<p>ಚಂದ್ರಯಾನ–3 ಯಶಸ್ವಿ ಸಾಫ್ಟ್ ಲ್ಯಾಂಡಿಂಗ್, ಕಾವೇರಿ ಜಲ ವಿವಾದ , ನರೇಗಾ ವೇತನ ಬಾಕಿ, ಉಕ್ರೇನ್ ಮೇಲೆ ದಾಳಿ, ಐಸಿಸಿ ಟೆಸ್ಟ್ ರ್ಯಾಂಕಿಂಗ್, ರೈಲ್ವೇ ಮೇಲ್ಸೆತುವೆ ಕುಸಿತ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.......</p>.<p>ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಪ್ರದೇಶದಲ್ಲಿ ಇಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆಯ (ಇಸ್ರೊ) ಘೋಷಿಸಿದೆ.</p><p><strong>ಸಂಪೂರ್ಣ ಸುದ್ದಿ ಓದಲು:</strong> <strong><a href="https://www.prajavani.net/news/india-news/isro-chandrayaan-3-makes-history-india-becomes-first-to-land-on-south-pole-of-moon-2451400">ಇತಿಹಾಸ ಬರೆದ ಇಸ್ರೊ; ಚಂದ್ರನ ದಕ್ಷಿಣ ಧ್ರುವಕ್ಕೆ ಅಡಿ ಇಟ್ಟ ಮೊದಲ ದೇಶ ಭಾರತ</a></strong></p>.<p>ಚಂದ್ರಯಾನ-3 ಯೋಜನೆ ಯಶಸ್ಸು ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಇಂತಹ ಐತಿಹಾಸಿಕ ಕ್ಷಣಗಳನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇದು ನವಭಾರತದ ಉದಯ’ ಎಂದು ಕೊಂಡಾಡಿದ್ದಾರೆ. </p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/india-news/chandrayaan-3-moon-landing-live-this-sounds-bugle-for-developed-india-says-modi-after-mission-success-2451348">ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಡಿಂಗ್ ಯಶಸ್ವಿ: ಇದು ನವ ಭಾರತದ ಉದಯ ಎಂದ ಮೋದಿ</a></p>.<p>ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ 'ವಿಕ್ರಮ್' ಲ್ಯಾಂಡರ್ ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ಚಂದ್ರಯಾನ-3 ಯೋಜನೆ ಯಶಸ್ಸಿನ ಕುರಿತು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/india-news/narendra-modi-siddaramaiah-reacts-to-chandrayaan-3s-historic-landing-on-moons-south-pole-2451473">ಚಂದ್ರಯಾನ –3 ಯಶಸ್ವಿ: ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರ</a></p>.<p>ಕಾವೇರಿ, ಮೇಕೆದಾಟು ಯೋಜನೆ, ಮಹದಾಯಿ ಜಲ ವಿವಾದಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ, ವೀರಪ್ಪ ಮೊಯಿಲಿ ಸೇರಿದಂತೆ ದೆಹಲಿಯಲ್ಲಿ ಸರ್ಕಾರವನ್ನು ಪ್ರತಿನಿಧಿಸುವ ಕಾನೂನು ತಂಡ ಸಹ ಪಾಲ್ಗೊಂಡಿತ್ತು.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/karnataka-news/all-party-meeting-discussed-about-water-disputes-2451080">ಜಲ ವಿವಾದ: ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಒಯ್ಯಲು ನಿರ್ಧಾರ– ಸಿದ್ದರಾಮಯ್ಯ</a></p>.