<p>ದೀಪ ಬೆಳಗಿಸುವುದರಿಂದ ಸುಖ, ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ. ಅದರಲ್ಲೂ ಮಂಗಳವಾರದಂದು ಸಾಸಿವೆ ಎಣ್ಣೆಯ ದೀಪದಲ್ಲಿ ಲವಂಗ ಹಾಕಿ ಆಂಜನೇಯನನ್ನು ಆರಾಧಿಸುವುದರಿಂದ ಭಯದಿಂದ ಮುಕ್ತಿ ಪಡೆಯಬಹುದು ಎನ್ನುತ್ತೆ ಜ್ಯೋತಿಷ. ಆಂಜನೇಯನ್ನು ಪೂಜಿಸುವುದರಿಂದ ಸಿಗುವ ಲಾಭಗಳೇನು ಎಂಬ ಮಾಹಿತಿ ಇಲ್ಲಿದೆ. </p><p>ಆಂಜನೇಯ ಕಲಿಯುಗದ ದೇವರು ಎಂದು ಕರೆಯಲಾಗುತ್ತದೆ. ಈತನನ್ನು ಸಂಕಟ ವಿಮೋಚಕ ಎಂದೂ ಕರೆಯುತ್ತಾರೆ. ಆಂಜನೇಯ ತನ್ನ ಭಕ್ತರ ತೊಂದರೆ, ತೊಡಕುಗಳನ್ನು ದೂರ ಮಾಡುತ್ತಾನೆ. ವಾರದ ಮಂಗಳವಾರ ಮತ್ತು ಶನಿವಾರ ಆಂಜನೇಯ ಸ್ವಾಮಿಗೆ ಸಮರ್ಪಿಸಲಾಗಿದೆ.</p><p><strong>ಈ ವಿಧಾನಗಳಿಂದ ಹನುಮಂತನನ್ನು ಪೂಜಿಸಿದರೆ, ನಿಮಗೆ ಸಾಕಷ್ಟು ಶುಭಫಲ ದೊರೆಯುತ್ತದೆ.</strong></p><p>ನಿಮ್ಮ ವ್ಯವಹಾರವು ನಿಧಾನವಾಗಿದ್ದರೆ, ಅನೇಕ ಪ್ರಯತ್ನಗಳ ನಂತರವೂ ನಿರಾಶೆಗೊಂಡಿದ್ದರೆ, ಮಂಗಳವಾರದಂದು ಆಂಜನೇಯನ ದೇವಸ್ಥಾನಕ್ಕೆ ಹೋಗಿ ದೇವರ ಮುಂದೆ ಸುಂದರಕಾಂಡವನ್ನು ಪಠಿಸುವುದರಿಂದ ಅನುಕೂಲವಾಗಲಿದೆ ಎಂದು ಜ್ಯೋತಿಷ ತಿಳಿಸುತ್ತದೆ. ಇದನ್ನು ನಿರಂತರ 11 ಮಂಗಳವಾರದವರೆಗೆ ಮಾಡಬೇಕು ಎಂದು ಜ್ಯೋತಿಷದಲ್ಲಿ ತಿಳಿಸಿದೆ. ಹಾಗೆ ಮಾಡುವುದರಿಂದ ನಿಮ್ಮ ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ. </p><p>ಮಂಗಳವಾರದಂದು ಹನುಮಂತನಿಗೆ ಸಿಂಧೂರ ಇಡುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಿಂದ ಮಂಗಳನ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ. ಇದರೊಂದಿಗೆ ಹಣ ಹಾಗೂ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಮಂಗಳವಾರದಂದು ಸಾಸಿವೆ ಎಣ್ಣೆಯಲ್ಲಿ ಸಿಂಧೂರವನ್ನು ಬೆರೆಸಿ ಮತ್ತು ಚೋಳವನ್ನು ಆಂಜನೇಯನಿಗೆ ಅರ್ಪಿಸಿ ಎಂದು ಜ್ಯೋತಿಷ ಹೇಳುತ್ತದೆ.