<p><strong>ನಾಗ್ಪುರ:</strong> 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಸಂದರ್ಭದಲ್ಲಿ ಚೀನಾ ನಿರ್ಮಿತ ಕಡಿಮೆ ಬೆಲೆಯ ಪಾಕಿಸ್ತಾನದ ಡ್ರೋನ್ಗಳನ್ನು ಹೊಡೆದುರುಳಿಸಲು ₹15 ಲಕ್ಷ ಮೌಲ್ಯದ ಕ್ಷಿಪಣಿಗಳನ್ನು ಏಕೆ ಬಳಸಲಾಯಿತು ಎಂದು ಕಾಂಗ್ರೆಸ್ ನಾಯಕರೊಬ್ಬರು ಪ್ರಶ್ನೆ ಮಾಡಿದ್ದಾರೆ. </p><p>'ಬಹುಶಃ ಪಾಕಿಸ್ತಾನ ಹಾರಿಸಿರುವ ಚೀನಾ ನಿರ್ಮಿತ ಡ್ರೋನ್ಗಳ ಬೆಲೆ ತಲಾ ₹15,000 ಆಗಿರುವ ಸಾಧ್ಯತೆಯಿದೆ. ಇವುಗಳನ್ನು ಹೊಡೆದುರುಳಿಸಲು ಭಾರತ ತಲಾ ₹15 ಲಕ್ಷ ಬೆಲೆಬಾಳುವ ಕ್ಷಿಪಣಿಗಳನ್ನು ಬಳಕೆ ಮಾಡಿದೆ. ಹಾಗಾಗಿ ನಮಗೆ ಆದ ನಷ್ಟದ ಕುರಿತು ಸರ್ಕಾರ ಮಾಹಿತಿ ನೀಡಬೇಕು' ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಆಗ್ರಹಿಸಿದ್ದಾರೆ. </p><p>ನಾಗ್ಪುರದಲ್ಲಿ ಬುಧವಾರದಂದು (ಮೇ 21) ಮಾತನಾಡಿದ ಅವರು, ಪಾಕ್ ವಿರುದ್ಧದ ಸಂಘರ್ಷದಲ್ಲಿ ಉಂಟಾಗಿರುವ ನಷ್ಟದ ಕುರಿತು ಕೇಳುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ. </p><p>ಸೇನಾ ಕಾರ್ಯಾಚರಣೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಚುಟ್ಪುಟ್' (ಸಣ್ಣ ಯುದ್ಧ) ಎಂದು ಕರೆದಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಸಂಘರ್ಷದಲ್ಲಿ ದೇಶಕ್ಕೆ ಆದ ನಷ್ಟ ಹಾಗೂ ಯೋಧರ ಸಾವು-ನೋವುಗಳ ಕುರಿತು ಸರ್ಕಾರವನ್ನು ಪ್ರಶ್ನಿಸುವುದು ತಪ್ಪಲ್ಲ' ಎಂದು ತಿಳಿಸಿದ್ದಾರೆ. </p><p>'ಪಾಕ್ ವಿರುದ್ಧದ ಯುದ್ಧದಲ್ಲಿ ನಮ್ಮ ರಫೇಲ್ ಯುದ್ಧ ವಿಮಾನ ನಷ್ಟವಾಗಿದೆಯೇ?' ಎಂದೂ ಕೇಳಿದ್ದಾರೆ. </p> .Operation Sindoor | ಪಾಕ್ಗೆ ಸರ್ಕಾರದಿಂದಲೇ ಮಾಹಿತಿ: ರಾಹುಲ್ ಆರೋಪ.