‘ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ನೇತೃತ್ವದಲ್ಲಿ ರಥಯಾತ್ರೆ ಆರಂಭಿಸಿದಾಗ ನಾವು ಬೆಂಬಲಿಸಿದ್ದೆವು. ಆಗ ಬಿಜೆಪಿ ಕೇವಲ 2 ಸಂಸದರನ್ನು ಹೊಂದಿತ್ತು. ಆದರೆ, ಸರ್ಕಾರ ರಚಿಸಬೇಕಾಗಿ ಬಂದಾಗ, ಜಯಲಲಿತಾ ಮತ್ತು ಇತರರಿಂದ ಬೆಂಬಲವನ್ನು ಬಯಸಿದಾಗ, ಜಾತ್ಯತೀತತೆಗಾಗಿ ಇತರ ಪಕ್ಷಗಳು ಅಡ್ವಾಣಿಯವರನ್ನು ವಿರೋಧಿಸಿದ್ದವು. ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದರು. ಹಾಗಾದರೆ ಹಿಂದೂ ಧರ್ಮ, ಶಿವಸೇನಾ ಅಥವಾ ಬಿಜೆಪಿ ತೊರೆದವರು ಯಾರು’ ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.