<p><strong>ಗದಗ</strong>: ‘ದೇವರು ಎಂಬುದು ಊಹಾತ್ಮಕ ನಂಬಿಕೆ. ಅದು ಸತ್ಯ ಅಲ್ಲ. ಹಾಗಾಗಿ, ಮನೆಯಲ್ಲಿದ್ದ ಹುಲಿಗೆಮ್ಮ, ಯಲ್ಲಮ್ಮ ಸೇರಿದಂತೆ ಹಲವು ದೇವರ ಫೋಟೊಗಳನ್ನು ಹೊರಗೆ ಹಾಕಿದ್ದೇವೆ. ಅರಿವಿನ ಕೇಂದ್ರವಾದ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಮನೆಯೊಳಗೆ ಪ್ರತಿಷ್ಠಾಪಿಸಿ, ಜ್ಞಾನದ ಬೆಳಕಿನಲ್ಲಿ ಮುನ್ನಡೆಯುವ ಸಂಕಲ್ಪ ಮಾಡಿದ್ದೇವೆ...’</p><p>ಹೀಗೆ ಹೇಳಿದ್ದು ಗದುಗಿನ ಅಂಬೇಡ್ಕರ್ ವಿಚಾರವಾದಿ ಶರೀಫ್ ಬಿಳೆಯಲಿ ದಂಪತಿ.</p><p>‘ಹೆಣ್ಣುಮಕ್ಕಳಿಗೆ ಸಮಾನತೆ ನೀಡದ ಮನುಸ್ಮೃತಿಯನ್ನು ಡಾ. ಬಿ.ಆರ್.ಅಂಬೇಡ್ಕರ್ ಸುಟ್ಟುಹಾಕಿದರು. ಅದೇ ದಿನದಂದು (ಡಿ.25) ನಾವು ಮನೆಯಲ್ಲಿನ ದೇವರ ಫೋಟೊಗಳನ್ನು ಹೊರಹಾಕಿದ್ದೇವೆ. ಇದಕ್ಕೆ ಪ್ರಗತಿಪರ ಚಿಂತಕರು, ಸಮಾನಮನಸ್ಕ ಗೆಳೆಯರು ಸಹಕಾರ ನೀಡಿದ್ದಾರೆ’ ಎಂದು ಶರೀಫ್ ಹೇಳಿದರು.</p><p>‘ದೇವರಿಂದ ವೃತಾ ಖರ್ಚು. ನಮಗೆ ಶಿಕ್ಷಣ, ಅರಿವು, ಬಟ್ಟೆ ಮುಖ್ಯ. ನಮಗೆ ಈ ಅರಿವು ನೀಡಿದ ಜ್ಞಾನಿಗಳ ಹಾದಿಯಲ್ಲಿ ನಡೆಯುವ ನಿರ್ಧಾರ ಮಾಡಿದ್ದೇವೆ’ ಎಂದರು.</p><p>ಶರೀಫ್ ಪತ್ನಿ ಗಾಯತ್ರಿ ಮಾತನಾಡಿ, ‘ದೇವರು ಅಂದರೆ ಬಂಧನ. ಮೂಢನಂಬಿಕೆಗಳಿಂದ ಬದಲಾವಣೆ ಅಸಾಧ್ಯ. ಮನುಸ್ಮೃತಿ ಸುಟ್ಟ ದಿನದಂದು ದೇವರನ್ನು ಹೊರಗಿಟ್ಟಿದ್ದೇವೆ. ಮನಸ್ಸು ನಿರಾಳವಾಗಿದೆ’ ಎಂದರು.</p><p>ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಮಾತನಾಡಿ, ‘ವೈದಿಕಶಾಹಿ ಈ ಸಮಾಜವನ್ನು ನಿರಂತರವಾಗಿ ಕತ್ತಲಲ್ಲಿ ಇಡುವ ಪ್ರಯತ್ನ ಮಾಡುತ್ತ ಬಂದಿದೆ. ಆ ಕತ್ತಲನ್ನು ದಾಟಿ ಬರುವ ಪ್ರಯತ್ನವನ್ನು ಅನೇಕ ವಿಚಾರವಂತರು ಮಾಡಿದ್ದಾರೆ. ಅದರಂತೆ, ಶರೀಫ್ ದಂಪತಿ ದೇವರು ಎಂಬ ನಂಬಿಕೆಗಳನ್ನು ಕಳಚಿಕೊಂಡು ಬೆಳಕಿನತ್ತ ಬರುವ ತೀರ್ಮಾನ ಮಾಡಿರುವುದು ಉತ್ತಮ ವಿಚಾರ’ ಎಂದರು.