<p><strong>ಆನವಟ್ಟಿ</strong>: ಸಮೀಪದ ತಿಮ್ಮಾಪುರ ಗ್ರಾಮದ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿಗೆ ಪದೇ-ಪದೇ ನಾಗರ ಹಾವೊಂದು ಬರುತ್ತಿದ್ದು, ಮಕ್ಕಳು ಹಾಗೂ ಅಂಗನವಾಡಿ ಸಿಬ್ಬಂದಿ ಆತಂಕದಲ್ಲಿ ಕಾಲಕಳೆಯುವಂತಾಗಿದೆ.</p>.<p>ಸೋಮವಾರ ಕಟ್ಟಡದ ಚಾವಣಿಯಿಂದ ದೊಡ್ಡಗಾತ್ರದ ನಾಗರ ಹಾವು ಗೋಡೆ ಮೇಲಿಂದ ಇಳಿಯುತ್ತಿದ್ದುದನ್ನು ನೋಡಿ ಮಕ್ಕಳು ಭಯಪಟ್ಟಿದ್ದಾರೆ. ತಕ್ಷಣ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಮಕ್ಕಳನ್ನು ಮನೆಗೆ ಕಳುಹಿಸಿದರು. ಇದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ.</p>.<p>ಹಳೆ ಕಟ್ಟಡವಾದ ಕಾರಣ ಇಲಿಗಳು ಇದ್ದು, ಅವುಗಳಿಗಾಗಿ ನಾಗರ ಹಾವು ಆಗಾಗ ಬರುತ್ತದೆ.ನೂತನ ಕಟ್ಟಡ ಸಿದ್ಧವಾಗಿದ್ದು, ತಕ್ಷಣ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನೂತನ ಕಟ್ಟಡದಲ್ಲೇ ಅಂಗನವಾಡಿ ಪ್ರಾರಂಭಿಸಬೇಕು. ಹಳೆಯ ಕಟ್ಟಡವನ್ನು ನೆಲಸಮ ಮಾಡಲು ಕ್ರಮಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.</p>.<p>‘ಸದ್ಯ ಅಂಗನವಾಡಿ ಉದ್ಘಾಟನೆ ಆಗುವವರೆಗೂ ಕಾಯುವುದು ಬೇಡ. ಅಧಿಕಾರಿಗಳು, ಸ್ಥಳೀಯ ಮುಖಂಡರ ಸಲಹೆ ಪಡೆದು ನೂತನ ಕಟ್ಟಡದಲ್ಲೇ ಅಂಗನವಾಡಿ ಪ್ರಾರಂಭಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ’ ಎಂದು ಅಂಗನವಾಡಿ ಶಿಕ್ಷಕಿ ಲಕ್ಷ್ಮೀ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನವಟ್ಟಿ</strong>: ಸಮೀಪದ ತಿಮ್ಮಾಪುರ ಗ್ರಾಮದ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿಗೆ ಪದೇ-ಪದೇ ನಾಗರ ಹಾವೊಂದು ಬರುತ್ತಿದ್ದು, ಮಕ್ಕಳು ಹಾಗೂ ಅಂಗನವಾಡಿ ಸಿಬ್ಬಂದಿ ಆತಂಕದಲ್ಲಿ ಕಾಲಕಳೆಯುವಂತಾಗಿದೆ.</p>.<p>ಸೋಮವಾರ ಕಟ್ಟಡದ ಚಾವಣಿಯಿಂದ ದೊಡ್ಡಗಾತ್ರದ ನಾಗರ ಹಾವು ಗೋಡೆ ಮೇಲಿಂದ ಇಳಿಯುತ್ತಿದ್ದುದನ್ನು ನೋಡಿ ಮಕ್ಕಳು ಭಯಪಟ್ಟಿದ್ದಾರೆ. ತಕ್ಷಣ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಮಕ್ಕಳನ್ನು ಮನೆಗೆ ಕಳುಹಿಸಿದರು. ಇದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ.</p>.<p>ಹಳೆ ಕಟ್ಟಡವಾದ ಕಾರಣ ಇಲಿಗಳು ಇದ್ದು, ಅವುಗಳಿಗಾಗಿ ನಾಗರ ಹಾವು ಆಗಾಗ ಬರುತ್ತದೆ.ನೂತನ ಕಟ್ಟಡ ಸಿದ್ಧವಾಗಿದ್ದು, ತಕ್ಷಣ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನೂತನ ಕಟ್ಟಡದಲ್ಲೇ ಅಂಗನವಾಡಿ ಪ್ರಾರಂಭಿಸಬೇಕು. ಹಳೆಯ ಕಟ್ಟಡವನ್ನು ನೆಲಸಮ ಮಾಡಲು ಕ್ರಮಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.</p>.<p>‘ಸದ್ಯ ಅಂಗನವಾಡಿ ಉದ್ಘಾಟನೆ ಆಗುವವರೆಗೂ ಕಾಯುವುದು ಬೇಡ. ಅಧಿಕಾರಿಗಳು, ಸ್ಥಳೀಯ ಮುಖಂಡರ ಸಲಹೆ ಪಡೆದು ನೂತನ ಕಟ್ಟಡದಲ್ಲೇ ಅಂಗನವಾಡಿ ಪ್ರಾರಂಭಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ’ ಎಂದು ಅಂಗನವಾಡಿ ಶಿಕ್ಷಕಿ ಲಕ್ಷ್ಮೀ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>