<p><strong>ನವದೆಹಲಿ</strong>: ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ನೇಮಕ ವಿಚಾರವನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ದೇಶದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕಿಡಿಕಾರಿದ್ದಾರೆ.</p><p>ಅತ್ಯಂತ ಹಿರಿಯ ಸಂಸದರನ್ನು ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಕೇರಳದ ಮಾವೇಲಿಕ್ಕರ ಕ್ಷೇತ್ರದಿಂದ 8 ಬಾರಿ ಚುನಾಯಿತರಾಗಿರುವ ಕಾಂಗ್ರೆಸ್ ಸಂಸದ ಕೋಡಿಕ್ಕುನ್ನಿಲ್ ಸುರೇಶ್ ಅವರನ್ನು ಕಡೆಗಣಿಸಿ, ಬಿಜೆಪಿಯ ಭರ್ತೃಹರಿ ಮಹ್ತಬ್ ಅವರನ್ನು ನೇಮಕ ಮಾಡಲಾಗಿದೆ. ಆ ಮೂಲಕ ದಲಿತ ನಾಯಕನಿಗೆ ಇದ್ದ ಅವಕಾಶವನ್ನು ಬಿಜೆಪಿ ಕಸಿದುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.</p><p>ಹಂಗಾಮಿ ಸಭಾಧ್ಯಕ್ಷರ ನೇಮಕ ವಿಚಾರದಲ್ಲಿ ಬಿಜೆಪಿ ನಾಯಕತ್ವವು ಸಂಸತ್ತಿನ ಸಂಪ್ರದಾಯವನ್ನು ಮುರಿದಿದೆ. ಸುರೇಶ್ ಅವರನ್ನು ನೇಮಕ ಮಾಡದ್ದಕ್ಕೆ ಸಂಘ ಪರಿವಾರದ ಮೇಲ್ಜಾತಿ ರಾಜಕಾರಣ ಕಾರಣವೇ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ.</p><p>ಇದಕ್ಕೆ ಪ್ರತಿಕ್ರಿಯಿಸಿರುವ ರಿಜಿಜು, ರಾಷ್ಟ್ರಪತಿಯವರು 7 ಬಾರಿಯ ಸಂಸದ ಭರ್ತೃಹರಿ ಅವರನ್ನು ನೇಮಕ ಮಾಡುವ ಮುನ್ನ, ಹಿರಿಯ ಸಂಸದರಾದ ಸುರೇಶ್, ಸುದೀಪ್ ಬಂಡೋಪಾಧ್ಯಾಯ, ಫಗ್ಗನ್ ಸಿಂಗ್ ಕುಲಸ್ತೆ, ರಾಧಾ ಮೋಹನ್ ಸಿಂಗ್ ಮತ್ತು ಟಿ.ಆರ್. ಬಾಲು ಅವರೊಂದಿಗೆ ತಾವು ಮಾತನಾಡಿರುವುದಾಗಿ ತಿಳಿಸಿದ್ದಾರೆ.</p><p>'ಸರ್ಕಾರವು ಯಾವುದೇ ನಿಯಮವನ್ನು ಮೀರಿಲ್ಲ. ಸತತವಾಗಿ ಹೆಚ್ಚು ಸಲ ಗೆದ್ದವರನ್ನು ಈವರೆಗೆ ಆಯ್ಕೆ ಮಾಡುತ್ತಾ ಬರಲಾಗಿದೆ. ವಿರೇಂದ್ರ ಕುಮಾರ್, ಭರ್ತೃಹರಿ ಅವರು ಸತತವಾಗಿ 7 ಅವಧಿಗೆ ಜಯ ಸಾಧಿಸಿದ್ದಾರೆ. ಸುರೇಶ್ ಅವರು 2004 ಮತ್ತು 1998ರಲ್ಲಿ ಸಂಸತ್ತಿಗೆ ಆಯ್ಕೆಯಾಗಿರಲಿಲ್ಲ. ಇದು ಯಾವುದೇ ಒತ್ತಡದ ನಿರ್ಧಾರವಲ್ಲ, ಸಾಂವಿಧಾನಿಕ ನಿರ್ಧಾರ' ಎಂದು ವಿವರಿಸಿದ್ದಾರೆ.