ಲೈಟ್ ಫಿಶಿಂಗ್ ಹಾಗೂ ಬುಲ್ಟ್ರಾಲಿಂಗ್ ಪದ್ಧತಿಗೆ ನಮ್ಮಲ್ಲಿ ನಿಷೇಧ ಇದೆ. ಆದರೂ, ಅದು ನಡೆಯುತ್ತಲೇ ಇದೆ. ಮೀನುಗಾರಿಕೆ ಇಲಾಖೆಯವರು ಕ್ರಮ ತೆಗೆದುಕೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ. ಕರಾವಳಿಯಲ್ಲಿ ಅಂದಾಜು ಒಂದು ಲಕ್ಷ ಕುಟುಂಬಗಳು ನಾಡದೋಣಿ ಮೀನುಗಾರಿಕೆಯನ್ನೇ ನಂಬಿವೆ. ಅಕ್ರಮ ಮೀನುಗಾರಿಕೆಯು ಇವರೆಲ್ಲರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಮೀನುಗಾರರು ಆಪಾದಿಸುತ್ತಾರೆ.
ಮಂಗಳೂರಿನ ಚಿತ್ರಾಪುರ ಬೀಚ್ನಲ್ಲಿ ನಾಡದೋಣಿ ಮೀನುಗಾರರು ತಮಗೆ ಸಿಕ್ಕಿ ಸ್ವಲ್ಪ ಮೀನುಗಳನ್ನು ಟ್ರೇಯಲ್ಲಿ ತುಂಬಿರುವುದು
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ಮಂಗಳೂರು ಬಳಿಯ ಸುರತ್ಕಲ್ ಲೈಟ್ಹೌಸ್ ಬಳಿ ನಾಡದೋಣಿ ಮೀನುಗಾರರು ತಮಗೆ ಸಿಕ್ಕ ಸ್ವಲ್ಪವೇ ಮೀನುಗಳನ್ನು ಬೆಲೆಯಿಂದ ತೆಗೆಯುತ್ತಿರುವುದು
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ಮಂಗಳೂರಿನ ಚಿತ್ರಾಪುರ ಬೀಚ್ನಲ್ಲಿ ನಾಡದೋಣಿ ಮೀನುಗಾರರು ದೋಣಿಗಳನ್ನು ದಡಕ್ಕೆ ಎಳೆದು ತರುತ್ತಿರುವುದು
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ನಾಡದೋಣಿ ಮೀನುಗಾರರ ಅನುಕೂಲಕ್ಕಾಗಿ ಕೃತಕ ಬಂಡೆ ಅಳವಡಿಸುವ ಯೋಜನೆಯನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದೇವೆ. ಬೆಳಕಿನ ಮೀನುಗಾರಿಕೆ ನಿಷೇಧ ಅಕ್ಕಪಕ್ಕದ ರಾಜ್ಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸಿಲ್ಲ. ರಾಜ್ಯದ ಸಮುದ್ರ ಗಡಿಯಲ್ಲಿ ಅನ್ಯ ರಾಜ್ಯದವರಿಂದ ಬೆಳಕಿನ ಮೀನುಗಾರಿಕೆ ನಡೆಯುತ್ತಿರುವ ಕಾರಣ ಸಮಸ್ಯೆ ಉಂಟಾಗಿದೆ.-ಮಂಕಾಳ ವೈದ್ಯ, ಮೀನುಗಾರಿಕೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.