</p><p>‘ಈಗ ದೇವಸ್ಥಾನದಲ್ಲಿ ದೇವರ ಬಳಿ ಹೋಗಲು ದರಪಟ್ಟಿ ಇದೆ. ದೇವರು, ಧರ್ಮ ಎಂಬುದು ಜನರನ್ನು ಆರ್ಥಿಕವಾಗಿ ಶೋಷಣೆ ಮಾಡುವಂತಹ ವಿಧಾನ. ಆ ಮೂಲಕವಾಗಿ ಪುರೋಹಿತಶಾಹಿ ವರ್ಗ ಸುಭೀಕ್ಷವಾಗಿದೆ. ಆರ್ಥಿಕವಾಗಿ ಸದೃಢವಾಗಿದೆ. ಈ ದೇಶದಲ್ಲಿ 33 ಕೋಟಿ ದೇವರುಗಳಿವೆ ಎನ್ನುತ್ತಾರೆ. ಅಷ್ಟು ದೇವರಿಗಳಿದ್ದರೂ ಈ ದೇಶದ ಜನರ ಹಸಿವು ಹೋಗಿಲ್ಲ. ಜನ ಸಂಕಷ್ಟದಲ್ಲಿದ್ದಾರೆ. ರೋಗ ರುಜಿನಗಳಿಂದ ಬಳಲುತ್ತಿದ್ದಾರೆ. 33 ಕೋಟಿ ದೇವರುಗಳಿಗಿಂತ ನಮಗೆ ಆರೋಗ್ಯ ಕಾಪಾಡಿಕೊಳ್ಳಲು ಆಸ್ಪತ್ರೆಗಳು ಬೇಕು. ಹಸಿವಿನಿಂದ ದೂರಾಗಲು ಅನ್ನ ಬೇಕು. ಆ ನಿಟ್ಟಿನಲ್ಲಿ ಶರೀಫ್ ದಂಪತಿ ಬುದ್ಧ, ಬಸವ, ಅಂಬೇಡ್ಕರ್ ದಾರಿಯನ್ನು ಹಿಡಿದ್ದಾರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ</strong>: ‘ದೇವರು ಎಂಬುದು ಊಹಾತ್ಮಕ ನಂಬಿಕೆ. ಅದು ಸತ್ಯ ಅಲ್ಲ. ಹಾಗಾಗಿ, ಮನೆಯಲ್ಲಿದ್ದ ಹುಲಿಗೆಮ್ಮ, ಯಲ್ಲಮ್ಮ ಸೇರಿದಂತೆ ಹಲವು ದೇವರ ಫೋಟೊಗಳನ್ನು ಹೊರಗೆ ಹಾಕಿದ್ದೇವೆ. ಅರಿವಿನ ಕೇಂದ್ರವಾದ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಮನೆಯೊಳಗೆ ಪ್ರತಿಷ್ಠಾಪಿಸಿ, ಜ್ಞಾನದ ಬೆಳಕಿನಲ್ಲಿ ಮುನ್ನಡೆಯುವ ಸಂಕಲ್ಪ ಮಾಡಿದ್ದೇವೆ...’</p><p>ಹೀಗೆ ಹೇಳಿದ್ದು ಗದುಗಿನ ಅಂಬೇಡ್ಕರ್ ವಿಚಾರವಾದಿ ಶರೀಫ್ ಬಿಳೆಯಲಿ ದಂಪತಿ.</p><p>‘ಹೆಣ್ಣುಮಕ್ಕಳಿಗೆ ಸಮಾನತೆ ನೀಡದ ಮನುಸ್ಮೃತಿಯನ್ನು ಡಾ. ಬಿ.ಆರ್.ಅಂಬೇಡ್ಕರ್ ಸುಟ್ಟುಹಾಕಿದರು. ಅದೇ ದಿನದಂದು (ಡಿ.25) ನಾವು ಮನೆಯಲ್ಲಿನ ದೇವರ ಫೋಟೊಗಳನ್ನು ಹೊರಹಾಕಿದ್ದೇವೆ. ಇದಕ್ಕೆ ಪ್ರಗತಿಪರ ಚಿಂತಕರು, ಸಮಾನಮನಸ್ಕ ಗೆಳೆಯರು ಸಹಕಾರ ನೀಡಿದ್ದಾರೆ’ ಎಂದು ಶರೀಫ್ ಹೇಳಿದರು.