<p><strong>ಪಟ್ನಾ:</strong> ಬಿಹಾರ ವಿಧಾನಸಭಾ ಚುನಾವಣೆಗೆ ಎರಡು ವಾರಗಳಷ್ಟೇ ಬಾಕಿ ಇದ್ದು ವಿವಿಧ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸಗೊಂಡಿವೆ.</p>.<p>ಆಕ್ಟೋಬರ್ 28ರಂದು ಮೊದಲ ಹಂತದ ಮತದಾನ ನಡೆಯಲಿದೆ. ನಕ್ಸಲ್ ಪ್ರಾಬಲ್ಯವಿರುವ ಜಿಲ್ಲೆಗಳ ಒಟ್ಟು 71 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಔರಂಗಾಬಾದ್, ಗಯಾ, ನವಾಡಾ, ಮುಂಗೇರ್, ಲಖಿಸರಾಯ್, ಜಮುಯಿ, ಬಂಕಾ, ರೋಹ್ಟಾಸ್ ಮತ್ತು ಜೆಹಾನಾಬಾದ್ ಜಿಲ್ಲೆಗಳಲ್ಲಿ ಮಾವೋವಾದಿಗಳ ಪ್ರಾಬಲ್ಯ ಹೆಚ್ಚಿದೆ. ಈ ಜಿಲ್ಲೆಗಳಲ್ಲಿನ ಭದ್ರತೆಯು ಸವಾಲಿನ ಕೆಲಸ ಎನ್ನುತ್ತಾರೆ ಸ್ಥಳೀಯ ಪೊಲೀಸರು.</p>.<p>ಮೊದಲ ಹಂತದ ಟ್ರೆಂಡಿಂಗ್ ಗಮನಿಸಿದರೆ ಮಹಾಮೈತ್ರಿಗೆ ಅನುಕೂಲತೆ ಹೆಚ್ಚಿದೆ ಎನ್ನಲಾಗುತ್ತಿದೆ. ಆರ್ಜೆಡಿ ನೇತೃತ್ವದ ‘ಮಹಾಮೈತ್ರಿ’ಯಲ್ಲಿ ಕಾಂಗ್ರೆಸ್, ಎಡಪಕ್ಷಗಳು ಸೇರಿವೆ. ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈ ಭಾಗದಲ್ಲಿ ಪ್ರಾಬಲ್ಯ ಸಾಧಿಸುವ ಕುರುಹು ವ್ಯಕ್ತವಾಗಿದೆ. ಸುಮಾರು 40 ಸ್ಥಾನಗಳಲ್ಲಿ ಮಹಾಮೈತ್ರಿ ಗೆಲುವು ಸಾಧಿಸಲಿದೆ ಎಂದು ಚುನಾವಣೆ ಪೂರ್ವ ಸಮೀಕ್ಷೆಗಳು ಹೇಳಿವೆ.</p>.<p>ಇಲ್ಲಿ ಬಿಜೆಪಿ ಮಂಕಾಗಿದ್ದು ಜೆಡಿಯು ಮಹಾಮೈತ್ರಿಗೆ ಪ್ರಬಲ ಪೈಪೋಟಿ ನೀಡಲಿದೆ. ಕಳೆದ ಸಲದ ಚುನಾವಣೆಯಲ್ಲಿ ಈ ಭಾಗದಲ್ಲಿ ಮಹಾಮೈತ್ರಿ ಹೆಚ್ಚು ಸ್ಥಾನಗಳನ್ನು ಪಡೆದಿತ್ತು. ಎಡ ಪಕ್ಷಗಳಿಗೆ ನಿರೀಕ್ಷಿತ ಜಯ ಲಭ್ಯವಾಗಲಿಲ್ಲ. ಎಡ ಪಕ್ಷಗಳು ಜೆಡಿಯು ಎದುರು ಸೋತಿದ್ದು ವಿಶೇಷ.</p>.<p>ಲೋಕಜನಶಕ್ತಿ ಪಕ್ಷದ (ಎಲ್ಜೆಪಿ) ನಾಯಕ ಹಾಗೂ ಕೇಂದ್ರದ ಸಚಿವ ರಾಮ್ವಿಲಾಸ್ ಪಾಸ್ವಾನ್ ಅವರು ನಿಧನರಾಗಿರುವುದು ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಎಲ್ಜೆಪಿ ಎಷ್ಟೇ ಸ್ಥಾನಗಳನ್ನು ಪಡೆದರು ಅವು ಬಿಜೆಪಿಗೆ ಪ್ಲಸ್ ಎನ್ನಲಾಗುತ್ತಿದೆ.</p>.<p><strong>ಮತ ಬ್ಯಾಂಕ್</strong></p>.