</p>.ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹ್ತಬ್ ಆಯ್ಕೆ .ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ನೇಮಕ: ಸಂಪ್ರದಾಯ ಮುರಿದ ಕೇಂದ್ರ –ಕೇರಳ ಸಿಎಂ ಕಿಡಿ.<p>ಕಾಂಗ್ರೆಸ್ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಆರೋಪಿಸಿರುವ ರಿಜಿಜು, 2004ರಲ್ಲಿ ಸೋಮನಾಥ್ ಚಟರ್ಜಿ ಅವರು ಅತ್ಯಂತ ಹಿರಿಯ ಸಂಸದರಾಗಿದ್ದರು. ಅವರು 10 ಸಲ ಸಂಸತ್ ಪ್ರವೇಶಿಸಿದ್ದರು. ಆದರೆ, ಅವರ ಬದಲು 8 ಸಲ ಸಂಸದರಾಗಿದ್ದ ಬಾಲಾಸಾಹೇಬ್ ವಿಖೆ ಪಾಟಿಲ್ ಅವರನ್ನು ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು ಎಂದು ಸ್ಮರಿಸಿದ್ದಾರೆ. ಆಗ, ಜಾರ್ಜ್ ಫರ್ನಾಂಡಿಸ್ 9 ಸಲ ಮತ್ತು ಅಟಲ್ ಬಿಹಾರಿ ವಾಯಪೇಯಿ 10 ಅವಧಿಗೆ ಸಂಸದರಾಗಿದ್ದರು. ನಿರ್ಗಮಿತ ಪ್ರಧಾನಿಯಾಗಿದ್ದ ವಾಜಪೇಯಿ ಅಥವಾ ಫರ್ನಾಂಡಿಸ್ ಅವರನ್ನೇಕೆ ಕಾಂಗ್ರೆಸ್ ನೇಮಿಸಲಿಲ್ಲ ಎಂದೂ ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ನೇಮಕ ವಿಚಾರವನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ದೇಶದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕಿಡಿಕಾರಿದ್ದಾರೆ.</p><p>ಅತ್ಯಂತ ಹಿರಿಯ ಸಂಸದರನ್ನು ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಕೇರಳದ ಮಾವೇಲಿಕ್ಕರ ಕ್ಷೇತ್ರದಿಂದ 8 ಬಾರಿ ಚುನಾಯಿತರಾಗಿರುವ ಕಾಂಗ್ರೆಸ್ ಸಂಸದ ಕೋಡಿಕ್ಕುನ್ನಿಲ್ ಸುರೇಶ್ ಅವರನ್ನು ಕಡೆಗಣಿಸಿ, ಬಿಜೆಪಿಯ ಭರ್ತೃಹರಿ ಮಹ್ತಬ್ ಅವರನ್ನು ನೇಮಕ ಮಾಡಲಾಗಿದೆ. ಆ ಮೂಲಕ ದಲಿತ ನಾಯಕನಿಗೆ ಇದ್ದ ಅವಕಾಶವನ್ನು ಬಿಜೆಪಿ ಕಸಿದುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.</p><p>ಹಂಗಾಮಿ ಸಭಾಧ್ಯಕ್ಷರ ನೇಮಕ ವಿಚಾರದಲ್ಲಿ ಬಿಜೆಪಿ ನಾಯಕತ್ವವು ಸಂಸತ್ತಿನ ಸಂಪ್ರದಾಯವನ್ನು ಮುರಿದಿದೆ. ಸುರೇಶ್ ಅವರನ್ನು ನೇಮಕ ಮಾಡದ್ದಕ್ಕೆ ಸಂಘ ಪರಿವಾರದ ಮೇಲ್ಜಾತಿ ರಾಜಕಾರಣ ಕಾರಣವೇ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ.