<p><strong>ಲಾಹೋರ್</strong>: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಬೇಕೇ? ಬೇಡವೇ? ಎಂಬ ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶನಿವಾರ ತಿಳಿಸಿದೆ.</p><p>ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಬಾಂಗ್ಲಾದೇಶ ತಂಡವನ್ನು ವಿಶ್ವಕಪ್ನಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಈ ವಿಚಾರವನ್ನು ಪ್ರಧಾನಿ ಶಹಬಾಜ್ ಷರೀಫ್ ಮುಂದೆ ಇಡಲಾಗುವುದು. ವಿದೇಶ ಪ್ರವಾಸದಲ್ಲಿರುವ ಅವರು, ವಾಪಸ್ ಆದ ನಂತರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.</p><p>'ಟಿ20 ವಿಶ್ವಕಪ್ನಲ್ಲಿ ನಾವು ಆಡುತ್ತೇವೆಯೇ, ಇಲ್ಲವೇ ಎಂಬ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ' ಎಂದು ಸ್ಪಷ್ಟಪಡಿಸಿದ್ದಾರೆ.</p><p>'ನಮ್ಮ ಪ್ರಧಾನಿ ಸದ್ಯ ದೇಶದಲ್ಲಿಲ್ಲ. ವಾಪಸ್ ಆದ ನಂತರ, ಅವರಿಂದ ಸಲಹೆ ಪಡೆಯುತ್ತೇವೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ವಿಶ್ವಕಪ್ನಲ್ಲಿ ಆಡುವುದು ಬೇಡ ಎಂದು ಷರೀಫ್ ಅವರು ಹೇಳಿದರೆ, ಐಸಿಸಿ ಬೇರೆ ಯಾವುದೇ ತಂಡಕ್ಕೆ ಆಹ್ವಾನ ನೀಡಬಹುದು' ಎಂದು ಖಚಿತಪಡಿಸಿದ್ದಾರೆ.</p>.ಭಾರತದಲ್ಲಿ ಟಿ20 ವಿಶ್ವಕಪ್ ಆಡಲ್ಲ: ಬಾಂಗ್ಲಾದೇಶ.ಭಾರತಕ್ಕೆ ಬರಲ್ಲ ಎಂದ ಬಾಂಗ್ಲಾದೇಶ ತಂಡವನ್ನು ವಿಶ್ವಕಪ್ನಿಂದಲೇ ಹೊರಗಿಟ್ಟ ಐಸಿಸಿ.<p>ರಾಜತಾಂತ್ರಿಕ ವಿವಾದದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಪಿಸಿಬಿ ಮಾಡಿಕೊಂಡಿರುವ ಒಪ್ಪಂದದ ಅನುಸಾರ, ಪಾಕಿಸ್ತಾನ ತಂಡದ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಿಗದಿಯಾಗಿವೆ.</p><p><strong>ಪಾಕ್ ಬೆಂಬಲ<br></strong>ಬಾಂಗ್ಲಾದೇಶ ತಂಡವು ಭದ್ರತೆಯ ಕಾರಣ ನೀಡಿ, ತನ್ನ ಪಾಲಿನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿತ್ತು.</p><p>ಈ ಸಂಬಂಧ ಐಸಿಸಿ ಮಂಡಳಿಗಳ ಸಭೆಯಲ್ಲಿ ಸದಸ್ಯರ ಅಭಿಮತ ಪಡೆಯಲಾಗಿತ್ತು. ಬಾಂಗ್ಲಾ ತಂಡವು ಭಾರತದಲ್ಲಿಯೇ ಪಂದ್ಯಗಳನ್ನು ಆಡಬೇಕು ಎನ್ನುವ ನಿರ್ಣಯದ ಪರ 14 ಸದಸ್ಯರು ಮತ ಚಲಾಯಿಸಿದ್ದರು. ಅದರ ವಿರುದ್ಧ ಬಾಂಗ್ಲಾ ಹಾಗೂ ಪಾಕಿಸ್ತಾನ ಮಾತ್ರವೇ ನಿಂತಿದ್ದವು.