ರಾಜಕಾಲುವೆಯಲ್ಲಿ ಹರಿಯುವ ನೀರು ಮಹಾನಗರಿಯ ಕೆಲ ಬಡಾವಣೆಯ ಜನರ ನೆಮ್ಮದಿ ಕಸಿಯುತ್ತಿದೆ. ಹೂಳು ತೆಗೆಯುವ ಕಾರ್ಯ ಸರಿಯಾಗಿ ಆಗದಿರುವುದು ಹಾಗೂ ತಡೆಗೋಡೆಯನ್ನು ಎತ್ತರಿಸಿ ಕಟ್ಟದಿರುವುದರಿಂದ ತಗ್ಗುಪ್ರದೇಶದ ಮನೆಗಳಿಗೇ ನೀರು ನುಗ್ಗುತ್ತದೆ. ಶೌಚಾಲಯದಲ್ಲೂ ನೀರು ಕಟ್ಟಿಕೊಳ್ಳುತ್ತದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಬದುಕು ಸಾಗಿಸುವುದು ಅನಿವಾರ್ಯವಾಗಿದೆ.ಇದು ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ 198ರ ನಿವಾಸಿಗಳ ವ್ಯಥೆ.