ಚಿಕ್ಕಮಗಳೂರು: ‘ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದಲ್ಲಿ ಸ್ಪರ್ಧಿಸಲು ಭವಾನಿ ಹೊರತು ಅತ್ಯುತ್ತಮ ಅಭ್ಯರ್ಥಿ ಬೇರಾರೂ ಇಲ್ಲ, ಬಿಜೆಪಿಯಿಂದ ಕಣಕ್ಕಿಳಿಯುವಂತೆ ಅವರನ್ನು ಆಹ್ವಾನಿಸುವ ಮನಸ್ಸಿತ್ತು. ಆದರೆ, ಭವಾನಿ ಅಕ್ಕ ಮತ್ತು ಎಚ್.ಡಿ.ರೇವಣ್ಣ ನಡುವೆ ಜಗಳ ಹಚ್ಚಬಾರದು ಎಂದು ಹೇಳಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಚಾಯಿಸಿದರು.