’ನನ್ನ ಮಗ ಓದಿನಲ್ಲಿ ಮುಂದಿದ್ದ. ಅವನಿಗಾಗಿ ಕಷ್ಟಪಟ್ಟು ಸಾಲ ಮಾಡಿ ಶಿಕ್ಷಣ ಕೊಡಿಸಿದ್ದೇವೆ. ಈ ಬಾರಿ ಪರೀಕ್ಷೆ ಬರೆದ ನಂತರ ಸಂಬಂಧಿ ಯುವತಿಯ ಜೊತೆ ನಿಶ್ಚಿತಾರ್ಥಕ್ಕೆ ಸಿದ್ಧತೆ ಮಾಡಿಕೊಂಡಿದ್ದೆವು. ಅವನು ಅಮಾಯಕನಾಗಿದ್ದು, ಯಾರದ್ದೋ ಕೃತ್ಯಕ್ಕೆ ಬಲಿಯಾಗಿದ್ದಾನೆ’ ಎಂದು ರಮೇಶನ ತಾಯಿ ಶಾಂತವ್ವ ಬೂದಿಹಾಳದಲ್ಲಿ ಮಾಧ್ಯಮದವರ ಎದುರು ಕಣ್ಣೀರಿಟ್ಟರು.