<p>ನರೇಗಾ ಯೋಜನೆಗೆ ಬಜೆಟ್ನಲ್ಲಿ ಮೂರನೇ ಒಂದು ಭಾಗದಷ್ಟು ಕಡಿತದ ನಂತರವೂ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ₹ 6,366 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/india-news/modi-govt-owes-mgnrega-wages-to-18-states-uts-congress-2450980">ಮೋದಿ ಸರ್ಕಾರ ₹ 6,366 ಕೋಟಿ ನರೇಗಾ ವೇತನ ಬಾಕಿ ಉಳಿಸಿಕೊಂಡಿದೆ: ಖರ್ಗೆ ಆರೋಪ</a></p>.<p>ಉಕ್ರೇನ್ನ ದಕ್ಷಿಣದ ಬಂದರು ನಗರ ಒಡೆಸಾ ಮತ್ತು ಡಾನ್ಯೂಬ್ ನದಿ ತೀರ ಪ್ರದೇಶಗಳಲ್ಲಿರುವ ಪ್ರಮುಖ ಧಾನ್ಯ ಮೂಲಸೌಕರ್ಯಗಳ ರಷ್ಯಾ ಸೇನೆ ಮಂಗಳವಾರ ರಾತ್ರಿ ಡ್ರೋನ್ ದಾಳಿ ನಡೆಸಿದೆ. ಉಕ್ರೇನ್ ಸೇನೆ ಮತ್ತು ಸ್ಥಳೀಯ ಆಡಳಿತ ಈ ಬಗ್ಗೆ ಬುಧವಾರ ಹೇಳಿಕೆ ನೀಡಿವೆ.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/world-news/russia-attacks-grain-facilities-in-ukraine-danube-region-military-2450964">ಉಕ್ರೇನ್ನ ಡಾನ್ಯೂಬ್ ಪ್ರದೇಶದಲ್ಲಿನ ಧಾನ್ಯ ಮೂಲಸೌಕರ್ಯಗಳ ಮೇಲೆ ರಷ್ಯಾ ದಾಳಿ</a></p>.<p>ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಕುಸಿದು ಕನಿಷ್ಠ 17 ಕಾರ್ಮಿಕರು ಮೃತಪಟ್ಟಿರುವ ದುರಂತ ಮಿಜೋರಾಂನ ಸಾಯಿರಂಗ್ ಪ್ರದೇಶದಲ್ಲಿ ಬುಧವಾರ ಸಂಭವಿಸಿದೆ.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/india-news/many-killed-after-under-construction-railway-bridge-collapses-inmizoram-2451033">ಮಿಜೋರಾಂ: ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಕುಸಿದು 17 ಕಾರ್ಮಿಕರು ಸಾವು</a></p>.<p>ಭಾರತದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.</p><p><strong>ಸಂಪೂರ್ಣ ಸುದ್ದಿ ಓದಲು: <a href="https://www.prajavani.net/sports/cricket/icc-test-rankings-r-ashwin-ravindra-jadeja-shubman-gill-reaches-fourth-spot-in-odi-batting-rankings-2451175">ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಶ್ವಿನ್, ಜಡೇಜಗೆ ಅಗ್ರಸ್ಥಾನ</a></strong></p>.<p>ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನ್ವಯ ರೂಪಿಸಿರುವ ಹೊಸ ಪಠ್ಯಕ್ರಮ ಚೌಕಟ್ಟಿನ ಪ್ರಕಾರ ವರ್ಷದಲ್ಲಿ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/india-news/board-exams-twice-a-year-class-11-12-students-to-study-2-languages-moes-new-curriculum-framework-2451122">ವರ್ಷದಲ್ಲಿ ಎರಡು ಬಾರಿ ಬೋರ್ಡ್ ಪರೀಕ್ಷೆಗಳು: ಶಿಕ್ಷಣ ಸಚಿವಾಲಯ</a></p>.<p>ಸದಸ್ಯ ರಾಷ್ಟ್ರಗಳ ಒಮ್ಮತದ ಮೇರೆಗೆ ಬ್ರಿಕ್ಸ್ ವಿಸ್ತರಣೆಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/world-news/india-supports-consensus-based-expansion-of-brics-pm-modi-2451470">ಬ್ರಿಕ್ಸ್ ವಿಸ್ತರಣೆಗೆ ಭಾರತದ ಬೆಂಬಲ: ಸದಸ್ಯ ರಾಷ್ಟ್ರಗಳ ಒಮ್ಮತ ಕೋರಿದ ಮೋದಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಂದ್ರಯಾನ–3 ಯಶಸ್ವಿ ಸಾಫ್ಟ್ ಲ್ಯಾಂಡಿಂಗ್, ಕಾವೇರಿ ಜಲ ವಿವಾದ , ನರೇಗಾ ವೇತನ ಬಾಕಿ, ಉಕ್ರೇನ್ ಮೇಲೆ ದಾಳಿ, ಐಸಿಸಿ ಟೆಸ್ಟ್ ರ್ಯಾಂಕಿಂಗ್, ರೈಲ್ವೇ ಮೇಲ್ಸೆತುವೆ ಕುಸಿತ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.......