<p>‘ಪೀಕಬೂ’ ಚಿತ್ರದಲ್ಲಿ ಅಮೂಲ್ಯ ಅವರು ನಾಯಕಿಯಾಗಿ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಕೆಲವು ತಿಂಗಳ ಹಿಂದೆ ಖಚಿತಪಡಿಸಿತ್ತು. ಆದರೆ ಈ ಚಿತ್ರದ ನಾಯಕನ ಬಗ್ಗೆ ಎಲ್ಲೂ ಹೇಳಿರಲಿಲ್ಲ. ಈಗ ಈ ಚಿತ್ರದ ನಾಯಕನನ್ನು ಪರಿಚಯಿಸಲಾಗಿದೆ.</p><p>‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಖ್ಯಾತಿಯ ಶ್ರೀರಾಮ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಈ ಬಗ್ಗೆ ಕೆಂಚಾಂಬ ಫಿಲ್ಮ್ಸ್ ಪ್ರೊಡಕ್ಷನ್ಸ್ ಸಂಸ್ಥೆ<strong> </strong>ಸಾಮಾಜಿಕ ಮಾಧ್ಯಮದಲ್ಲಿ<a href="https://www.instagram.com/reel/DThNlndjBj6/?utm_source=ig_web_copy_link"> ‘ನಾಯಕನ ಅನಾವರಣ ಟೀಸರ್’ </a>ಎಂದು ಬರೆದುಕೊಂಡು ವಿಡಿಯೊ ಹಂಚಿಕೊಂಡಿದೆ. </p>.<p>ಈ ವಿಡಿಯೊದಲ್ಲಿ ಅಮೂಲ್ಯ ಅವರು ಈ ಹಿಂದೆ ಚಂದವನದ ತಾರೆಯರಾದ ಗಣೇಶ್, ಯಶ್, ಅಜಯ್, ದುನಿಯಾ ವಿಜಯ್ ಸೇರಿ ಅನೇಕ ನಟರ ಜೊತೆ ನಟಿಸಿದ್ದ ಚಿತ್ರಗಳ ಸಣ್ಣ ತುಣುಕುಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಆದರೆ ‘ಪೀಕಬೂ’ ಚಿತ್ರದಲ್ಲಿ ಈ ನಟರು ಇರುವುದಿಲ್ಲ. ಅದರ ಬದಲಾಗಿ ಶ್ರೀರಾಮ್ ಅವರು ನಟಿಸುತ್ತಿದ್ದಾರೆಂದು ಚಿತ್ರತಂಡ ನಾಯಕನ ಪರಿಚಯ ಮಾಡಿದೆ. </p>.ಎಂಟು ವರ್ಷಗಳ ವಿರಾಮದ ಬಳಿಕ ಹೊಸ ಅವತಾರದಲ್ಲಿ ಮತ್ತೆ ಬಂದ ಅಮೂಲ್ಯ.<p>ಈ ಚಿತ್ರಕ್ಕೆ ಮಂಜು ಸ್ವರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಗಣೇಶ್ ಕೆಂಚಾಂಬಾ ಬಂಡವಾಳ ಹೂಡಿದ್ದಾರೆ. </p><p>ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು ಅಮೂಲ್ಯ, ‘ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ಮೊದಲು ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ‘ಮಳೆಯಲಿ ಜೊತೆಯಲಿ’, ‘ಗಜಕೇಸರಿ’, ‘ಶ್ರಾವಣಿ ಸುಬ್ರಮಣ್ಯ’ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.</p><p>ಎಂಟು ವರ್ಷದ ವಿರಾಮದ ಬಳಿಕ ಅಮೂಲ್ಯ ಅವರು ‘ಪೀಕಬೂ’ ಚಿತ್ರದ ಮೂಲಕ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಪೀಕಬೂ’ ಚಿತ್ರದಲ್ಲಿ ಅಮೂಲ್ಯ ಅವರು ನಾಯಕಿಯಾಗಿ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಕೆಲವು ತಿಂಗಳ ಹಿಂದೆ ಖಚಿತಪಡಿಸಿತ್ತು. ಆದರೆ ಈ ಚಿತ್ರದ ನಾಯಕನ ಬಗ್ಗೆ ಎಲ್ಲೂ ಹೇಳಿರಲಿಲ್ಲ. ಈಗ ಈ ಚಿತ್ರದ ನಾಯಕನನ್ನು ಪರಿಚಯಿಸಲಾಗಿದೆ.</p><p>‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಖ್ಯಾತಿಯ ಶ್ರೀರಾಮ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಈ ಬಗ್ಗೆ ಕೆಂಚಾಂಬ ಫಿಲ್ಮ್ಸ್ ಪ್ರೊಡಕ್ಷನ್ಸ್ ಸಂಸ್ಥೆ<strong> </strong>ಸಾಮಾಜಿಕ ಮಾಧ್ಯಮದಲ್ಲಿ<a href="https://www.instagram.com/reel/DThNlndjBj6/?utm_source=ig_web_copy_link"> ‘ನಾಯಕನ ಅನಾವರಣ ಟೀಸರ್’ </a>ಎಂದು ಬರೆದುಕೊಂಡು ವಿಡಿಯೊ ಹಂಚಿಕೊಂಡಿದೆ. </p>.<p>ಈ ವಿಡಿಯೊದಲ್ಲಿ ಅಮೂಲ್ಯ ಅವರು ಈ ಹಿಂದೆ ಚಂದವನದ ತಾರೆಯರಾದ ಗಣೇಶ್, ಯಶ್, ಅಜಯ್, ದುನಿಯಾ ವಿಜಯ್ ಸೇರಿ ಅನೇಕ ನಟರ ಜೊತೆ ನಟಿಸಿದ್ದ ಚಿತ್ರಗಳ ಸಣ್ಣ ತುಣುಕುಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಆದರೆ ‘ಪೀಕಬೂ’ ಚಿತ್ರದಲ್ಲಿ ಈ ನಟರು ಇರುವುದಿಲ್ಲ. ಅದರ ಬದಲಾಗಿ ಶ್ರೀರಾಮ್ ಅವರು ನಟಿಸುತ್ತಿದ್ದಾರೆಂದು ಚಿತ್ರತಂಡ ನಾಯಕನ ಪರಿಚಯ ಮಾಡಿದೆ. </p>.ಎಂಟು ವರ್ಷಗಳ ವಿರಾಮದ ಬಳಿಕ ಹೊಸ ಅವತಾರದಲ್ಲಿ ಮತ್ತೆ ಬಂದ ಅಮೂಲ್ಯ.<p>ಈ ಚಿತ್ರಕ್ಕೆ ಮಂಜು ಸ್ವರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಗಣೇಶ್ ಕೆಂಚಾಂಬಾ ಬಂಡವಾಳ ಹೂಡಿದ್ದಾರೆ. </p><p>ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು ಅಮೂಲ್ಯ, ‘ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ಮೊದಲು ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ‘ಮಳೆಯಲಿ ಜೊತೆಯಲಿ’, ‘ಗಜಕೇಸರಿ’, ‘ಶ್ರಾವಣಿ ಸುಬ್ರಮಣ್ಯ’ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.</p><p>ಎಂಟು ವರ್ಷದ ವಿರಾಮದ ಬಳಿಕ ಅಮೂಲ್ಯ ಅವರು ‘ಪೀಕಬೂ’ ಚಿತ್ರದ ಮೂಲಕ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>