ಚಿತ್ರಗಳಲ್ಲಿ: ಸಿಡ್ನಿಯಲ್ಲಿ ಮರುಕಳಿಸಿದ ಜನಾಂಗೀಯ ನಿಂದನೆ ಎಪಿಸೋಡ್
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪ್ರೇಕ್ಷಕ ಗ್ಯಾಲರಿಯಿಂದ ಭಾರತೀಯ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ ಎದುರಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಅಧಿಕೃತ ದೂರನ್ನು ಸಲ್ಲಿಸಿದೆ. ನಾಲ್ಕನೇ ದಿನದಾಟದಲ್ಲೂ ಮೊಹಮ್ಮದ್ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ ಪ್ರಸಂಗ ಎದುರಾಗಿತ್ತು. ಬಳಿಕ ನಾಯಕ ಅಜಿಂಕ್ಯ ರಹಾನೆ ಮುಖಾಂತರ ಅಂಪೈರ್ಗೆ ದೂರು ಸಲ್ಲಿಸಲಾಯಿತು. ತದಾ ನಂತರ ಭದ್ರತಾ ಸಿಬ್ಬಂದಿಗಳ ಸಹಾಯದೊಂದಿಗೆ ಆಪಾದಿತ ಆರು ಪ್ರೇಕ್ಷಕರನ್ನು ಗ್ಯಾಲರಿಯಿಂದ ಹೊರಹಾಕಲಾಯಿತು. ಚಿತ್ರ ಕೃಪೆ (ಎಎಫ್ಬಿ)