</p><p><strong>ಧಾರ್ಮಿಕ ನಂಬಿಕೆಯ</strong> </p><p>ಮಂಗಳವಾರದಂದು ಸಾಸಿವೆ ಎಣ್ಣೆಯ ದೀಪದಲ್ಲಿ ಲವಂಗವನ್ನು ಹಾಕಿ ಹನುಮಂತನನ್ನು ಪೂಜಿಸುವುದರಿಂದ ಭಯದಿಂದ ಮುಕ್ತಿ ಸಿಗುತ್ತದೆ. ಮನಸ್ಸು ಶಾಂತವಾಗುತ್ತದೆ, ಉದ್ವೇಗ ದೂರವಾಗುತ್ತದೆ ಎಂಬ ನಂಬಿಕೆ ಇದೆ. </p><p>ನಿಮಗೆ ಯಾವುದೇ ರೀತಿಯ ಭಯವಿದ್ದರೆ ರಾತ್ರಿ ಮಲಗುವ ಮುನ್ನ "ಓಂ ಹನುಮಂತೇ ನಮಃ" ಎಂದು 108 ಬಾರಿ ಜಪಿಸಿ. ಹನುಮಂತನಿಗೆ ಸಂಬಂಧಿಸಿದ ಈ ಶಕ್ತಿಯುತ ಮಂತ್ರವು ದುಷ್ಟ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ಜ್ಯೋತಿಷ ಹೇಳುತ್ತದೆ.</p><p>ನೀವು ವ್ಯಾಪಾರ ಅಥವಾ ಉದ್ಯೋಗದಲ್ಲಿ ನಿರಂತರ ಸಮಸ್ಯೆಗಳನ್ನುಎದುರಿಸುತ್ತಿದ್ದರೆ, ಮನೆಯಲ್ಲಿ ಹಳದಿ ಬಟ್ಟೆಗಳನ್ನು ಧರಿಸಿರುವ ಹನುಮಂತನ ಚಿತ್ರವನ್ನುಇರಿಸಿ. ಈ ಫೋಟೋಗಳನ್ನು ನಿಮ್ಮ ಕೆಲಸದ ಸ್ಥಳದಲ್ಲಿ ಕೂಡ ಹಾಕಬಹುದು. ಹಳದಿ ಸಿಂಧೂರವು ಹನುಮಂತನಿಗೆ ತುಂಬಾ ಪ್ರಿಯವಾಗಿದೆ ಮತ್ತು ಇದು ಸಕಾರಾತ್ಮಕತೆಯನ್ನು ತರುತ್ತದೆ. ಅದೇಸಮಯದಲ್ಲಿ,ನಿಮ್ಮ ಮನಸ್ಸು ಕೆಲಸದ ಕಡೆಗೆ ಕೇಂದ್ರೀಕೃತವಾಗಿರುತ್ತದೆ ಎಂದು ಜ್ಯೋತಿಷ ತಿಳಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೀಪ ಬೆಳಗಿಸುವುದರಿಂದ ಸುಖ, ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ. ಅದರಲ್ಲೂ ಮಂಗಳವಾರದಂದು ಸಾಸಿವೆ ಎಣ್ಣೆಯ ದೀಪದಲ್ಲಿ ಲವಂಗ ಹಾಕಿ ಆಂಜನೇಯನನ್ನು ಆರಾಧಿಸುವುದರಿಂದ ಭಯದಿಂದ ಮುಕ್ತಿ ಪಡೆಯಬಹುದು ಎನ್ನುತ್ತೆ ಜ್ಯೋತಿಷ. ಆಂಜನೇಯನ್ನು ಪೂಜಿಸುವುದರಿಂದ ಸಿಗುವ ಲಾಭಗಳೇನು ಎಂಬ ಮಾಹಿತಿ ಇಲ್ಲಿದೆ. </p><p>ಆಂಜನೇಯ ಕಲಿಯುಗದ ದೇವರು ಎಂದು ಕರೆಯಲಾಗುತ್ತದೆ. ಈತನನ್ನು ಸಂಕಟ ವಿಮೋಚಕ ಎಂದೂ ಕರೆಯುತ್ತಾರೆ. ಆಂಜನೇಯ ತನ್ನ ಭಕ್ತರ ತೊಂದರೆ, ತೊಡಕುಗಳನ್ನು ದೂರ ಮಾಡುತ್ತಾನೆ. ವಾರದ ಮಂಗಳವಾರ ಮತ್ತು ಶನಿವಾರ ಆಂಜನೇಯ ಸ್ವಾಮಿಗೆ ಸಮರ್ಪಿಸಲಾಗಿದೆ.</p><p><strong>ಈ ವಿಧಾನಗಳಿಂದ ಹನುಮಂತನನ್ನು ಪೂಜಿಸಿದರೆ, ನಿಮಗೆ ಸಾಕಷ್ಟು ಶುಭಫಲ ದೊರೆಯುತ್ತದೆ.