<p><strong>ಕೋಲ್ಕತ್ತ:</strong> ತ್ರಿಪುರದಲ್ಲಿ ಬಿಜೆಪಿಯ ವಿರೋಧವನ್ನು ಮೆಟ್ಟಿ ತೃಣಮೂಲ ಕಾಂಗ್ರೆಸ್ ವಿಧಾನಸಭಾ ಚುನಾವಣೆ ಗೆಲ್ಲುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ. ತ್ರಿಪುರದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆದರೆ ದೆಹಲಿಯಲ್ಲಿ ಪರಿಣಾಮ ಉಂಟಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ!</p>.<p>ಬಿಜೆಪಿ ಕಾರ್ಯಕರ್ತರ ದಾಳಿಯಲ್ಲಿ ಗಾಯಗೊಂಡವರನ್ನು ಸೇರಿದಂತೆ, ಕನಿಷ್ಠ 14 ಟಿಎಂಸಿ ನಾಯಕರು, ಕಾರ್ಯಕರ್ತರನ್ನು ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ತ್ರಿಪುರದ ಖೊವಾಯಿ ಜಿಲ್ಲೆಯಲ್ಲಿ ಆಗಸ್ಟ್ 8 ರಂದು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಗುಟುರು ಹಾಕಿದ್ದಾರೆ.<br /><br />ತ್ರಿಪುರ ವಿಧಾನಸಭೆಗೆ 2023ರಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ. ಆದರೂ ಟಿಎಂಸಿ ನಾಯಕರು ತ್ರಿಪುರಕ್ಕೆ ಭೇಟಿ ನೀಡುವ ಪ್ರಮಾಣ ಕಡಿಮೆ. ಈ ಬಗ್ಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, ಬಿಜೆಪಿಗೆ ನಿಷ್ಠರಾದ ಸುಮಾರು 2 ಲಕ್ಷ ಜನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೊರ ರಾಜ್ಯ, ಹೊರ ದೇಶಗಳಿಂದ ಬಂದಿದ್ದರು. ಬಿಜೆಪಿ ಆಡಳಿತವಿರುವ ತ್ರಿಪುರಕ್ಕೆ ಹೋಗಲು ಟಿಎಂಸಿ ನಾಯಕರಿಗೆ ಏಕೆ ಆಗುತ್ತಿಲ್ಲ ಎಂದು ಮಮತಾ ಆಶ್ಚರ್ಯ ವ್ಯಕ್ತಪಡಿಸಿದರು.</p>.<p>‘ನಾವು ಖಂಡಿತವಾಗಿಯೂ ತ್ರಿಪುರದಲ್ಲಿ ಚುನಾವಣೆ ಗೆಲ್ಲುತ್ತೇವೆ. ತ್ರಿಪುರದಲ್ಲಿ ಹೋರಾಟ ಮುಂದುವರಿಯುತ್ತದೆ,‘ ಎಂದು ಟಿಎಂಸಿ ವರಿಷ್ಠರೂ ಆದ ಮಮತಾ ತಿಳಿಸಿದರು.</p>.<p>‘ತ್ರಿಪುರದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯಗಳು ನಡೆದರೆ, ಅದರ ಪರಿಣಾಮವನ್ನು ದೆಹಲಿಯಲ್ಲಿ ಎದುರಿಸಬೇಕಾಗುತ್ತದೆ,‘ ಎಂದು ಹೇಳಿದ ಮಮತಾ, ಅದರ ಬಗ್ಗೆ ಏನನ್ನೂ ವಿವರಿಸಲಿಲ್ಲ.</p>.<p>ಬಿಜೆಪಿ ಕಾರ್ಯಕರ್ತರು ನಡೆಸಿದ್ದಾರೆ ಎನ್ನಲಾದ ದಾಳಿಯಲ್ಲಿ ಗಾಯಗೊಂಡು, ತ್ರಿಪುರದಿಂದ ಕೋಲ್ಕತ್ತಾಗೆ ಬಂದು ಚಿಕಿತ್ಸೆ ಪಡೆಯುತ್ತಿರುವ ಟಿಎಂಸಿ ಕಾರ್ಯಕರ್ತರನ್ನು ಮಮತಾ ಬ್ಯಾನರ್ಜಿ ಗುರುವಾರ ಭೇಟಿಯಾದರು. ಈ ವೇಳೆ ಮಾತನಾಡಿರುವ ಅವರು, ತ್ರಿಪುರದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತ್ರಿಪುರ ಸರ್ಕಾರಕ್ಕೂ ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ತ್ರಿಪುರದಲ್ಲಿ ಬಿಜೆಪಿಯ ವಿರೋಧವನ್ನು ಮೆಟ್ಟಿ ತೃಣಮೂಲ ಕಾಂಗ್ರೆಸ್ ವಿಧಾನಸಭಾ ಚುನಾವಣೆ ಗೆಲ್ಲುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ. ತ್ರಿಪುರದಲ್ಲಿ ಟಿಎಂಸಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆದರೆ ದೆಹಲಿಯಲ್ಲಿ ಪರಿಣಾಮ ಉಂಟಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ!</p>.<p>ಬಿಜೆಪಿ ಕಾರ್ಯಕರ್ತರ ದಾಳಿಯಲ್ಲಿ ಗಾಯಗೊಂಡವರನ್ನು ಸೇರಿದಂತೆ, ಕನಿಷ್ಠ 14 ಟಿಎಂಸಿ ನಾಯಕರು, ಕಾರ್ಯಕರ್ತರನ್ನು ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ತ್ರಿಪುರದ ಖೊವಾಯಿ ಜಿಲ್ಲೆಯಲ್ಲಿ ಆಗಸ್ಟ್ 8 ರಂದು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಗುಟುರು ಹಾಕಿದ್ದಾರೆ.<br /><br />ತ್ರಿಪುರ ವಿಧಾನಸಭೆಗೆ 2023ರಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ. ಆದರೂ ಟಿಎಂಸಿ ನಾಯಕರು ತ್ರಿಪುರಕ್ಕೆ ಭೇಟಿ ನೀಡುವ ಪ್ರಮಾಣ ಕಡಿಮೆ. ಈ ಬಗ್ಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, ಬಿಜೆಪಿಗೆ ನಿಷ್ಠರಾದ ಸುಮಾರು 2 ಲಕ್ಷ ಜನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೊರ ರಾಜ್ಯ, ಹೊರ ದೇಶಗಳಿಂದ ಬಂದಿದ್ದರು. ಬಿಜೆಪಿ ಆಡಳಿತವಿರುವ ತ್ರಿಪುರಕ್ಕೆ ಹೋಗಲು ಟಿಎಂಸಿ ನಾಯಕರಿಗೆ ಏಕೆ ಆಗುತ್ತಿಲ್ಲ ಎಂದು ಮಮತಾ ಆಶ್ಚರ್ಯ ವ್ಯಕ್ತಪಡಿಸಿದರು.</p>.<p>‘ನಾವು ಖಂಡಿತವಾಗಿಯೂ ತ್ರಿಪುರದಲ್ಲಿ ಚುನಾವಣೆ ಗೆಲ್ಲುತ್ತೇವೆ. ತ್ರಿಪುರದಲ್ಲಿ ಹೋರಾಟ ಮುಂದುವರಿಯುತ್ತದೆ,‘ ಎಂದು ಟಿಎಂಸಿ ವರಿಷ್ಠರೂ ಆದ ಮಮತಾ ತಿಳಿಸಿದರು.</p>.<p>‘ತ್ರಿಪುರದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯಗಳು ನಡೆದರೆ, ಅದರ ಪರಿಣಾಮವನ್ನು ದೆಹಲಿಯಲ್ಲಿ ಎದುರಿಸಬೇಕಾಗುತ್ತದೆ,‘ ಎಂದು ಹೇಳಿದ ಮಮತಾ, ಅದರ ಬಗ್ಗೆ ಏನನ್ನೂ ವಿವರಿಸಲಿಲ್ಲ.</p>.<p>ಬಿಜೆಪಿ ಕಾರ್ಯಕರ್ತರು ನಡೆಸಿದ್ದಾರೆ ಎನ್ನಲಾದ ದಾಳಿಯಲ್ಲಿ ಗಾಯಗೊಂಡು, ತ್ರಿಪುರದಿಂದ ಕೋಲ್ಕತ್ತಾಗೆ ಬಂದು ಚಿಕಿತ್ಸೆ ಪಡೆಯುತ್ತಿರುವ ಟಿಎಂಸಿ ಕಾರ್ಯಕರ್ತರನ್ನು ಮಮತಾ ಬ್ಯಾನರ್ಜಿ ಗುರುವಾರ ಭೇಟಿಯಾದರು. ಈ ವೇಳೆ ಮಾತನಾಡಿರುವ ಅವರು, ತ್ರಿಪುರದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತ್ರಿಪುರ ಸರ್ಕಾರಕ್ಕೂ ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>