<p>ಉತ್ತರ ಭಾರತಕ್ಕೆ ಹೋಗಬೇಕು, ಹಿಮಾಲಯದಲ್ಲಿ ಚಾರಣ ಮಾಡಬೇಕು, ಸಾಹಸಮಯ ಅನ್ವೇಷಣೆಯನ್ನು ಕೈಗೊಳ್ಳಬೇಕು ಎನ್ನುವ ಪರ್ವತಾರೋಹಿಗಳಿಗೆ ಉತ್ತರಾಖಂಡ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. 83 ಪ್ರಮುಖ ಹಿಮಾಲಯ ಶಿಖರಗಳನ್ನು ಪರ್ವತಾರೋಹಿಗಳ ಚಾರಣಕ್ಕೆ ಮುಕ್ತವಾಗಿಸಿದೆ.</p><p>ಸಾಹಸ ಪ್ರವಾಸೋದ್ಯಮವನ್ನು ಬಲಪಡಿಸಲು, ಭಾರತ ಮತ್ತು ವಿದೇಶಗಳಿಂದ ಪರ್ವತಾರೋಹಿಗಳನ್ನು ಆಕರ್ಷಿಸಲು ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ ಪರ್ವತಾರೋಹಣಕ್ಕೆ ರಾಜ್ಯ ಮಟ್ಟದಲ್ಲಿ ವಿಧಿಸಲಾಗುತ್ತಿದ್ದ ಹೆಚ್ಚುವರಿ ಶುಲ್ಕಗಳನ್ನು ತೆಗೆದುಹಾಕಿದೆ.</p>.ಪ್ರವಾಸ: ಚಾರಣ ಬೇಡವೆನ್ನುತ್ತಾ ಹಿಮಾಲಯ ಏರಿದೆ!.ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?.<p>ಪರ್ವತಾರೋಹಣ ಅಥವಾ ಚಾರಣಕ್ಕೆ ಸಂಬಂಧಿಸಿದ ಅನುಮತಿಯನ್ನು ಉತ್ತರಾಖಂಡ ಮೌಂಟೇನಿಯರಿಂಗ್ ಪರ್ಮಿಷನ್ ಸಿಸ್ಟಮ್’ (UKMPS) ಆನ್ಲೈನ್ ಪೋರ್ಟಲ್ ಮೂಲಕ ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ. ಆದರೆ ವಿದೇಶಿ ಪರ್ವತಾರೋಹಿಗಳು ಭಾರತೀಯ ಪರ್ವತಾರೋಹಣ ಪ್ರತಿಷ್ಠಾನ (Indian Mountaineering Foundation – IMF) ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ.</p>.<h2><ins>ಪರ್ವತಾರೋಹಣಕ್ಕೆ ಮುಕ್ತವಾಗಿರುವ ಪ್ರಮುಖ ಶಿಖರಗಳು</ins></h2>.<h2><ins>ಆರ್ಥಿಕತೆಗೆ ಬಲ ತುಂಬುವ ಭರವಸೆ</ins></h2><p>83 ಹಿಮಾಲಯ ಶಿಖರಗಳನ್ನು ಚಾರಣಕ್ಕೆ ಮುಕ್ತವಾಗಿಸುವ ಮೂಲಕ, ರಾಜ್ಯವು ದೂರದ ಮತ್ತು ಗಡಿ ಹಳ್ಳಿಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ಹೆಚ್ಚಿಸುವ ಮತ್ತು ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಜತೆಗೆ ಈ ಉಪಕ್ರಮವು ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರ ವಲಸೆಯನ್ನು ತಡೆಯಲು, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ನೆರವಾಗಲಿದೆ.</p><p>ಈ ಕ್ರಮದಿಂದಾಗಿ ಚಾರಣ ಮಾರ್ಗದರ್ಶಕರು ಮತ್ತು ಪರ್ವತಾರೋಹಣ ಸಹಾಯಕರಿಗೆ ಉದ್ಯೋಗ, ಪೋರ್ಟರ್ಗಳು ಮತ್ತು ಲಾಜಿಸ್ಟಿಕ್ಸ್ ಸಿಬ್ಬಂದಿಗೆ ಕೆಲಸ ಸಿಗುವ ಭರವಸೆ, ಹೋಂಸ್ಟೇ ಮತ್ತು ಅತಿಥಿಗೃಹಗಳ ನಿರ್ವಾಹಕರಿಗೆ ಆದಾಯ, ಸಾರಿಗೆಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.</p>.ಓಹೋ ಹಿಮಾಲಯ.. ವೀರಕಪುತ್ರ ಶ್ರೀನಿವಾಸ ಅವರ ಪ್ರವಾಸ ಕಥನ.ಆಹಾ ಹಿಮಾಲಯ....