<p><strong>ಹಳೇಬೀಡು: </strong>ಐತಿಹಾಸಿಕ ಮಹತ್ವ ಹೊಂದಿರುವ ಹಳೇಬೀಡಿನ ದ್ವಾರಸಮುದ್ರ ಕೆರೆ ಶುಕ್ರವಾರ ಮಧ್ಯರಾತ್ರಿ ಕೋಡಿ ಬಿದ್ದಿದ್ದು ಜನರಲ್ಲಿ ಸಂಭ್ರಮ ಕಂಡು ಬಂತು.</p>.<p>ಹಾಸನ ಜಿಲ್ಲೆಯಲ್ಲಿಯೇ ದ್ವಾರಸಮುದ್ರ ಕೆರೆ ದೊಡ್ಡದಾಗಿದೆ. ಅಲ್ಲದೆ ಹತ್ತಾರು ಕಿ.ಮೀ. ದೂರದವರೆಗೂ ಅಂತರ್ಜಲ ವೃದ್ಧಿಸುತ್ತಿದೆ. ಹೀಗಾಗಿ ದ್ವಾರಸಮುದ್ರ ಕೆರೆ ಭರ್ತಿಯಾಗಿರುವುದರಿಂದ ಸುತ್ತಮುತ್ತಲಿನ ಊರಿನ ಜನರಲ್ಲಿಯೂ ಸಂತಸ ಕಂಡು ಬಂದಿದೆ.</p>.<p>14 ವರ್ಷದ ನಂತರ ದ್ವಾರಸಮುದ್ರ ಕೆರೆ ಭರ್ತಿಯಾಗಿತ್ತು. ರಾಜಕೀಯ ಪಕ್ಷದವರು ಹಾಗೂ ಸಂಘ ಸಂಸ್ಥೆಯವರು ಪೈಪೋಟಿಯಲ್ಲಿ ವೈಭವದಿಂದ ಗಂಗಾಪೂಜೆ ನೆರವೇರಿಸಿದ್ದರು. ಸ್ವಲ್ಪ ದಿನದಲ್ಲಿಯೇ ಕೆರೆ ಏರಿ ಜಖಂ ಆಗಿತು. ಏರಿ ದುರಸ್ತಿಗಾಗಿ ಕೋಡಿಯಿಂದ ನೀರನ್ನು ಹೊರ ತೆಗೆಯಲಾಯಿತು.</p>.<p>ಅಪರೂಪಕ್ಕೆ ಭರ್ತಿಯಾದ ಕೆರೆ ನೀರನ್ನು ಹೊರ ಹಾಕಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಕೆರೆ ನೀರನ್ನು ಹೊರ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಪ್ರತಿಭಟನೆ ಸಹ ನಡೆಸಿದ್ದರು.</p>.<p>ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ, ಶಾಸಕ ಕೆ.ಎಸ್.ಲಿಂಗೇಶ್, ಜಿಲ್ಲಾಧಿಕಾರಿ ಆರ್.ಗಿರೀಶ್ ಮೊದಲಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರತಿಭಟನಾನಿರತರಿಂದ ಸಮಾಧಾನ ಹೇಳಿ ಏರಿ ದುರಸ್ತಿ ಮಾಡಿಸಲಾಯಿತು. ಏರಿ ಬಂದೋಬಸ್ತ್ ಆಗಿ ದುರಸ್ತಿಯಾಗಿರುವುದರಿಂದ ಈ ವರ್ಷ ಕೆರೆಯಲ್ಲಿ ನೀರು ನಿಲ್ಲುತ್ತದೆ ಎಂಬ ಸಮಾಧಾನದ ಮಾತು ಜನರಿಂದ ಕೇಳಿ ಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳೇಬೀಡು: </strong>ಐತಿಹಾಸಿಕ ಮಹತ್ವ ಹೊಂದಿರುವ ಹಳೇಬೀಡಿನ ದ್ವಾರಸಮುದ್ರ ಕೆರೆ ಶುಕ್ರವಾರ ಮಧ್ಯರಾತ್ರಿ ಕೋಡಿ ಬಿದ್ದಿದ್ದು ಜನರಲ್ಲಿ ಸಂಭ್ರಮ ಕಂಡು ಬಂತು.</p>.<p>ಹಾಸನ ಜಿಲ್ಲೆಯಲ್ಲಿಯೇ ದ್ವಾರಸಮುದ್ರ ಕೆರೆ ದೊಡ್ಡದಾಗಿದೆ. ಅಲ್ಲದೆ ಹತ್ತಾರು ಕಿ.ಮೀ. ದೂರದವರೆಗೂ ಅಂತರ್ಜಲ ವೃದ್ಧಿಸುತ್ತಿದೆ. ಹೀಗಾಗಿ ದ್ವಾರಸಮುದ್ರ ಕೆರೆ ಭರ್ತಿಯಾಗಿರುವುದರಿಂದ ಸುತ್ತಮುತ್ತಲಿನ ಊರಿನ ಜನರಲ್ಲಿಯೂ ಸಂತಸ ಕಂಡು ಬಂದಿದೆ.</p>.<p>14 ವರ್ಷದ ನಂತರ ದ್ವಾರಸಮುದ್ರ ಕೆರೆ ಭರ್ತಿಯಾಗಿತ್ತು. ರಾಜಕೀಯ ಪಕ್ಷದವರು ಹಾಗೂ ಸಂಘ ಸಂಸ್ಥೆಯವರು ಪೈಪೋಟಿಯಲ್ಲಿ ವೈಭವದಿಂದ ಗಂಗಾಪೂಜೆ ನೆರವೇರಿಸಿದ್ದರು. ಸ್ವಲ್ಪ ದಿನದಲ್ಲಿಯೇ ಕೆರೆ ಏರಿ ಜಖಂ ಆಗಿತು. ಏರಿ ದುರಸ್ತಿಗಾಗಿ ಕೋಡಿಯಿಂದ ನೀರನ್ನು ಹೊರ ತೆಗೆಯಲಾಯಿತು.</p>.<p>ಅಪರೂಪಕ್ಕೆ ಭರ್ತಿಯಾದ ಕೆರೆ ನೀರನ್ನು ಹೊರ ಹಾಕಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಕೆರೆ ನೀರನ್ನು ಹೊರ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಪ್ರತಿಭಟನೆ ಸಹ ನಡೆಸಿದ್ದರು.</p>.<p>ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ, ಶಾಸಕ ಕೆ.ಎಸ್.ಲಿಂಗೇಶ್, ಜಿಲ್ಲಾಧಿಕಾರಿ ಆರ್.ಗಿರೀಶ್ ಮೊದಲಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರತಿಭಟನಾನಿರತರಿಂದ ಸಮಾಧಾನ ಹೇಳಿ ಏರಿ ದುರಸ್ತಿ ಮಾಡಿಸಲಾಯಿತು. ಏರಿ ಬಂದೋಬಸ್ತ್ ಆಗಿ ದುರಸ್ತಿಯಾಗಿರುವುದರಿಂದ ಈ ವರ್ಷ ಕೆರೆಯಲ್ಲಿ ನೀರು ನಿಲ್ಲುತ್ತದೆ ಎಂಬ ಸಮಾಧಾನದ ಮಾತು ಜನರಿಂದ ಕೇಳಿ ಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>