ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು, ‘ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸಿದಾಗ ಕೇಂದ್ರ ಸರ್ಕಾರವು ಎಂದಿಗೂ ರಾಜ್ಯಗಳೊಂದಿಗೆ ಸಮಾಲೋಚಿಸಲಿಲ್ಲ. ಈ ಹಿಂದೆ 2021ರ ನವೆಂಬರ್ನಲ್ಲಿ ಕೇಂದ್ರ ಸರ್ಕಾರವು ಘೋಷಿಸಿದ ತೆರಿಗೆ ಕಡಿತದಿಂದಾಗಿ ಈಗಾಗಲೇ ₹1,000 ಕೋಟಿ ನಷ್ಟವನ್ನು ಅನುಭವಿಸಲಾಗಿದೆ. ಶನಿವಾರ ಘೋಷಿಸಿದ ತೆರಿಗೆ ಕಡಿತದ ಹೊರತಾಗಿಯೂ, 2014 ಕ್ಕೆ ಹೋಲಿಸಿದರೆ ದರಗಳು ಇನ್ನೂ ಹೆಚ್ಚಿವೆ’ ಎಂದು ಹೇಳಿದ್ದಾರೆ.