</p>.<p>ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಪ್ರದೇಶದಲ್ಲಿ ಇಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆಯ (ಇಸ್ರೊ) ಘೋಷಿಸಿದೆ.</p><p><strong>ಸಂಪೂರ್ಣ ಸುದ್ದಿ ಓದಲು:</strong> <strong><a href="https://www.prajavani.net/news/india-news/isro-chandrayaan-3-makes-history-india-becomes-first-to-land-on-south-pole-of-moon-2451400">ಇತಿಹಾಸ ಬರೆದ ಇಸ್ರೊ; ಚಂದ್ರನ ದಕ್ಷಿಣ ಧ್ರುವಕ್ಕೆ ಅಡಿ ಇಟ್ಟ ಮೊದಲ ದೇಶ ಭಾರತ</a></strong></p>.<p>ಚಂದ್ರಯಾನ-3 ಯೋಜನೆ ಯಶಸ್ಸು ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಇಂತಹ ಐತಿಹಾಸಿಕ ಕ್ಷಣಗಳನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇದು ನವಭಾರತದ ಉದಯ’ ಎಂದು ಕೊಂಡಾಡಿದ್ದಾರೆ. </p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/india-news/chandrayaan-3-moon-landing-live-this-sounds-bugle-for-developed-india-says-modi-after-mission-success-2451348">ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಡಿಂಗ್ ಯಶಸ್ವಿ: ಇದು ನವ ಭಾರತದ ಉದಯ ಎಂದ ಮೋದಿ</a></p>.<p>ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ 'ವಿಕ್ರಮ್' ಲ್ಯಾಂಡರ್ ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ಚಂದ್ರಯಾನ-3 ಯೋಜನೆ ಯಶಸ್ಸಿನ ಕುರಿತು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/india-news/narendra-modi-siddaramaiah-reacts-to-chandrayaan-3s-historic-landing-on-moons-south-pole-2451473">ಚಂದ್ರಯಾನ –3 ಯಶಸ್ವಿ: ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರ</a></p>.<p>ಕಾವೇರಿ, ಮೇಕೆದಾಟು ಯೋಜನೆ, ಮಹದಾಯಿ ಜಲ ವಿವಾದಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ, ವೀರಪ್ಪ ಮೊಯಿಲಿ ಸೇರಿದಂತೆ ದೆಹಲಿಯಲ್ಲಿ ಸರ್ಕಾರವನ್ನು ಪ್ರತಿನಿಧಿಸುವ ಕಾನೂನು ತಂಡ ಸಹ ಪಾಲ್ಗೊಂಡಿತ್ತು.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/karnataka-news/all-party-meeting-discussed-about-water-disputes-2451080">ಜಲ ವಿವಾದ: ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಒಯ್ಯಲು ನಿರ್ಧಾರ– ಸಿದ್ದರಾಮಯ್ಯ</a></p>.<p>ನರೇಗಾ ಯೋಜನೆಗೆ ಬಜೆಟ್ನಲ್ಲಿ ಮೂರನೇ ಒಂದು ಭಾಗದಷ್ಟು ಕಡಿತದ ನಂತರವೂ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ₹ 6,366 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/india-news/modi-govt-owes-mgnrega-wages-to-18-states-uts-congress-2450980">ಮೋದಿ ಸರ್ಕಾರ ₹ 6,366 ಕೋಟಿ ನರೇಗಾ ವೇತನ ಬಾಕಿ ಉಳಿಸಿಕೊಂಡಿದೆ: ಖರ್ಗೆ ಆರೋಪ</a></p>.