ಜೆಡಿಎಸ್ನ ಟಿ.ಎ.ಶರವಣ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿ ಯೋಜನೆಯ ವಿಷಯಗಳನ್ನು ಬಿಟ್ಟು, ಬೇರೆ ವಿಷಯಗಳೇ ಇಲ್ಲ. ಅದೂ ಜಾಹೀರಾತಿಗಷ್ಟೇ ಸೀಮಿತವಾಗಿದೆ ಎಂದು ಹೇಳಿದ್ದು, ಕಾಂಗ್ರೆಸ್ನ ಎಸ್.ರವಿ ಅವರನ್ನು ಕೆರಳಿಸಿತು. ‘ಸುಮ್ಮನೆ ಶರವಣ ಅವರಿಗೆ ಕೇಸರಿ ಶಾಲು ಹಾಕಿ ಬಿಡಿ. ಕಳೆದ ಚುನಾವಣೆಗೂ ಮೊದಲು ಹಿಜಾಬ್, ಹಲಾಲ್, ಪಾಕಿಸ್ತಾನ, ಮುಸ್ಲಿಂ ವಿಷಯಗಳನ್ನೇ ಕೆದಕಿ ಬಿಜೆಪಿ 66 ಸ್ಥಾನಗಳಿಗೆ ಕುಸಿದಿದೆ. ಈಗ ಜೆಡಿಎಸ್ ಅದೇ ಹಾದಿ ಹಿಡಿದಿದೆ. ಹೀಗೆ ಆದರೆ ಮುಂದಿನ ಚುನಾವಣೆಯಲ್ಲಿ ಮಿತ್ರ ಪಕ್ಷಗಳಿಗೆ 35 ಸ್ಥಾನಗಳೂ ಬರುವುದಿಲ್ಲ’ ಎಂದು ಟೀಕಿಸಿದರು.