‘ಎನ್ಜಿಒ ಪರಿವಾರ್’ ಎಂಬ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಸಚಿನ್ ಅವರ ‘ತೆಂಡೂಲ್ಕರ್ ಫೌಂಡೇಷನ್‘ ಕೈಜೋಡಿಸಿದೆ.‘ಎನ್ಜಿಒ ಪರಿವಾರ‘ ಸಂಸ್ಥೆಯು ಮಧ್ಯಪ್ರದೇಶದ ಸೆಹೊರ್ ಜಿಲ್ಲೆಯ ಕುಗ್ರಾಮಗಳಲ್ಲಿ ‘ಸೇವಾ ಕುಟೀರ’ಗಳನ್ನು ನಿರ್ಮಿಸಿದೆ. ಜಿಲ್ಲೆಯ ಸೇವಾನಿಯಾ, ಬೀಲ್ಪಟ್ಟಿ, ಖಾಪಾ, ನಯಾಪುರ ಹಾಗೂ ಜಮುನ್ಜೀಲ್ ಗ್ರಾಮಗಳ ಮಕ್ಕಳು ತೆಂಡೂಲ್ಕರ್ ಫೌಂಡೇಶನ್ ನೆರವಿನಿಂದ ಪೌಷ್ಟಿಕ ಆಹಾರ ಹಾಗೂ ಶಿಕ್ಷಣದ ಸೌಲಭ್ಯ ಪಡೆಯುತ್ತಿದ್ದಾರೆ. ಇಲ್ಲಿಯ ಬಹುತೇಕ ಮಕ್ಕಳು ಬರೇಲಾ ಭಿಲ್ ಮತ್ತು ಗೊಂಡ್ ಸಮುದಾಯಕ್ಕೆ ಸೇರಿದವರು.