ಕಂಗನಾ ಅವರನ್ನು ಕಟುವಾಗಿ ಟೀಕಿಸಿದ ವರುಣ್ ಗಾಂಧಿ, ‘ಒಮ್ಮೆ ಮಹಾತ್ಮ ಗಾಂಧಿಯವರ ತ್ಯಾಗವನ್ನು ಅವಮಾನಿಸಿ, ಕೆಲವೊಮ್ಮೆ ಅವರ ಹಂತಕನನ್ನು ಗೌರವಿಸಿ, ಈಗ ಮಂಗಲ್ ಪಾಂಡೆ, ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆ ತಿರಸ್ಕಾರದ ಮಾತು ಆಡಿದ್ದೀರಿ. ಇದನ್ನು ಹುಚ್ಚುತನ ಅಥವಾ ದೇಶದ್ರೋಹ ಎನ್ನದೇ ಮತ್ತೇನೆಂದು ಕರೆಯಬೇಕು’ ಎಂದು ಹರಿಹಾಯ್ದಿದ್ದಾರೆ.