‘ನಮ್ಮೂರಿನಲ್ಲಿ ಸಮ್ಮೇಳನ ನಡೆಯುತ್ತಿರುವುದು ಖುಷಿಯಾಗಿದೆ. ಹಾವೇರಿ ಜ್ಞಾನ ಮತ್ತು ಸಾಹಿತ್ಯದ ಬೀಡು. ಇಂತಹ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ ಮಾಡಿದರೆ ಕನ್ನಡದ ಅಸ್ಮಿತೆ ಎತ್ತಿ ಹಿಡಿದಂತಾಗುತ್ತದೆ. ಪ್ರಚಲಿತ ವಿಷಯಗಳು, ಸಮಸ್ಯೆಗಳ ಚರ್ಚೆ ಹಾಗೂ ಪರಿಹಾರದ ಜೊತೆಗೆ, ಭವಿಷ್ಯದಲ್ಲಿ ಕನ್ನಡ ಯಾವ ಮಟ್ಟಕ್ಕೆ ಹೋಗಬೇಕು ಎನ್ನುವುದಕ್ಕೆ ಸಮ್ಮೇಳನ ಮುನ್ನುಡಿ ಬರೆಯಲಿದೆ’ ಎಂದರು.