ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ, ಶಾಸಕ ಕೆ.ಎಸ್.ಲಿಂಗೇಶ್, ಜಿಲ್ಲಾಧಿಕಾರಿ ಆರ್.ಗಿರೀಶ್ ಮೊದಲಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರತಿಭಟನಾನಿರತರಿಂದ ಸಮಾಧಾನ ಹೇಳಿ ಏರಿ ದುರಸ್ತಿ ಮಾಡಿಸಲಾಯಿತು. ಏರಿ ಬಂದೋಬಸ್ತ್ ಆಗಿ ದುರಸ್ತಿಯಾಗಿರುವುದರಿಂದ ಈ ವರ್ಷ ಕೆರೆಯಲ್ಲಿ ನೀರು ನಿಲ್ಲುತ್ತದೆ ಎಂಬ ಸಮಾಧಾನದ ಮಾತು ಜನರಿಂದ ಕೇಳಿ ಬರುತ್ತಿದೆ.