<p>ಉಕ್ರೇನ್ನ ದಕ್ಷಿಣದ ಬಂದರು ನಗರ ಒಡೆಸಾ ಮತ್ತು ಡಾನ್ಯೂಬ್ ನದಿ ತೀರ ಪ್ರದೇಶಗಳಲ್ಲಿರುವ ಪ್ರಮುಖ ಧಾನ್ಯ ಮೂಲಸೌಕರ್ಯಗಳ ರಷ್ಯಾ ಸೇನೆ ಮಂಗಳವಾರ ರಾತ್ರಿ ಡ್ರೋನ್ ದಾಳಿ ನಡೆಸಿದೆ. ಉಕ್ರೇನ್ ಸೇನೆ ಮತ್ತು ಸ್ಥಳೀಯ ಆಡಳಿತ ಈ ಬಗ್ಗೆ ಬುಧವಾರ ಹೇಳಿಕೆ ನೀಡಿವೆ.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/world-news/russia-attacks-grain-facilities-in-ukraine-danube-region-military-2450964">ಉಕ್ರೇನ್ನ ಡಾನ್ಯೂಬ್ ಪ್ರದೇಶದಲ್ಲಿನ ಧಾನ್ಯ ಮೂಲಸೌಕರ್ಯಗಳ ಮೇಲೆ ರಷ್ಯಾ ದಾಳಿ</a></p>.<p>ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಕುಸಿದು ಕನಿಷ್ಠ 17 ಕಾರ್ಮಿಕರು ಮೃತಪಟ್ಟಿರುವ ದುರಂತ ಮಿಜೋರಾಂನ ಸಾಯಿರಂಗ್ ಪ್ರದೇಶದಲ್ಲಿ ಬುಧವಾರ ಸಂಭವಿಸಿದೆ.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/india-news/many-killed-after-under-construction-railway-bridge-collapses-inmizoram-2451033">ಮಿಜೋರಾಂ: ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಕುಸಿದು 17 ಕಾರ್ಮಿಕರು ಸಾವು</a></p>.<p>ಭಾರತದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.</p><p><strong>ಸಂಪೂರ್ಣ ಸುದ್ದಿ ಓದಲು: <a href="https://www.prajavani.net/sports/cricket/icc-test-rankings-r-ashwin-ravindra-jadeja-shubman-gill-reaches-fourth-spot-in-odi-batting-rankings-2451175">ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಶ್ವಿನ್, ಜಡೇಜಗೆ ಅಗ್ರಸ್ಥಾನ</a></strong></p>.<p>ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನ್ವಯ ರೂಪಿಸಿರುವ ಹೊಸ ಪಠ್ಯಕ್ರಮ ಚೌಕಟ್ಟಿನ ಪ್ರಕಾರ ವರ್ಷದಲ್ಲಿ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/india-news/board-exams-twice-a-year-class-11-12-students-to-study-2-languages-moes-new-curriculum-framework-2451122">ವರ್ಷದಲ್ಲಿ ಎರಡು ಬಾರಿ ಬೋರ್ಡ್ ಪರೀಕ್ಷೆಗಳು: ಶಿಕ್ಷಣ ಸಚಿವಾಲಯ</a></p>.<p>ಸದಸ್ಯ ರಾಷ್ಟ್ರಗಳ ಒಮ್ಮತದ ಮೇರೆಗೆ ಬ್ರಿಕ್ಸ್ ವಿಸ್ತರಣೆಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.</p><p><strong>ಸಂಪೂರ್ಣ ಸುದ್ದಿ ಓದಲು: </strong><a href="https://www.prajavani.net/news/world-news/india-supports-consensus-based-expansion-of-brics-pm-modi-2451470">ಬ್ರಿಕ್ಸ್ ವಿಸ್ತರಣೆಗೆ ಭಾರತದ ಬೆಂಬಲ: ಸದಸ್ಯ ರಾಷ್ಟ್ರಗಳ ಒಮ್ಮತ ಕೋರಿದ ಮೋದಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>