<p>70–80ರ ದಶಕದಲ್ಲಿ ಪ್ರಬಲ ಪಕ್ಷವಾಗಿದ್ದ ಕಾಂಗ್ರೆಸ್ ಸದ್ಯ ಪ್ರಾದೇಶಿಕ ಪಕ್ಷಗಳ ಬಲವನ್ನು ನೆಚ್ಚಿಕೊಂಡು ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದೆ. ಸಂಪ್ರಾದಾಯಿಕ ಮುಸ್ಲಿಂ, ದಲಿತ ಹಾಗೂ ಹಿಂದುಳಿದ ವರ್ಗಗಳ ಬೆಂಬಲವನ್ನು ಈಗಲೂ ನೆಚ್ಚಿಕೊಂಡಿದೆ.</p>.<p>ಬನಿಯಾ ಸಮುದಾಯವು ಬಿಜೆಪಿಗೆ ಬಲ ತಂದುಕೊಡಲಿದೆ. ಇನ್ನು ನಿತೀಶ್ ಕುಮಾರ್ ಅವರ ಜೆಡಿಯುಗೆ ಯಾದವೇತರ ಸಮುದಾಯದವರ ಬೆಂಬಲ ಹೆಚ್ಚಾಗಿದೆ. ಅದರಲ್ಲಿ ಇತರ ಹಿಂದುಳಿದ ವರ್ಗದವರು, ಕುರ್ಮಿ, ಕೊಯಿರಿ ಮುಂತಾದ ಅತ್ಯಂತ ಹಿಂದುಳಿದ ವರ್ಗದವರು ಸೇರಿದ್ದಾರೆ.</p>.<p>ಲಾಲು ಪ್ರಸಾದ್ ನೇತೃತ್ವದ ಆರ್ಜೆಡಿಯು ಮುಸ್ಲಿಂ ಹಾಗೂ ಯಾದವ ಸಮುದಾಯದವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.</p>.<p>ಒಟ್ಟಾರೆ ಆರಂಭಿಕ ಟ್ರೆಂಡ್ ಎನ್ಡಿಎ ಕಡೆ ವಾಲಿದೆ. ಆಡಳಿತ ವಿರೋಧಿ ಅಲೆ ಹಾಗೂ ಕೊರೊನಾ ವೈರಸ್ ನಿರ್ವಹಣೆಯಲ್ಲಿ ವೈಫಲ್ಯತೆ ಮಹಾಮೈತ್ರಿಗೆ ಗೆಲುವು ತಂದುಕೊಟ್ಟರು ಅಚ್ಚರಿ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ:</strong> ಬಿಹಾರ ವಿಧಾನಸಭಾ ಚುನಾವಣೆಗೆ ಎರಡು ವಾರಗಳಷ್ಟೇ ಬಾಕಿ ಇದ್ದು ವಿವಿಧ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸಗೊಂಡಿವೆ.</p>.<p>ಆಕ್ಟೋಬರ್ 28ರಂದು ಮೊದಲ ಹಂತದ ಮತದಾನ ನಡೆಯಲಿದೆ. ನಕ್ಸಲ್ ಪ್ರಾಬಲ್ಯವಿರುವ ಜಿಲ್ಲೆಗಳ ಒಟ್ಟು 71 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಔರಂಗಾಬಾದ್, ಗಯಾ, ನವಾಡಾ, ಮುಂಗೇರ್, ಲಖಿಸರಾಯ್, ಜಮುಯಿ, ಬಂಕಾ, ರೋಹ್ಟಾಸ್ ಮತ್ತು ಜೆಹಾನಾಬಾದ್ ಜಿಲ್ಲೆಗಳಲ್ಲಿ ಮಾವೋವಾದಿಗಳ ಪ್ರಾಬಲ್ಯ ಹೆಚ್ಚಿದೆ. ಈ ಜಿಲ್ಲೆಗಳಲ್ಲಿನ ಭದ್ರತೆಯು ಸವಾಲಿನ ಕೆಲಸ ಎನ್ನುತ್ತಾರೆ ಸ್ಥಳೀಯ ಪೊಲೀಸರು.</p>.<p>ಮೊದಲ ಹಂತದ ಟ್ರೆಂಡಿಂಗ್ ಗಮನಿಸಿದರೆ ಮಹಾಮೈತ್ರಿಗೆ ಅನುಕೂಲತೆ ಹೆಚ್ಚಿದೆ ಎನ್ನಲಾಗುತ್ತಿದೆ. ಆರ್ಜೆಡಿ ನೇತೃತ್ವದ ‘ಮಹಾಮೈತ್ರಿ’ಯಲ್ಲಿ ಕಾಂಗ್ರೆಸ್, ಎಡಪಕ್ಷಗಳು ಸೇರಿವೆ. ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈ ಭಾಗದಲ್ಲಿ ಪ್ರಾಬಲ್ಯ ಸಾಧಿಸುವ ಕುರುಹು ವ್ಯಕ್ತವಾಗಿದೆ. ಸುಮಾರು 40 ಸ್ಥಾನಗಳಲ್ಲಿ ಮಹಾಮೈತ್ರಿ ಗೆಲುವು ಸಾಧಿಸಲಿದೆ ಎಂದು ಚುನಾವಣೆ ಪೂರ್ವ ಸಮೀಕ್ಷೆಗಳು ಹೇಳಿವೆ.</p>.<p>ಇಲ್ಲಿ ಬಿಜೆಪಿ ಮಂಕಾಗಿದ್ದು ಜೆಡಿಯು ಮಹಾಮೈತ್ರಿಗೆ ಪ್ರಬಲ ಪೈಪೋಟಿ ನೀಡಲಿದೆ. ಕಳೆದ ಸಲದ ಚುನಾವಣೆಯಲ್ಲಿ ಈ ಭಾಗದಲ್ಲಿ ಮಹಾಮೈತ್ರಿ ಹೆಚ್ಚು ಸ್ಥಾನಗಳನ್ನು ಪಡೆದಿತ್ತು. ಎಡ ಪಕ್ಷಗಳಿಗೆ ನಿರೀಕ್ಷಿತ ಜಯ ಲಭ್ಯವಾಗಲಿಲ್ಲ. ಎಡ ಪಕ್ಷಗಳು ಜೆಡಿಯು ಎದುರು ಸೋತಿದ್ದು ವಿಶೇಷ.</p>.<p>ಲೋಕಜನಶಕ್ತಿ ಪಕ್ಷದ (ಎಲ್ಜೆಪಿ) ನಾಯಕ ಹಾಗೂ ಕೇಂದ್ರದ ಸಚಿವ ರಾಮ್ವಿಲಾಸ್ ಪಾಸ್ವಾನ್ ಅವರು ನಿಧನರಾಗಿರುವುದು ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಎಲ್ಜೆಪಿ ಎಷ್ಟೇ ಸ್ಥಾನಗಳನ್ನು ಪಡೆದರು ಅವು ಬಿಜೆಪಿಗೆ ಪ್ಲಸ್ ಎನ್ನಲಾಗುತ್ತಿದೆ.</p>.<p><strong>ಮತ ಬ್ಯಾಂಕ್</strong></p>.<p>70–80ರ ದಶಕದಲ್ಲಿ ಪ್ರಬಲ ಪಕ್ಷವಾಗಿದ್ದ ಕಾಂಗ್ರೆಸ್ ಸದ್ಯ ಪ್ರಾದೇಶಿಕ ಪಕ್ಷಗಳ ಬಲವನ್ನು ನೆಚ್ಚಿಕೊಂಡು ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದೆ. ಸಂಪ್ರಾದಾಯಿಕ ಮುಸ್ಲಿಂ, ದಲಿತ ಹಾಗೂ ಹಿಂದುಳಿದ ವರ್ಗಗಳ ಬೆಂಬಲವನ್ನು ಈಗಲೂ ನೆಚ್ಚಿಕೊಂಡಿದೆ.</p>.<p>ಬನಿಯಾ ಸಮುದಾಯವು ಬಿಜೆಪಿಗೆ ಬಲ ತಂದುಕೊಡಲಿದೆ. ಇನ್ನು ನಿತೀಶ್ ಕುಮಾರ್ ಅವರ ಜೆಡಿಯುಗೆ ಯಾದವೇತರ ಸಮುದಾಯದವರ ಬೆಂಬಲ ಹೆಚ್ಚಾಗಿದೆ. ಅದರಲ್ಲಿ ಇತರ ಹಿಂದುಳಿದ ವರ್ಗದವರು, ಕುರ್ಮಿ, ಕೊಯಿರಿ ಮುಂತಾದ ಅತ್ಯಂತ ಹಿಂದುಳಿದ ವರ್ಗದವರು ಸೇರಿದ್ದಾರೆ.</p>.<p>ಲಾಲು ಪ್ರಸಾದ್ ನೇತೃತ್ವದ ಆರ್ಜೆಡಿಯು ಮುಸ್ಲಿಂ ಹಾಗೂ ಯಾದವ ಸಮುದಾಯದವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.</p>.<p>ಒಟ್ಟಾರೆ ಆರಂಭಿಕ ಟ್ರೆಂಡ್ ಎನ್ಡಿಎ ಕಡೆ ವಾಲಿದೆ. ಆಡಳಿತ ವಿರೋಧಿ ಅಲೆ ಹಾಗೂ ಕೊರೊನಾ ವೈರಸ್ ನಿರ್ವಹಣೆಯಲ್ಲಿ ವೈಫಲ್ಯತೆ ಮಹಾಮೈತ್ರಿಗೆ ಗೆಲುವು ತಂದುಕೊಟ್ಟರು ಅಚ್ಚರಿ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>