</p><p>ಹೀಗಾಗಿ, ಬಾಂಗ್ಲಾ ಮಂಡಳಿಗೆ ತನ್ನ ತೀರ್ಮಾನ ವ್ಯಕ್ತಪಡಿಸಲು ಐಸಿಸಿಯು 24 ಗಂಟೆಗಳ ಗಡುವು ನೀಡಿತ್ತು. ಆದಾಗ್ಯೂ, ಬಾಂಗ್ಲಾ ಸರ್ಕಾರದ ಕ್ರೀಡಾ ಸಚಿವಾಲಯದ ಸಲಹೆಗಾರ ಅಸೀಫ್ ನಜ್ರುಲ್ ಅವರು ಐಸಿಸಿ ತೀರ್ಪನ್ನು ಒಪ್ಪಲಿಲ್ಲ. ಇದರಿಂದಾಗಿ ಬಾಂಗ್ಲಾ ತಂಡವನ್ನು ಕೈಬಿಡಲಾಗಿದೆ.</p><p><strong>'ಬಾಂಗ್ಲಾದೇಶ ತಂಡಕ್ಕೆ ಅನ್ಯಾಯ'<br></strong>ಬಾಂಗ್ಲಾದೇಶವನ್ನು ವಿಶ್ವ ಕ್ರಿಕೆಟ್ನ 'ದೊಡ್ಡ ಪಾಲುದಾರ' ರಾಷ್ಟ್ರ ಎಂದು ಬಣ್ಣಿಸಿರುವ ನಖ್ವಿ, ಆ ತಂಡಕ್ಕೆ ಐಸಿಸಿ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದ್ದಾರೆ.</p><p>'ಬಾಂಗ್ಲಾದೇಶವು ವಿಶ್ವ ಕ್ರಿಕೆಟ್ನ ದೊಡ್ಡ ಪಾಲುದಾರ ರಾಷ್ಟ್ರವಾಗಿದ್ದು, ಈ ಪ್ರಕರಣದಲ್ಲಿ ನ್ಯಾಯಯುತವಾಗಿ ನಡೆಸಿಕೊಂಡಿಲ್ಲ. ಬುಧವಾರ (ಜನವರಿ 22ರಂದು) ನಡೆದ ಸಭೆಯಲ್ಲೂ ಇದನ್ನೇ ಪ್ರತಿಪಾದಿಸಿದ್ದೆ. ಐಸಿಸಿ ನಿಲುವಿನಲ್ಲಿ ಹಲವು ಅಂಶಗಳಿವೆ. ಅವನ್ನೆಲ್ಲ ಸಮಯ ಬಂದಾಗ ಮಾತಾಡುತ್ತೇನೆ' ಎಂದಿದ್ದಾರೆ.</p><p><strong>ಭಾರತದ ವಿರುದ್ಧ ಪರೋಕ್ಷ ಕಿಡಿ<br></strong>ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಆಯ್ದ ನಿರ್ಧಾರಗಳನ್ನಷ್ಟೇ ಕೈಗೊಳ್ಳುತ್ತಿದೆ. ಅದರ ತೀರ್ಮಾನಗಳ ಮೇಲೆ 'ಒಂದು ಸದಸ್ಯ ರಾಷ್ಟ್ರ' ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ಭಾರತದತ್ತ ಬೊಟ್ಟು ಮಾಡಿದ್ದಾರೆ.</p><p>'ಒಂದು ದೇಶವು ನಿರ್ದೇಶನಗಳನ್ನು ನೀಡುತ್ತಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳಿಗೆ ಅನುಕೂಲವಾಗುವಂತೆ ಸ್ಥಳ ಬದಲಾವಣೆ ಮಾಡಲು ಐಸಿಸಿಗೆ ಸಾಧ್ಯವಿದೆ ಎಂದಮೇಲೆ, ಅದನ್ನು ಬಾಂಗ್ಲಾ ವಿಚಾರದಲ್ಲೂ ಅನುಸರಿಸಲು ಏಕೆ ಸಾಧ್ಯವಾಗಿಲ್ಲ?' ಎಂದು ಪ್ರಶ್ನಿಸಿದ್ದಾರೆ.</p><p>'ನಮ್ಮ ನೀತಿ ಮತ್ತು ನಿಲುವುಗಳನ್ನು ಸ್ಪಷ್ಟವಾಗಿದೆ. ನಮ್ಮ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ನಾವು ಐಸಿಸಿಗೆ ಅಧೀನರಲ್ಲ. ಸರ್ಕಾರದ ನಿರ್ದೇಶನ ಪಾಲಿಸುತ್ತೇವೆ' ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಾಹೋರ್</strong>: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಬೇಕೇ? ಬೇಡವೇ? ಎಂಬ ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶನಿವಾರ ತಿಳಿಸಿದೆ.