<p><strong>ಚಾಮರಾಜನಗರ:</strong> ತಾಲ್ಲೂಕಿನ ಬಿಆರ್ಟಿ ಹುಲಿ ಸಂರಕ್ಷಿತ ಅರಣ್ಯದಂಚಿನ ಗ್ರಾಮಗಳಲ್ಲಿ ಹುಲಿ ದಾಳಿಯ ಭೀತಿ ರೈತರನ್ನು ಕಂಗೆಡಿಸಿದೆ. ಬೆಳೆ ಕಟಾವಿಗಾಗಿ ಜಮೀನಿಗೆ ತೆರಳಲೂ ಭಯಪಡುತ್ತಿರುವ ಕೃಷಿಕರಿಗೆ ಅರಣ್ಯ ಇಲಾಖೆಯ ಶಸ್ತ್ರಸಜ್ಜಿತ ಸಿಬ್ಬಂದಿ ಬೆಂಗಾವಲಾಗಿ ನಿಂತು ರಕ್ಷಣೆ ನೀಡುತ್ತಿದ್ದಾರೆ. </p>.<p>ಕಲ್ಪುರ, ಹೆಗ್ಗೋಠಾರ, ಮೇಗಲಹುಂಡಿ, ಹಳೇಪುರ ಇನ್ನಿತರ ಗ್ರಾಮಗಳಲ್ಲಿ ಟೊಮೆಟೊ, ಬಾಳೆ ಸೇರಿ ತೋಟಗಾರಿಕಾ ಬೆಳೆಗಳ ಕಟಾವು ಕಾರ್ಯಕ್ಕಾಗಿ ಸಿಬ್ಭಂದಿ ರೈತರ ನೆರವಿಗೆ ಧಾವಿಸಿದ್ದಾರೆ. ಶಸ್ತ್ರಸಜ್ಜಿತ ಸಿಬ್ಬಂದಿ ಜಮೀನಿನ ಸುತ್ತಲೂ ಭದ್ರತೆಗೆ ನಿಂತಿದ್ದು, ರೈತರು ನಿರಾತಂಕವಾಗಿ ಕಟಾವು ಮಾಡುತ್ತಿದ್ದಾರೆ. </p>.<p>‘ಕಟಾವು ಮಾಡುವ ಹಿಂದಿನ ದಿನ ಮಾಹಿತಿ ನೀಡಿದರೆ ಬೆಳಿಗ್ಗೆ ಕೂಲಿಯಾಳುಗಳು ಬರುವ ವೇಳೆಗೆ, ಹೊಲಗಳಿಗೆ ಬರುವ ಸಿಬ್ಬಂದಿ, ಕಟಾವಾದ ಫಸಲನ್ನು ಮಾರುಕಟ್ಟೆಗೆ ಸಾಗಿಸುವವರೆಗೆ ಜೊತೆಗಿರುತ್ತಾರೆ’ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.</p>.<p><strong>ಭೀತಿಗೆ ಕಾರಣ: </strong>15 ದಿನದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಪುಣಜನೂರು–ಬೇಡಗುಳಿ ಸಂಪರ್ಕ ರಸ್ತೆಯಲ್ಲಿ ಮೂರು ಮರಿಗಳನ್ನು ಬಿಟ್ಟು ತಾಯಿ ಹುಲಿ ನಾಪತ್ತೆಯಾಗಿತ್ತು. ಮರಿಗಳನ್ನು ರಕ್ಷಿಸಿದ್ದ ಅರಣ್ಯಾಧಿಕಾರಿಗಳು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ, ತಾಯಿ ಹುಲಿಗಾಗಿ ಶೋಧ ಆರಂಭಿಸಿದ್ದರು.</p>.<p>ಥರ್ಮಲ್ ಡ್ರೋನ್, ಸಾಕಾನೆ, ಶ್ವಾನದಳ ಸಹಿತ ಸಿಬ್ಬಂದಿ 2 ವಾರಗಳಿಂದ ಶೋಧ ನಡೆಸಿದರೂ ತಾಯಿ ಹುಲಿ ಕಂಡುಬಂದಿರಲಿಲ್ಲ. ಇದು, ಗ್ರಾಮಗಳಲ್ಲಿ ಹುಲಿ ದಾಳಿ ಭೀತಿ ಮೂಡಿಸಿತ್ತು. ಜಮೀನುಗಳಲ್ಲಿ ಹುಲಿಯ ಹೆಜ್ಜೆ ಗುರುತುಗಳನ್ನು ಕಂಡು ರೈತರು ಹೊಲಗಳಿಗೆ ತೆರಳುವುದನ್ನು ನಿಲ್ಲಿಸಿದ್ದರು.</p>.<p>‘ಕಟಾವಾಗದೇ ಕಷ್ಟಪಟ್ಟು ಬೆಳೆದಿದ್ದ ಬೆಳೆ ನಷ್ಟದ ಚಿಂತೆಯೂ ಕಾಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಅರಣ್ಯಾಧಿಕಾರಿಗಳು ಕೃಷಿಕರ ನೆರವಿಗೆ ಬಂದಿದ್ದಾರೆ. ರೈತರೂ ಕೂಲಿಯಾಳುಗಳಿಗೆ ಧೈರ್ಯ ತುಂಬಿ ಕೆಲಸಕ್ಕೆ ಕರೆತರುತ್ತಿದ್ದಾರೆ’ ಎಂದು ಗ್ರಾಮದ ರೈತ ರಾಘವೇಂದ್ರ ತಿಳಿಸಿದರು.</p>.<p><strong>ತಾತ್ಕಾಲಿಕ ಕ್ಯಾಂಪ್:</strong> ನಾಲ್ವರು ಸೋಲಿಗರು ಇರುವ 20 ಸಿಬ್ಬಂದಿಯ ತಂಡ ತಾಯಿ ಹುಲಿಯ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದೆ. ಪೂರಕವಾಗಿ ಕಲ್ಪುರ ಗ್ರಾಮದ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ತಾತ್ಕಾಲಿಕ ಕ್ಯಾಂಪ್ ಹಾಕಲಾಗಿದೆ. </p>.<p>‘ಶ್ವಾನದಳ ನೆರವು ಪಡೆದಿದ್ದು, ಥರ್ಮಲ್ ಡ್ರೋನ್ ಬಳಸಲಾಗಿದೆ. ಬೋನು ಇರಿಸಲಾಗಿದೆ. ಹುಲಿ ಹೆಜ್ಜೆ ಜಾಡು ಗುರುತಿಸುತ್ತಿದ್ದು, ಹುಲಿ ನೆಲೆ ಪತ್ತೆಯಾದರೆ ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಲಿದ್ದೇವೆ’ ಎಂದು ನೇತೃತ್ವ ವಹಿಸಿರುವ ಪುಣಜನೂರು ಎಸಿಎಫ್ ಮಂಜುನಾಥ್ ಮಾಹಿತಿ ನೀಡಿದರು.</p>.<h2>ಒಂದು ಹುಲಿಮರಿ ಸಾವು </h2><p>‘ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಆರೈಕೆಯಲ್ಲಿದ್ದ ಮೂರು ಮರಿಗಳಲ್ಲಿ ಒಂದು ಮೃತಪಟ್ಟಿದೆ. ಅಸ್ವಸ್ಥತೆಯಿಂದ ಬಳಲುತ್ತಿದ್ದ ಮರಿ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಉಳಿದೆರಡು ಆರೋಗ್ಯವಾಗಿವೆ’ ಎಂದು ಎಸಿಎಫ್ ಮಂಜುನಾಥ್ ತಿಳಿಸಿದರು.</p>.<div><blockquote>ರೈತರು ಹೊಲಗಳಿಗೆ ತೆರಳಲೂ ಹೆದರುತ್ತಿದ್ದು. ಬೆಳೆ ಕಟಾವು ವೇಳೆ ರಕ್ಷಣೆ ನೀಡಲಾಗುತ್ತಿದೆ. ಕಾಡುಪ್ರಾಣಿಗಳಿಂದ ಜನರಿಗೆ ರಕ್ಷಣೆ ಕೊಡುವುದೂ ಇಲಾಖೆಯ ಕರ್ತವ್ಯ. </blockquote><span class="attribution">–ಮಂಜುನಾಥ್ ಪುಣಜನೂರು, ಎಸಿಎಫ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ತಾಲ್ಲೂಕಿನ ಬಿಆರ್ಟಿ ಹುಲಿ ಸಂರಕ್ಷಿತ ಅರಣ್ಯದಂಚಿನ ಗ್ರಾಮಗಳಲ್ಲಿ ಹುಲಿ ದಾಳಿಯ ಭೀತಿ ರೈತರನ್ನು ಕಂಗೆಡಿಸಿದೆ. ಬೆಳೆ ಕಟಾವಿಗಾಗಿ ಜಮೀನಿಗೆ ತೆರಳಲೂ ಭಯಪಡುತ್ತಿರುವ ಕೃಷಿಕರಿಗೆ ಅರಣ್ಯ ಇಲಾಖೆಯ ಶಸ್ತ್ರಸಜ್ಜಿತ ಸಿಬ್ಬಂದಿ ಬೆಂಗಾವಲಾಗಿ ನಿಂತು ರಕ್ಷಣೆ ನೀಡುತ್ತಿದ್ದಾರೆ. </p>.<p>ಕಲ್ಪುರ, ಹೆಗ್ಗೋಠಾರ, ಮೇಗಲಹುಂಡಿ, ಹಳೇಪುರ ಇನ್ನಿತರ ಗ್ರಾಮಗಳಲ್ಲಿ ಟೊಮೆಟೊ, ಬಾಳೆ ಸೇರಿ ತೋಟಗಾರಿಕಾ ಬೆಳೆಗಳ ಕಟಾವು ಕಾರ್ಯಕ್ಕಾಗಿ ಸಿಬ್ಭಂದಿ ರೈತರ ನೆರವಿಗೆ ಧಾವಿಸಿದ್ದಾರೆ. ಶಸ್ತ್ರಸಜ್ಜಿತ ಸಿಬ್ಬಂದಿ ಜಮೀನಿನ ಸುತ್ತಲೂ ಭದ್ರತೆಗೆ ನಿಂತಿದ್ದು, ರೈತರು ನಿರಾತಂಕವಾಗಿ ಕಟಾವು ಮಾಡುತ್ತಿದ್ದಾರೆ. </p>.<p>‘ಕಟಾವು ಮಾಡುವ ಹಿಂದಿನ ದಿನ ಮಾಹಿತಿ ನೀಡಿದರೆ ಬೆಳಿಗ್ಗೆ ಕೂಲಿಯಾಳುಗಳು ಬರುವ ವೇಳೆಗೆ, ಹೊಲಗಳಿಗೆ ಬರುವ ಸಿಬ್ಬಂದಿ, ಕಟಾವಾದ ಫಸಲನ್ನು ಮಾರುಕಟ್ಟೆಗೆ ಸಾಗಿಸುವವರೆಗೆ ಜೊತೆಗಿರುತ್ತಾರೆ’ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.</p>.<p><strong>ಭೀತಿಗೆ ಕಾರಣ: </strong>15 ದಿನದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಪುಣಜನೂರು–ಬೇಡಗುಳಿ ಸಂಪರ್ಕ ರಸ್ತೆಯಲ್ಲಿ ಮೂರು ಮರಿಗಳನ್ನು ಬಿಟ್ಟು ತಾಯಿ ಹುಲಿ ನಾಪತ್ತೆಯಾಗಿತ್ತು. ಮರಿಗಳನ್ನು ರಕ್ಷಿಸಿದ್ದ ಅರಣ್ಯಾಧಿಕಾರಿಗಳು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ, ತಾಯಿ ಹುಲಿಗಾಗಿ ಶೋಧ ಆರಂಭಿಸಿದ್ದರು.</p>.<p>ಥರ್ಮಲ್ ಡ್ರೋನ್, ಸಾಕಾನೆ, ಶ್ವಾನದಳ ಸಹಿತ ಸಿಬ್ಬಂದಿ 2 ವಾರಗಳಿಂದ ಶೋಧ ನಡೆಸಿದರೂ ತಾಯಿ ಹುಲಿ ಕಂಡುಬಂದಿರಲಿಲ್ಲ. ಇದು, ಗ್ರಾಮಗಳಲ್ಲಿ ಹುಲಿ ದಾಳಿ ಭೀತಿ ಮೂಡಿಸಿತ್ತು. ಜಮೀನುಗಳಲ್ಲಿ ಹುಲಿಯ ಹೆಜ್ಜೆ ಗುರುತುಗಳನ್ನು ಕಂಡು ರೈತರು ಹೊಲಗಳಿಗೆ ತೆರಳುವುದನ್ನು ನಿಲ್ಲಿಸಿದ್ದರು.</p>.