ಪಾಕಿಸ್ತಾನದ ಮಿಲಿಟರಿ ಪೋಸ್ಟ್, ಡ್ರೋನ್ ಲಾಂಚ್ಪ್ಯಾಡ್ ಧ್ವಂಸಗೊಳಿಸಿದ ಭಾರತ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗ್ಪುರ:</strong> 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಸಂದರ್ಭದಲ್ಲಿ ಚೀನಾ ನಿರ್ಮಿತ ಕಡಿಮೆ ಬೆಲೆಯ ಪಾಕಿಸ್ತಾನದ ಡ್ರೋನ್ಗಳನ್ನು ಹೊಡೆದುರುಳಿಸಲು ₹15 ಲಕ್ಷ ಮೌಲ್ಯದ ಕ್ಷಿಪಣಿಗಳನ್ನು ಏಕೆ ಬಳಸಲಾಯಿತು ಎಂದು ಕಾಂಗ್ರೆಸ್ ನಾಯಕರೊಬ್ಬರು ಪ್ರಶ್ನೆ ಮಾಡಿದ್ದಾರೆ. </p><p>'ಬಹುಶಃ ಪಾಕಿಸ್ತಾನ ಹಾರಿಸಿರುವ ಚೀನಾ ನಿರ್ಮಿತ ಡ್ರೋನ್ಗಳ ಬೆಲೆ ತಲಾ ₹15,000 ಆಗಿರುವ ಸಾಧ್ಯತೆಯಿದೆ. ಇವುಗಳನ್ನು ಹೊಡೆದುರುಳಿಸಲು ಭಾರತ ತಲಾ ₹15 ಲಕ್ಷ ಬೆಲೆಬಾಳುವ ಕ್ಷಿಪಣಿಗಳನ್ನು ಬಳಕೆ ಮಾಡಿದೆ. ಹಾಗಾಗಿ ನಮಗೆ ಆದ ನಷ್ಟದ ಕುರಿತು ಸರ್ಕಾರ ಮಾಹಿತಿ ನೀಡಬೇಕು' ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಆಗ್ರಹಿಸಿದ್ದಾರೆ. </p><p>ನಾಗ್ಪುರದಲ್ಲಿ ಬುಧವಾರದಂದು (ಮೇ 21) ಮಾತನಾಡಿದ ಅವರು, ಪಾಕ್ ವಿರುದ್ಧದ ಸಂಘರ್ಷದಲ್ಲಿ ಉಂಟಾಗಿರುವ ನಷ್ಟದ ಕುರಿತು ಕೇಳುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ. </p><p>ಸೇನಾ ಕಾರ್ಯಾಚರಣೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಚುಟ್ಪುಟ್' (ಸಣ್ಣ ಯುದ್ಧ) ಎಂದು ಕರೆದಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಸಂಘರ್ಷದಲ್ಲಿ ದೇಶಕ್ಕೆ ಆದ ನಷ್ಟ ಹಾಗೂ ಯೋಧರ ಸಾವು-ನೋವುಗಳ ಕುರಿತು ಸರ್ಕಾರವನ್ನು ಪ್ರಶ್ನಿಸುವುದು ತಪ್ಪಲ್ಲ' ಎಂದು ತಿಳಿಸಿದ್ದಾರೆ. </p><p>'ಪಾಕ್ ವಿರುದ್ಧದ ಯುದ್ಧದಲ್ಲಿ ನಮ್ಮ ರಫೇಲ್ ಯುದ್ಧ ವಿಮಾನ ನಷ್ಟವಾಗಿದೆಯೇ?' ಎಂದೂ ಕೇಳಿದ್ದಾರೆ. </p> .Operation Sindoor | ಪಾಕ್ಗೆ ಸರ್ಕಾರದಿಂದಲೇ ಮಾಹಿತಿ: ರಾಹುಲ್ ಆರೋಪ.ಪಾಕಿಸ್ತಾನದ ಮಿಲಿಟರಿ ಪೋಸ್ಟ್, ಡ್ರೋನ್ ಲಾಂಚ್ಪ್ಯಾಡ್ ಧ್ವಂಸಗೊಳಿಸಿದ ಭಾರತ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>