</p><p>ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಬಾಂಗ್ಲಾದೇಶ ತಂಡವನ್ನು ವಿಶ್ವಕಪ್ನಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಈ ವಿಚಾರವನ್ನು ಪ್ರಧಾನಿ ಶಹಬಾಜ್ ಷರೀಫ್ ಮುಂದೆ ಇಡಲಾಗುವುದು. ವಿದೇಶ ಪ್ರವಾಸದಲ್ಲಿರುವ ಅವರು, ವಾಪಸ್ ಆದ ನಂತರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.</p><p>'ಟಿ20 ವಿಶ್ವಕಪ್ನಲ್ಲಿ ನಾವು ಆಡುತ್ತೇವೆಯೇ, ಇಲ್ಲವೇ ಎಂಬ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ' ಎಂದು ಸ್ಪಷ್ಟಪಡಿಸಿದ್ದಾರೆ.</p><p>'ನಮ್ಮ ಪ್ರಧಾನಿ ಸದ್ಯ ದೇಶದಲ್ಲಿಲ್ಲ. ವಾಪಸ್ ಆದ ನಂತರ, ಅವರಿಂದ ಸಲಹೆ ಪಡೆಯುತ್ತೇವೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ವಿಶ್ವಕಪ್ನಲ್ಲಿ ಆಡುವುದು ಬೇಡ ಎಂದು ಷರೀಫ್ ಅವರು ಹೇಳಿದರೆ, ಐಸಿಸಿ ಬೇರೆ ಯಾವುದೇ ತಂಡಕ್ಕೆ ಆಹ್ವಾನ ನೀಡಬಹುದು' ಎಂದು ಖಚಿತಪಡಿಸಿದ್ದಾರೆ.</p>.ಭಾರತದಲ್ಲಿ ಟಿ20 ವಿಶ್ವಕಪ್ ಆಡಲ್ಲ: ಬಾಂಗ್ಲಾದೇಶ.ಭಾರತಕ್ಕೆ ಬರಲ್ಲ ಎಂದ ಬಾಂಗ್ಲಾದೇಶ ತಂಡವನ್ನು ವಿಶ್ವಕಪ್ನಿಂದಲೇ ಹೊರಗಿಟ್ಟ ಐಸಿಸಿ.<p>ರಾಜತಾಂತ್ರಿಕ ವಿವಾದದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಪಿಸಿಬಿ ಮಾಡಿಕೊಂಡಿರುವ ಒಪ್ಪಂದದ ಅನುಸಾರ, ಪಾಕಿಸ್ತಾನ ತಂಡದ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಿಗದಿಯಾಗಿವೆ.</p><p><strong>ಪಾಕ್ ಬೆಂಬಲ<br></strong>ಬಾಂಗ್ಲಾದೇಶ ತಂಡವು ಭದ್ರತೆಯ ಕಾರಣ ನೀಡಿ, ತನ್ನ ಪಾಲಿನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿತ್ತು.</p><p>ಈ ಸಂಬಂಧ ಐಸಿಸಿ ಮಂಡಳಿಗಳ ಸಭೆಯಲ್ಲಿ ಸದಸ್ಯರ ಅಭಿಮತ ಪಡೆಯಲಾಗಿತ್ತು. ಬಾಂಗ್ಲಾ ತಂಡವು ಭಾರತದಲ್ಲಿಯೇ ಪಂದ್ಯಗಳನ್ನು ಆಡಬೇಕು ಎನ್ನುವ ನಿರ್ಣಯದ ಪರ 14 ಸದಸ್ಯರು ಮತ ಚಲಾಯಿಸಿದ್ದರು. ಅದರ ವಿರುದ್ಧ ಬಾಂಗ್ಲಾ ಹಾಗೂ ಪಾಕಿಸ್ತಾನ ಮಾತ್ರವೇ ನಿಂತಿದ್ದವು.