<p>‘ಕಟಾವಾಗದೇ ಕಷ್ಟಪಟ್ಟು ಬೆಳೆದಿದ್ದ ಬೆಳೆ ನಷ್ಟದ ಚಿಂತೆಯೂ ಕಾಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಅರಣ್ಯಾಧಿಕಾರಿಗಳು ಕೃಷಿಕರ ನೆರವಿಗೆ ಬಂದಿದ್ದಾರೆ. ರೈತರೂ ಕೂಲಿಯಾಳುಗಳಿಗೆ ಧೈರ್ಯ ತುಂಬಿ ಕೆಲಸಕ್ಕೆ ಕರೆತರುತ್ತಿದ್ದಾರೆ’ ಎಂದು ಗ್ರಾಮದ ರೈತ ರಾಘವೇಂದ್ರ ತಿಳಿಸಿದರು.</p>.<p><strong>ತಾತ್ಕಾಲಿಕ ಕ್ಯಾಂಪ್:</strong> ನಾಲ್ವರು ಸೋಲಿಗರು ಇರುವ 20 ಸಿಬ್ಬಂದಿಯ ತಂಡ ತಾಯಿ ಹುಲಿಯ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದೆ. ಪೂರಕವಾಗಿ ಕಲ್ಪುರ ಗ್ರಾಮದ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ತಾತ್ಕಾಲಿಕ ಕ್ಯಾಂಪ್ ಹಾಕಲಾಗಿದೆ. </p>.<p>‘ಶ್ವಾನದಳ ನೆರವು ಪಡೆದಿದ್ದು, ಥರ್ಮಲ್ ಡ್ರೋನ್ ಬಳಸಲಾಗಿದೆ. ಬೋನು ಇರಿಸಲಾಗಿದೆ. ಹುಲಿ ಹೆಜ್ಜೆ ಜಾಡು ಗುರುತಿಸುತ್ತಿದ್ದು, ಹುಲಿ ನೆಲೆ ಪತ್ತೆಯಾದರೆ ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಲಿದ್ದೇವೆ’ ಎಂದು ನೇತೃತ್ವ ವಹಿಸಿರುವ ಪುಣಜನೂರು ಎಸಿಎಫ್ ಮಂಜುನಾಥ್ ಮಾಹಿತಿ ನೀಡಿದರು.</p>.<h2>ಒಂದು ಹುಲಿಮರಿ ಸಾವು </h2><p>‘ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಆರೈಕೆಯಲ್ಲಿದ್ದ ಮೂರು ಮರಿಗಳಲ್ಲಿ ಒಂದು ಮೃತಪಟ್ಟಿದೆ. ಅಸ್ವಸ್ಥತೆಯಿಂದ ಬಳಲುತ್ತಿದ್ದ ಮರಿ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಉಳಿದೆರಡು ಆರೋಗ್ಯವಾಗಿವೆ’ ಎಂದು ಎಸಿಎಫ್ ಮಂಜುನಾಥ್ ತಿಳಿಸಿದರು.</p>.<div><blockquote>ರೈತರು ಹೊಲಗಳಿಗೆ ತೆರಳಲೂ ಹೆದರುತ್ತಿದ್ದು. ಬೆಳೆ ಕಟಾವು ವೇಳೆ ರಕ್ಷಣೆ ನೀಡಲಾಗುತ್ತಿದೆ. ಕಾಡುಪ್ರಾಣಿಗಳಿಂದ ಜನರಿಗೆ ರಕ್ಷಣೆ ಕೊಡುವುದೂ ಇಲಾಖೆಯ ಕರ್ತವ್ಯ. </blockquote><span class="attribution">–ಮಂಜುನಾಥ್ ಪುಣಜನೂರು, ಎಸಿಎಫ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>