</strong></p><p>ನಿಮ್ಮ ವ್ಯವಹಾರವು ನಿಧಾನವಾಗಿದ್ದರೆ, ಅನೇಕ ಪ್ರಯತ್ನಗಳ ನಂತರವೂ ನಿರಾಶೆಗೊಂಡಿದ್ದರೆ, ಮಂಗಳವಾರದಂದು ಆಂಜನೇಯನ ದೇವಸ್ಥಾನಕ್ಕೆ ಹೋಗಿ ದೇವರ ಮುಂದೆ ಸುಂದರಕಾಂಡವನ್ನು ಪಠಿಸುವುದರಿಂದ ಅನುಕೂಲವಾಗಲಿದೆ ಎಂದು ಜ್ಯೋತಿಷ ತಿಳಿಸುತ್ತದೆ. ಇದನ್ನು ನಿರಂತರ 11 ಮಂಗಳವಾರದವರೆಗೆ ಮಾಡಬೇಕು ಎಂದು ಜ್ಯೋತಿಷದಲ್ಲಿ ತಿಳಿಸಿದೆ. ಹಾಗೆ ಮಾಡುವುದರಿಂದ ನಿಮ್ಮ ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ. </p><p>ಮಂಗಳವಾರದಂದು ಹನುಮಂತನಿಗೆ ಸಿಂಧೂರ ಇಡುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಿಂದ ಮಂಗಳನ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ. ಇದರೊಂದಿಗೆ ಹಣ ಹಾಗೂ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಮಂಗಳವಾರದಂದು ಸಾಸಿವೆ ಎಣ್ಣೆಯಲ್ಲಿ ಸಿಂಧೂರವನ್ನು ಬೆರೆಸಿ ಮತ್ತು ಚೋಳವನ್ನು ಆಂಜನೇಯನಿಗೆ ಅರ್ಪಿಸಿ ಎಂದು ಜ್ಯೋತಿಷ ಹೇಳುತ್ತದೆ.</p><p><strong>ಧಾರ್ಮಿಕ ನಂಬಿಕೆಯ</strong> </p><p>ಮಂಗಳವಾರದಂದು ಸಾಸಿವೆ ಎಣ್ಣೆಯ ದೀಪದಲ್ಲಿ ಲವಂಗವನ್ನು ಹಾಕಿ ಹನುಮಂತನನ್ನು ಪೂಜಿಸುವುದರಿಂದ ಭಯದಿಂದ ಮುಕ್ತಿ ಸಿಗುತ್ತದೆ. ಮನಸ್ಸು ಶಾಂತವಾಗುತ್ತದೆ, ಉದ್ವೇಗ ದೂರವಾಗುತ್ತದೆ ಎಂಬ ನಂಬಿಕೆ ಇದೆ. </p><p>ನಿಮಗೆ ಯಾವುದೇ ರೀತಿಯ ಭಯವಿದ್ದರೆ ರಾತ್ರಿ ಮಲಗುವ ಮುನ್ನ "ಓಂ ಹನುಮಂತೇ ನಮಃ" ಎಂದು 108 ಬಾರಿ ಜಪಿಸಿ. ಹನುಮಂತನಿಗೆ ಸಂಬಂಧಿಸಿದ ಈ ಶಕ್ತಿಯುತ ಮಂತ್ರವು ದುಷ್ಟ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ಜ್ಯೋತಿಷ ಹೇಳುತ್ತದೆ.</p><p>ನೀವು ವ್ಯಾಪಾರ ಅಥವಾ ಉದ್ಯೋಗದಲ್ಲಿ ನಿರಂತರ ಸಮಸ್ಯೆಗಳನ್ನುಎದುರಿಸುತ್ತಿದ್ದರೆ, ಮನೆಯಲ್ಲಿ ಹಳದಿ ಬಟ್ಟೆಗಳನ್ನು ಧರಿಸಿರುವ ಹನುಮಂತನ ಚಿತ್ರವನ್ನುಇರಿಸಿ. ಈ ಫೋಟೋಗಳನ್ನು ನಿಮ್ಮ ಕೆಲಸದ ಸ್ಥಳದಲ್ಲಿ ಕೂಡ ಹಾಕಬಹುದು. ಹಳದಿ ಸಿಂಧೂರವು ಹನುಮಂತನಿಗೆ ತುಂಬಾ ಪ್ರಿಯವಾಗಿದೆ ಮತ್ತು ಇದು ಸಕಾರಾತ್ಮಕತೆಯನ್ನು ತರುತ್ತದೆ. ಅದೇಸಮಯದಲ್ಲಿ,ನಿಮ್ಮ ಮನಸ್ಸು ಕೆಲಸದ ಕಡೆಗೆ ಕೇಂದ್ರೀಕೃತವಾಗಿರುತ್ತದೆ ಎಂದು ಜ್ಯೋತಿಷ ತಿಳಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>