‘ಇಂಡಿಯಾ’ ಮೈತ್ರಿಕೂಟವು ಪರಿಣಾಮಕಾರಿಯಾಗಿ ಕೆಲಸ ಮಾಡಲು ಕಾಂಗ್ರೆಸ್ ಸಹಕಾರ ನೀಡಿಲ್ಲ.
ಟಿ.ಪಿ. ರಾಮಕೃಷ್ಣನ್ ಸಿಪಿಎಂ ನಾಯಕ
‘ಇಂಡಿಯಾ’ ಮೈತ್ರಿಕೂಟದ ಪಾಲುದಾರ ಪಕ್ಷಗಳು ಒಂದಾಗಿದ್ದಿದ್ದರೆ ದೆಹಲಿಯಲ್ಲಿ ಬಿಜೆಪಿ ಗೆಲ್ಲುತ್ತಿರಲಿಲ್ಲ. ಮೈತ್ರಿಕೂಟದ ಎಲ್ಲರೂ ಈ ವಿಚಾರದ ಬಗ್ಗೆ ಚರ್ಚಿಸಬೇಕು.
ಪಿ.ಕೆ. ಕುಞ್ಞಾಲಿಕುಟ್ಟಿ ಐಯುಎಂಎಲ್ ನಾಯಕ
ಪ್ರಧಾನಿ ನರೇಂದ್ರ ಮೋದಿ ಅವರು 2015 ಹಾಗೂ 2020ರಲ್ಲಿ ಜನಪ್ರಿಯತೆಯ ಶಿಖರದಲ್ಲಿದ್ದರು. ಆಗ ದೆಹಲಿಯಲ್ಲಿ ಎಎಪಿ ಗೆಲುವು ಸಾಧಿಸಿತ್ತು. ಈಗ ದೆಹಲಿಯಲ್ಲಿ ಮತದಾರರು ನೀಡಿರುವ ಆದೇಶವು ಪ್ರಧಾನಿಯವರ ನೀತಿಗಳ ಗೆಲುವು ಎನ್ನುವುದಕ್ಕಿಂತಲೂ ಇದು ಅರವಿಂದ ಕೇಜ್ರಿವಾಲ್ ಅವರ ನೀತಿಗಳನ್ನು ತಿರಸ್ಕರಿಸುವ ಬಗೆಯಾಗಿ ಕಾಣುತ್ತಿದೆ.