಮಕ ವಿಷಯಗಳನ್ನು ಹೆಚ್ಚೆಚ್ಚು ಬರೆಯಬೇಕು. <br><br>ಯಾವುದರ ಮೇಲೂ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಬಾರದು. ನಿರೀಕ್ಷೆಯೂ ಕೂಡ ಮಾನಸಿಕ ಒತ್ತಡಕ್ಕೆ ಕಾರಣವಾಗಿದೆ.<br><br><strong>ಉದ್ವೇಗಕ್ಕೆ ಒಳಗಾಗದ ವ್ಯಕ್ತಿಯನ್ನು ಸಮಾಧಾನ ಪಡಿಸುವುದು ಹೇಗೆ..?</strong> <br><br>ಉದ್ವೇಗಕ್ಕೆ ಒಳಗಾಗದ ವ್ಯಕ್ತಿ ವಿಚಿತ್ರವಾಗಿ ವರ್ತಿಸುತ್ತಿರುತ್ತಾರೆ. ಆ ಸಮಯದಲ್ಲಿ ಅವರಿಗೆ ಸರಿ ತಪ್ಪುಗಳ ಬಗ್ಗೆ ಆ ಕ್ಷಣಕ್ಕೆ ಹೇಳಬಾರದು. ಸ್ವಲ್ಪ ಹೊತ್ತು ಅವರನ್ನು ಅವರ ಪಾಡಿಗೆ ಬಿಡಬೇಕು. ಅವರು ಸಮಾಧಾನ ಆದ ಬಳಿಕ ನಿಧಾನವಾಗಿ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಬೇಕು. ಈ ನಿಮಯಗಳನ್ನು ಪಾಲಿಸುವುದರಿಂದ ಉದ್ವೇಗಕ್ಕೆ ಒಳಗಾವುದನ್ನು ನಿಯಂತ್ರಿಸಬಹುದು ಎನ್ನುತ್ತಾರೆ ವೈದ್ಯರು.</p>