</p><p>‘ದೇವರಿಂದ ವೃತಾ ಖರ್ಚು. ನಮಗೆ ಶಿಕ್ಷಣ, ಅರಿವು, ಬಟ್ಟೆ ಮುಖ್ಯ. ನಮಗೆ ಈ ಅರಿವು ನೀಡಿದ ಜ್ಞಾನಿಗಳ ಹಾದಿಯಲ್ಲಿ ನಡೆಯುವ ನಿರ್ಧಾರ ಮಾಡಿದ್ದೇವೆ’ ಎಂದರು.</p><p>ಶರೀಫ್ ಪತ್ನಿ ಗಾಯತ್ರಿ ಮಾತನಾಡಿ, ‘ದೇವರು ಅಂದರೆ ಬಂಧನ. ಮೂಢನಂಬಿಕೆಗಳಿಂದ ಬದಲಾವಣೆ ಅಸಾಧ್ಯ. ಮನುಸ್ಮೃತಿ ಸುಟ್ಟ ದಿನದಂದು ದೇವರನ್ನು ಹೊರಗಿಟ್ಟಿದ್ದೇವೆ. ಮನಸ್ಸು ನಿರಾಳವಾಗಿದೆ’ ಎಂದರು.</p><p>ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಮಾತನಾಡಿ, ‘ವೈದಿಕಶಾಹಿ ಈ ಸಮಾಜವನ್ನು ನಿರಂತರವಾಗಿ ಕತ್ತಲಲ್ಲಿ ಇಡುವ ಪ್ರಯತ್ನ ಮಾಡುತ್ತ ಬಂದಿದೆ. ಆ ಕತ್ತಲನ್ನು ದಾಟಿ ಬರುವ ಪ್ರಯತ್ನವನ್ನು ಅನೇಕ ವಿಚಾರವಂತರು ಮಾಡಿದ್ದಾರೆ. ಅದರಂತೆ, ಶರೀಫ್ ದಂಪತಿ ದೇವರು ಎಂಬ ನಂಬಿಕೆಗಳನ್ನು ಕಳಚಿಕೊಂಡು ಬೆಳಕಿನತ್ತ ಬರುವ ತೀರ್ಮಾನ ಮಾಡಿರುವುದು ಉತ್ತಮ ವಿಚಾರ’ ಎಂದರು.</p><p>‘ಈಗ ದೇವಸ್ಥಾನದಲ್ಲಿ ದೇವರ ಬಳಿ ಹೋಗಲು ದರಪಟ್ಟಿ ಇದೆ. ದೇವರು, ಧರ್ಮ ಎಂಬುದು ಜನರನ್ನು ಆರ್ಥಿಕವಾಗಿ ಶೋಷಣೆ ಮಾಡುವಂತಹ ವಿಧಾನ. ಆ ಮೂಲಕವಾಗಿ ಪುರೋಹಿತಶಾಹಿ ವರ್ಗ ಸುಭೀಕ್ಷವಾಗಿದೆ. ಆರ್ಥಿಕವಾಗಿ ಸದೃಢವಾಗಿದೆ. ಈ ದೇಶದಲ್ಲಿ 33 ಕೋಟಿ ದೇವರುಗಳಿವೆ ಎನ್ನುತ್ತಾರೆ. ಅಷ್ಟು ದೇವರಿಗಳಿದ್ದರೂ ಈ ದೇಶದ ಜನರ ಹಸಿವು ಹೋಗಿಲ್ಲ. ಜನ ಸಂಕಷ್ಟದಲ್ಲಿದ್ದಾರೆ. ರೋಗ ರುಜಿನಗಳಿಂದ ಬಳಲುತ್ತಿದ್ದಾರೆ. 33 ಕೋಟಿ ದೇವರುಗಳಿಗಿಂತ ನಮಗೆ ಆರೋಗ್ಯ ಕಾಪಾಡಿಕೊಳ್ಳಲು ಆಸ್ಪತ್ರೆಗಳು ಬೇಕು. ಹಸಿವಿನಿಂದ ದೂರಾಗಲು ಅನ್ನ ಬೇಕು. ಆ ನಿಟ್ಟಿನಲ್ಲಿ ಶರೀಫ್ ದಂಪತಿ ಬುದ್ಧ, ಬಸವ, ಅಂಬೇಡ್ಕರ್ ದಾರಿಯನ್ನು ಹಿಡಿದ್ದಾರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>