</p><p>ಹೀಗಾಗಿ, ಬಾಂಗ್ಲಾ ಮಂಡಳಿಗೆ ತನ್ನ ತೀರ್ಮಾನ ವ್ಯಕ್ತಪಡಿಸಲು ಐಸಿಸಿಯು 24 ಗಂಟೆಗಳ ಗಡುವು ನೀಡಿತ್ತು. ಆದಾಗ್ಯೂ, ಬಾಂಗ್ಲಾ ಸರ್ಕಾರದ ಕ್ರೀಡಾ ಸಚಿವಾಲಯದ ಸಲಹೆಗಾರ ಅಸೀಫ್ ನಜ್ರುಲ್ ಅವರು ಐಸಿಸಿ ತೀರ್ಪನ್ನು ಒಪ್ಪಲಿಲ್ಲ. ಇದರಿಂದಾಗಿ ಬಾಂಗ್ಲಾ ತಂಡವನ್ನು ಕೈಬಿಡಲಾಗಿದೆ.</p><p><strong>'ಬಾಂಗ್ಲಾದೇಶ ತಂಡಕ್ಕೆ ಅನ್ಯಾಯ'<br></strong>ಬಾಂಗ್ಲಾದೇಶವನ್ನು ವಿಶ್ವ ಕ್ರಿಕೆಟ್ನ 'ದೊಡ್ಡ ಪಾಲುದಾರ' ರಾಷ್ಟ್ರ ಎಂದು ಬಣ್ಣಿಸಿರುವ ನಖ್ವಿ, ಆ ತಂಡಕ್ಕೆ ಐಸಿಸಿ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದ್ದಾರೆ.</p><p>'ಬಾಂಗ್ಲಾದೇಶವು ವಿಶ್ವ ಕ್ರಿಕೆಟ್ನ ದೊಡ್ಡ ಪಾಲುದಾರ ರಾಷ್ಟ್ರವಾಗಿದ್ದು, ಈ ಪ್ರಕರಣದಲ್ಲಿ ನ್ಯಾಯಯುತವಾಗಿ ನಡೆಸಿಕೊಂಡಿಲ್ಲ. ಬುಧವಾರ (ಜನವರಿ 22ರಂದು) ನಡೆದ ಸಭೆಯಲ್ಲೂ ಇದನ್ನೇ ಪ್ರತಿಪಾದಿಸಿದ್ದೆ. ಐಸಿಸಿ ನಿಲುವಿನಲ್ಲಿ ಹಲವು ಅಂಶಗಳಿವೆ. ಅವನ್ನೆಲ್ಲ ಸಮಯ ಬಂದಾಗ ಮಾತಾಡುತ್ತೇನೆ' ಎಂದಿದ್ದಾರೆ.</p><p><strong>ಭಾರತದ ವಿರುದ್ಧ ಪರೋಕ್ಷ ಕಿಡಿ<br></strong>ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಆಯ್ದ ನಿರ್ಧಾರಗಳನ್ನಷ್ಟೇ ಕೈಗೊಳ್ಳುತ್ತಿದೆ. ಅದರ ತೀರ್ಮಾನಗಳ ಮೇಲೆ 'ಒಂದು ಸದಸ್ಯ ರಾಷ್ಟ್ರ' ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ಭಾರತದತ್ತ ಬೊಟ್ಟು ಮಾಡಿದ್ದಾರೆ.</p><p>'ಒಂದು ದೇಶವು ನಿರ್ದೇಶನಗಳನ್ನು ನೀಡುತ್ತಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳಿಗೆ ಅನುಕೂಲವಾಗುವಂತೆ ಸ್ಥಳ ಬದಲಾವಣೆ ಮಾಡಲು ಐಸಿಸಿಗೆ ಸಾಧ್ಯವಿದೆ ಎಂದಮೇಲೆ, ಅದನ್ನು ಬಾಂಗ್ಲಾ ವಿಚಾರದಲ್ಲೂ ಅನುಸರಿಸಲು ಏಕೆ ಸಾಧ್ಯವಾಗಿಲ್ಲ?' ಎಂದು ಪ್ರಶ್ನಿಸಿದ್ದಾರೆ.</p><p>'ನಮ್ಮ ನೀತಿ ಮತ್ತು ನಿಲುವುಗಳನ್ನು ಸ್ಪಷ್ಟವಾಗಿದೆ. ನಮ್ಮ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ನಾವು ಐಸಿಸಿಗೆ ಅಧೀನರಲ್ಲ. ಸರ್ಕಾರದ ನಿರ್ದೇಶನ ಪಾಲಿಸುತ್ತೇವೆ' ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>