</p><p>ಇದಕ್ಕೆ ಪ್ರತಿಕ್ರಿಯಿಸಿರುವ ರಿಜಿಜು, ರಾಷ್ಟ್ರಪತಿಯವರು 7 ಬಾರಿಯ ಸಂಸದ ಭರ್ತೃಹರಿ ಅವರನ್ನು ನೇಮಕ ಮಾಡುವ ಮುನ್ನ, ಹಿರಿಯ ಸಂಸದರಾದ ಸುರೇಶ್, ಸುದೀಪ್ ಬಂಡೋಪಾಧ್ಯಾಯ, ಫಗ್ಗನ್ ಸಿಂಗ್ ಕುಲಸ್ತೆ, ರಾಧಾ ಮೋಹನ್ ಸಿಂಗ್ ಮತ್ತು ಟಿ.ಆರ್. ಬಾಲು ಅವರೊಂದಿಗೆ ತಾವು ಮಾತನಾಡಿರುವುದಾಗಿ ತಿಳಿಸಿದ್ದಾರೆ.</p><p>'ಸರ್ಕಾರವು ಯಾವುದೇ ನಿಯಮವನ್ನು ಮೀರಿಲ್ಲ. ಸತತವಾಗಿ ಹೆಚ್ಚು ಸಲ ಗೆದ್ದವರನ್ನು ಈವರೆಗೆ ಆಯ್ಕೆ ಮಾಡುತ್ತಾ ಬರಲಾಗಿದೆ. ವಿರೇಂದ್ರ ಕುಮಾರ್, ಭರ್ತೃಹರಿ ಅವರು ಸತತವಾಗಿ 7 ಅವಧಿಗೆ ಜಯ ಸಾಧಿಸಿದ್ದಾರೆ. ಸುರೇಶ್ ಅವರು 2004 ಮತ್ತು 1998ರಲ್ಲಿ ಸಂಸತ್ತಿಗೆ ಆಯ್ಕೆಯಾಗಿರಲಿಲ್ಲ. ಇದು ಯಾವುದೇ ಒತ್ತಡದ ನಿರ್ಧಾರವಲ್ಲ, ಸಾಂವಿಧಾನಿಕ ನಿರ್ಧಾರ' ಎಂದು ವಿವರಿಸಿದ್ದಾರೆ.</p>.ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹ್ತಬ್ ಆಯ್ಕೆ .ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರ ನೇಮಕ: ಸಂಪ್ರದಾಯ ಮುರಿದ ಕೇಂದ್ರ –ಕೇರಳ ಸಿಎಂ ಕಿಡಿ.<p>ಕಾಂಗ್ರೆಸ್ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಆರೋಪಿಸಿರುವ ರಿಜಿಜು, 2004ರಲ್ಲಿ ಸೋಮನಾಥ್ ಚಟರ್ಜಿ ಅವರು ಅತ್ಯಂತ ಹಿರಿಯ ಸಂಸದರಾಗಿದ್ದರು. ಅವರು 10 ಸಲ ಸಂಸತ್ ಪ್ರವೇಶಿಸಿದ್ದರು. ಆದರೆ, ಅವರ ಬದಲು 8 ಸಲ ಸಂಸದರಾಗಿದ್ದ ಬಾಲಾಸಾಹೇಬ್ ವಿಖೆ ಪಾಟಿಲ್ ಅವರನ್ನು ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು ಎಂದು ಸ್ಮರಿಸಿದ್ದಾರೆ. ಆಗ, ಜಾರ್ಜ್ ಫರ್ನಾಂಡಿಸ್ 9 ಸಲ ಮತ್ತು ಅಟಲ್ ಬಿಹಾರಿ ವಾಯಪೇಯಿ 10 ಅವಧಿಗೆ ಸಂಸದರಾಗಿದ್ದರು. ನಿರ್ಗಮಿತ ಪ್ರಧಾನಿಯಾಗಿದ್ದ ವಾಜಪೇಯಿ ಅಥವಾ ಫರ್ನಾಂಡಿಸ್ ಅವರನ್ನೇಕೆ ಕಾಂಗ್ರೆಸ್ ನೇಮಿಸಲಿಲ್ಲ ಎಂದೂ ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>