ಧಾರವಾಡದಲ್ಲಿ ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು, ಉದ್ಯಮಗಳ ನೌಕರರು, ಎಲ್ಲರೂ ವಾರದಲ್ಲಿ ಒಂದು ದಿನ ಖಾದಿ ಉಡುಪು ತೊಡುವಂತೆ ನಿರ್ದೇಶನ ನೀಡಬೇಕು. ಖಾದಿ ಉತ್ಪಾದನೆಗೆ ಆಸಕ್ತಿ ತೋರುವಂತೆ ಮಾಡಬೇಕು. ನಶಿಸುವ ಹಂತದಲ್ಲಿರುವ ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.