ಕಳೆದ ಫೆಬ್ರುವರಿಯಲ್ಲಿ ನಡೆದ ದೆಹಲಿ ಗಲಭೆಯಲ್ಲಿ ಫೇಸ್ಬುಕ್ ಕೂಡಾ ಶಾಮೀಲಾಗಿತ್ತು ಎನ್ನುವ ಆರೋಪದಡಿ ವಿಚಾರಣೆಗೆ ಹಾಜರಾಗಲು ಅಜಿತ್ ಮೋಹನ್ಗೆ ವಿಧಾನಸಭೆ ಕಾರ್ಯದರ್ಶಿಯವರು ಸೆ.18ರಂದು ಸೂಚಿಸಿದ್ದರು. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರಾದ ಹರೀಶ್ ಸಾಳ್ವೆ, ‘ಮಾತನಾಡುವಂತೆ ಅರ್ಜಿದಾರರ ಮೇಲೆ ಒತ್ತಡ ಹೇರಿದರೆ, ಸಂವಿಧಾನದ ವಿಧಿ 19 ಹಾಗೂ 21ರಡಿ ನೀಡಿರುವ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ವಾಕ್ಸ್ವಾಂತಂತ್ರ್ಯದಲ್ಲಿ ಮಾತನಾಡದೇ ಇರುವ ಹಕ್ಕನ್ನೂ ನೀಡಲಾಗಿದೆ’ ಎಂದರು.