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉತ್ತರ ಭಾರತಕ್ಕೆ ಹೋಗಬೇಕು, ಹಿಮಾಲಯದಲ್ಲಿ ಚಾರಣ ಮಾಡಬೇಕು, ಸಾಹಸಮಯ ಅನ್ವೇಷಣೆಯನ್ನು ಕೈಗೊಳ್ಳಬೇಕು ಎನ್ನುವ ಪರ್ವತಾರೋಹಿಗಳಿಗೆ ಉತ್ತರಾಖಂಡ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. 83 ಪ್ರಮುಖ ಹಿಮಾಲಯ ಶಿಖರಗಳನ್ನು ಪರ್ವತಾರೋಹಿಗಳ ಚಾರಣಕ್ಕೆ ಮುಕ್ತವಾಗಿಸಿದೆ.</p><p>ಸಾಹಸ ಪ್ರವಾಸೋದ್ಯಮವನ್ನು ಬಲಪಡಿಸಲು, ಭಾರತ ಮತ್ತು ವಿದೇಶಗಳಿಂದ ಪರ್ವತಾರೋಹಿಗಳನ್ನು ಆಕರ್ಷಿಸಲು ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ ಪರ್ವತಾರೋಹಣಕ್ಕೆ ರಾಜ್ಯ ಮಟ್ಟದಲ್ಲಿ ವಿಧಿಸಲಾಗುತ್ತಿದ್ದ ಹೆಚ್ಚುವರಿ ಶುಲ್ಕಗಳನ್ನು ತೆಗೆದುಹಾಕಿದೆ.</p>.ಪ್ರವಾಸ: ಚಾರಣ ಬೇಡವೆನ್ನುತ್ತಾ ಹಿಮಾಲಯ ಏರಿದೆ!.ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?.<p>ಪರ್ವತಾರೋಹಣ ಅಥವಾ ಚಾರಣಕ್ಕೆ ಸಂಬಂಧಿಸಿದ ಅನುಮತಿಯನ್ನು ಉತ್ತರಾಖಂಡ ಮೌಂಟೇನಿಯರಿಂಗ್ ಪರ್ಮಿಷನ್ ಸಿಸ್ಟಮ್’ (UKMPS) ಆನ್ಲೈನ್ ಪೋರ್ಟಲ್ ಮೂಲಕ ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ. ಆದರೆ ವಿದೇಶಿ ಪರ್ವತಾರೋಹಿಗಳು ಭಾರತೀಯ ಪರ್ವತಾರೋಹಣ ಪ್ರತಿಷ್ಠಾನ (Indian Mountaineering Foundation – IMF) ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ.</p>.<h2><ins>ಪರ್ವತಾರೋಹಣಕ್ಕೆ ಮುಕ್ತವಾಗಿರುವ ಪ್ರಮುಖ ಶಿಖರಗಳು</ins></h2>.<h2><ins>ಆರ್ಥಿಕತೆಗೆ ಬಲ ತುಂಬುವ ಭರವಸೆ</ins></h2><p>83 ಹಿಮಾಲಯ ಶಿಖರಗಳನ್ನು ಚಾರಣಕ್ಕೆ ಮುಕ್ತವಾಗಿಸುವ ಮೂಲಕ, ರಾಜ್ಯವು ದೂರದ ಮತ್ತು ಗಡಿ ಹಳ್ಳಿಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ಹೆಚ್ಚಿಸುವ ಮತ್ತು ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಜತೆಗೆ ಈ ಉಪಕ್ರಮವು ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರ ವಲಸೆಯನ್ನು ತಡೆಯಲು, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ನೆರವಾಗಲಿದೆ.</p><p>ಈ ಕ್ರಮದಿಂದಾಗಿ ಚಾರಣ ಮಾರ್ಗದರ್ಶಕರು ಮತ್ತು ಪರ್ವತಾರೋಹಣ ಸಹಾಯಕರಿಗೆ ಉದ್ಯೋಗ, ಪೋರ್ಟರ್ಗಳು ಮತ್ತು ಲಾಜಿಸ್ಟಿಕ್ಸ್ ಸಿಬ್ಬಂದಿಗೆ ಕೆಲಸ ಸಿಗುವ ಭರವಸೆ, ಹೋಂಸ್ಟೇ ಮತ್ತು ಅತಿಥಿಗೃಹಗಳ ನಿರ್ವಾಹಕರಿಗೆ ಆದಾಯ, ಸಾರಿಗೆಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.</p>.ಓಹೋ ಹಿಮಾಲಯ.. ವೀರಕಪುತ್ರ ಶ್ರೀನಿವಾಸ ಅವರ ಪ್ರವಾಸ ಕಥನ.ಆಹಾ ಹಿಮಾಲಯ....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>