<p>ಗೆಳೆಯ ಗೋಪಾಲಿ ಫೋನ್ ಮಾಡಿ, ‘ಈ ಬಾರಿ ದಸರಾಗೆ ಮೈಸೂರಿಗೆ ಬಂದಾಗ ಲಾಡ್ಜ್ನಲ್ಲಿ ಉಳಿಯಬೇಡಿ, ನಮ್ಮ ಮನೆಗೇ ಬರಬೇಕು’ ಎಂದು ತಾಕೀತು ಮಾಡಿದ.</p>.<p>‘ಬರ್ತೀವಿ, ಹೋದ ವರ್ಷ ಜನಜಂಗುಳಿಗೆ ಹೆದರಿ ಲಾಡ್ಜ್ನಲ್ಲೇ ಕುಳಿತು ಟಿ.ವಿ.ಯಲ್ಲಿ ಜಂಬೂಸವಾರಿ ನೋಡಿದ್ವಿ, ಮೈಸೂರಿಗೆ ಹೋದ್ರೂ ನೇರವಾಗಿ ಉತ್ಸವ ನೋಡಲಾಗಲಿಲ್ಲ’ ಅಂದ ಶಂಕ್ರಿ.</p>.<p>‘ನಮ್ಮ ಮನೆ ಮುಂದೆಯೇ ಜಂಬೂಸವಾರಿ ಸಾಗುತ್ತದೆ, ಟೆರೇಸ್ ಮೇಲೆ ನಿಂತು ಕಣ್ತುಂಬಿಕೊಳ್ಳಬಹುದು’.</p>.<p>‘ಖಂಡಿತಾ ನಿಮ್ಮ ಮನೆಗೆ ಬರುತ್ತೇವೆ’ ಸುಮಿ ಸಂಭ್ರಮದಿಂದ ಹೇಳಿದಳು.</p>.<p>‘ಚಾಮುಂಡಿ ಬೆಟ್ಟ ಯಾರಿಗೆ ಸೇರಬೇಕು ಎಂಬ ವಿವಾದ ಇತ್ಯರ್ಥವಾಯ್ತೆ?’</p>.<p>‘ಆಗೋದಿಲ್ಲ, ದಸರಾ ಮುಗಿದರೂ ಬೆಟ್ಟದ ಜಗ್ಗಾಟ ಮುಗಿಯುವಂತೆ ಕಾಣ್ತಿಲ್ಲ. ಧರ್ಮಸ್ಥಳದ ಕಾವು ಕಮ್ಮಿಯಾದ್ಮೇಲೆ ರಾಜಕಾರಣಿಗಳು ಚಾಮುಂಡಿ ಬೆಟ್ಟ ಯಾತ್ರೆ ಆರಂಭಿಸಬಹುದು’ ಅಂದ ಗೋಪಾಲಿ.</p>.<p>‘ಹೌದೌದು. ಸರ್ಕಾರ ಚಾಮುಂಡಿ ಬೆಟ್ಟಕ್ಕೆ ರಕ್ಷಣೆ ಒದಗಿಸಬೇಕಾಗುತ್ತೆ’.</p>.<p>‘ಬೇಕಾಗಿಲ್ಲ, ಆಂಜನೇಯ ಸಂಜೀವಿನಿ ಪರ್ವತ ಹೊತ್ತುಕೊಂಡು ಹೋದಂತೆ ಚಾಮುಂಡಿ ಬೆಟ್ಟವನ್ನು ಹೊತ್ತುಕೊಂಡು ಹೋಗುವವರು ಯಾರೂ ಇಲ್ಲ!’</p>.<p>‘ಚಾಮುಂಡಿ ಬೆಟ್ಟ ತಮಗೆ ಸೇರಿದ್ದು ಎಂದು ರಾಜಕಾರಣಿಗಳು ‘ಬೆಟ್ಟ ಅಪ್ಪಿಕೊ’ ಚಳವಳಿ ಮಾಡ್ತಾರೇನೋ?’</p>.<p>‘ಏನೇನು ಮಾಡ್ತಾರೋ ನೋಡೋಣ. ಚಾಮುಂಡಿ ಬೆಟ್ಟ ಯಾರಿಗೆ ಸೇರಿದ್ದು ಎಂಬುದು ಇತ್ಯರ್ಥವಾದರೆ ಸಾಕು’.</p>.<p>‘ಇತ್ಯರ್ಥ ಮಾಡಲೇಬೇಕು’.</p>.<p>‘ಹೇಗೆ ಸಾಧ್ಯ?’</p>.<p>‘ಏನಿಲ್ಲ, ದಸರಾ ಸ್ಪೆಷಲ್ ಅಂತ ಬೆಟ್ಟ ಜಗ್ಗಾಟ ಸ್ಪರ್ಧೆ ಏರ್ಪಡಿಸೋದು! ಬೆಟ್ಟಕ್ಕೆ ಹಗ್ಗ ಕಟ್ಟಿ ಒಂದು ಕಡೆ ಆ ಪಕ್ಷದವರು, ಇನ್ನೊಂದು ಕಡೆ ಈ ಪಕ್ಷದವರು ಎಳೆದಾಡಲಿ. ಬೆಟ್ಟ ಯಾರ ಕಡೆಗೆ ಜರುಗುತ್ತದೋ ಅವರಿಗೆ ಚಾಮುಂಡಿ ಬೆಟ್ಟ ಸೇರುತ್ತದೆ ಎಂದು ಘೋಷಿಸಿದರಾಯ್ತು...’ ಎಂದು ನಕ್ಕು ಶಂಕ್ರಿ ಫೋನ್ ಕಟ್ ಮಾಡಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗೆಳೆಯ ಗೋಪಾಲಿ ಫೋನ್ ಮಾಡಿ, ‘ಈ ಬಾರಿ ದಸರಾಗೆ ಮೈಸೂರಿಗೆ ಬಂದಾಗ ಲಾಡ್ಜ್ನಲ್ಲಿ ಉಳಿಯಬೇಡಿ, ನಮ್ಮ ಮನೆಗೇ ಬರಬೇಕು’ ಎಂದು ತಾಕೀತು ಮಾಡಿದ.</p>.<p>‘ಬರ್ತೀವಿ, ಹೋದ ವರ್ಷ ಜನಜಂಗುಳಿಗೆ ಹೆದರಿ ಲಾಡ್ಜ್ನಲ್ಲೇ ಕುಳಿತು ಟಿ.ವಿ.ಯಲ್ಲಿ ಜಂಬೂಸವಾರಿ ನೋಡಿದ್ವಿ, ಮೈಸೂರಿಗೆ ಹೋದ್ರೂ ನೇರವಾಗಿ ಉತ್ಸವ ನೋಡಲಾಗಲಿಲ್ಲ’ ಅಂದ ಶಂಕ್ರಿ.</p>.<p>‘ನಮ್ಮ ಮನೆ ಮುಂದೆಯೇ ಜಂಬೂಸವಾರಿ ಸಾಗುತ್ತದೆ, ಟೆರೇಸ್ ಮೇಲೆ ನಿಂತು ಕಣ್ತುಂಬಿಕೊಳ್ಳಬಹುದು’.</p>.<p>‘ಖಂಡಿತಾ ನಿಮ್ಮ ಮನೆಗೆ ಬರುತ್ತೇವೆ’ ಸುಮಿ ಸಂಭ್ರಮದಿಂದ ಹೇಳಿದಳು.</p>.<p>‘ಚಾಮುಂಡಿ ಬೆಟ್ಟ ಯಾರಿಗೆ ಸೇರಬೇಕು ಎಂಬ ವಿವಾದ ಇತ್ಯರ್ಥವಾಯ್ತೆ?’</p>.<p>‘ಆಗೋದಿಲ್ಲ, ದಸರಾ ಮುಗಿದರೂ ಬೆಟ್ಟದ ಜಗ್ಗಾಟ ಮುಗಿಯುವಂತೆ ಕಾಣ್ತಿಲ್ಲ. ಧರ್ಮಸ್ಥಳದ ಕಾವು ಕಮ್ಮಿಯಾದ್ಮೇಲೆ ರಾಜಕಾರಣಿಗಳು ಚಾಮುಂಡಿ ಬೆಟ್ಟ ಯಾತ್ರೆ ಆರಂಭಿಸಬಹುದು’ ಅಂದ ಗೋಪಾಲಿ.</p>.<p>‘ಹೌದೌದು. ಸರ್ಕಾರ ಚಾಮುಂಡಿ ಬೆಟ್ಟಕ್ಕೆ ರಕ್ಷಣೆ ಒದಗಿಸಬೇಕಾಗುತ್ತೆ’.</p>.<p>‘ಬೇಕಾಗಿಲ್ಲ, ಆಂಜನೇಯ ಸಂಜೀವಿನಿ ಪರ್ವತ ಹೊತ್ತುಕೊಂಡು ಹೋದಂತೆ ಚಾಮುಂಡಿ ಬೆಟ್ಟವನ್ನು ಹೊತ್ತುಕೊಂಡು ಹೋಗುವವರು ಯಾರೂ ಇಲ್ಲ!’</p>.<p>‘ಚಾಮುಂಡಿ ಬೆಟ್ಟ ತಮಗೆ ಸೇರಿದ್ದು ಎಂದು ರಾಜಕಾರಣಿಗಳು ‘ಬೆಟ್ಟ ಅಪ್ಪಿಕೊ’ ಚಳವಳಿ ಮಾಡ್ತಾರೇನೋ?’</p>.<p>‘ಏನೇನು ಮಾಡ್ತಾರೋ ನೋಡೋಣ. ಚಾಮುಂಡಿ ಬೆಟ್ಟ ಯಾರಿಗೆ ಸೇರಿದ್ದು ಎಂಬುದು ಇತ್ಯರ್ಥವಾದರೆ ಸಾಕು’.</p>.<p>‘ಇತ್ಯರ್ಥ ಮಾಡಲೇಬೇಕು’.</p>.<p>‘ಹೇಗೆ ಸಾಧ್ಯ?’</p>.<p>‘ಏನಿಲ್ಲ, ದಸರಾ ಸ್ಪೆಷಲ್ ಅಂತ ಬೆಟ್ಟ ಜಗ್ಗಾಟ ಸ್ಪರ್ಧೆ ಏರ್ಪಡಿಸೋದು! ಬೆಟ್ಟಕ್ಕೆ ಹಗ್ಗ ಕಟ್ಟಿ ಒಂದು ಕಡೆ ಆ ಪಕ್ಷದವರು, ಇನ್ನೊಂದು ಕಡೆ ಈ ಪಕ್ಷದವರು ಎಳೆದಾಡಲಿ. ಬೆಟ್ಟ ಯಾರ ಕಡೆಗೆ ಜರುಗುತ್ತದೋ ಅವರಿಗೆ ಚಾಮುಂಡಿ ಬೆಟ್ಟ ಸೇರುತ್ತದೆ ಎಂದು ಘೋಷಿಸಿದರಾಯ್ತು...’ ಎಂದು ನಕ್ಕು ಶಂಕ್ರಿ ಫೋನ್ ಕಟ್ ಮಾಡಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>